ನಟ ಪುನೀತ್ ರಾಜಕುಮಾರ್ ಅವರ ” ಅಂತಿಮ ದರ್ಶನ” ವೇಳೆ, ಕರ್ತವ್ಯ ನಿರ್ವಹಿಸುವಾಗ, ಅಭಿಮಾನಿಗಳ ದಟ್ಟಣೆ
ಯ ನೂಕು ನುಗ್ಗಲಿನಲ್ಲಿ ಸಿಲುಕಿ ಕಾಲು ಮುರಿತಕ್ಕೆ ಒಳಗಾದ, ಮಡಿವಾಳ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಣೇಶ್ ನಾಯಕ್, ಅವರ ಆರೋಗ್ಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ದೂರವಾಣಿ ಮೂಲಕ ಸಂಪರ್ಕಿಸಿ
ಗಣೇಶ್ ನಾಯಕ್ ರವರಿಗೆ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ , ಇಲಾಖೆಯಿಂದ ಚಿಕಿತ್ಸಾ ವೆಚ್ಚವನ್ನು ಭರಿಸುವ ಹಾಗೂ ಉನ್ನತ ಚಿಕಿತ್ಸೆ ಬೇಕಿದ್ದರೆ ಅದನ್ನೂ ಒದಗಿಸುವ ಬಗ್ಗೆ ಭರವಸೆ ನೀಡಿದರು.
ನೋವಿನಲ್ಲೂ ಕರ್ತವ್ಯ ನಿಷ್ಠೆ ಮೆರೆದ ಗಣೇಶ್ ನಾಯಕ್:
ಗಣೇಶ್ ನಾಯಕ್ ಅವರು ಮಲ್ಯ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಪ್ರಸ್ತುತ ವೆಂಕಟೇಶ್ವರ ಆಸ್ಪತ್ರೆ ಹೊಸೂರ್ ರಸ್ತೆ ಬೆಂಗಳೂರು ನಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ,,,