Thursday, May 1, 2025
Google search engine
Homeರಾಜ್ಯಹಿಜಾಬ್ ವಿಷಯದಲ್ಲಿ ಕೋಮು ಗಲಭೆ ಮಾಡಲು ಪ್ರಯತ್ನಿಸುವವರ ಮೇಲೆ ಕ್ರಮ ಜರುಗಿಸಿಲು ಹಿಂದೂ ಜನಜಾಗೃತಿ ಸಮಿತಿ...

ಹಿಜಾಬ್ ವಿಷಯದಲ್ಲಿ ಕೋಮು ಗಲಭೆ ಮಾಡಲು ಪ್ರಯತ್ನಿಸುವವರ ಮೇಲೆ ಕ್ರಮ ಜರುಗಿಸಿಲು ಹಿಂದೂ ಜನಜಾಗೃತಿ ಸಮಿತಿ ಆಗ್ರಹ..!

ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಹಿಜಾಬ್ ವಿಷಯದಲ್ಲಿ ವಿವಾದ ಶುರುವಾಗಿದ್ದು, ಇದೀಗ ಹಿಜಾಬ್ ವಿಷಯದ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಲು ಬಹುದೊಡ್ಡ ಸಂಚು ರೂಪಿಸಿರುವುದನ್ನು ಪೋಲಿಸರು ವಿಫಲಗೊಳಿಸಿದ್ದಾರೆ. ಕುಂದಾಪುರ ಜೂನಿಯರ್ ಕಾಲೇಜಿನಲ್ಲಿ ಮುಸಲ್ಮಾನ ಯುವತಿಯರು ಪ್ರತಿಭಟನೆ ಮಾಡುವಾಗ, ಅವರಿಗೆ ಬೆಂಬಲ ನೀಡಲು ಮತಾಂಧರು ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದು, 5 ಜನರಲ್ಲಿ ಇಬ್ಬರನ್ನು ಅಂದರೆ ಹಾಜಿ ಅಬ್ದುಲ್ ಮುಜಬ್ ಹಾಗೂ ರಜಬ್‌ನನ್ನು ಪೋಲಿಸರು ಬಂಧನ ಮಾಡಿದ್ದಾರೆ.

ಉಳಿದ ಕಲೀಲ್, ಈಪಿಕರ್, ರಿಜ್ವಾನ್ ಪರಾರಿಯಾಗಿದ್ದಾರೆ. ಈ ವೇಳೆಯಲ್ಲಿ ಬಂಧಿತರಿಂದ ಅಪಾಯಕಾರಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ತನಿಖೆಯಲ್ಲಿ ಬಯಲಾದ ವಿಷಯವೇನೆಂದರೆ ಬಂಧಿತರು ರೌಡಿಶೀಟರ್ ಆಗಿದ್ದು, ಮಾರಕಾಸ್ತ್ರಗಳನ್ನು ಬೀಸಿ ಸಾರ್ವಜನಿಕರ ಪ್ರಾಣ ತೆಗೆಯುವ ಸಂಚನ್ನು ರೂಪಿಸಿದ್ದರು. ಇದು ಅತ್ಯಂತ ಅಪಾಯಕಾರಿ ಮತ್ತು ಅತ್ಯಂತ ಗಂಭೀರ ವಿಷಯವಾಗಿದೆ. ಉಡುಪಿ ಜಿಲ್ಲೆಯು ಅತ್ಯಂತ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಮತಾಂಧ ಶಕ್ತಿಗಳು ಹಿಜಾಬ್ ಮೂಲಕ ಕೋಮು ಭಾವನೆಯನ್ನು ಕೆರಳಿಸಿ ಕೋಮು ಗಲಭೆಯನ್ನು ಮಾಡುವ ಷಡ್ಯಂತ್ರ್ಯ ರಚಿಸಿದ್ದು, ಇದರ ಪೂರ್ಣ ತನಿಖೆ ಮಾಡಬೇಕು.

ಕೂಡಲೇ ಇದರ ಹಿಂದಿನ ಮೂಲ ರೂವಾರಿಯನ್ನು ಪತ್ತೆ ಹಚ್ಚಬೇಕು ಮತ್ತು ಯಾವುದೇ ಕಾರಣಕ್ಕೂ ಹಿಜಾಬ್‌ಗೆ ಅವಕಾಶ ನೀಡದೇ, ವಸ್ತ್ರಸಂಹಿತೆಯನ್ನು ಜಾರಿ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.

ಮೋಹನ್ ಗೌಡ,
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ,
ಸಂಪರ್ಕ: 7204082609…

ಸುದ್ದಿ ಮತ್ತು ಜಾಹೀರಾತು ಸಂಪರ್ಕಿಸಿ:9449553305

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...