Saturday, June 14, 2025
Google search engine
Homeರಾಜ್ಯಬಿಎಸ್ ವೈ ರಾಜೀನಾಮೆ ಬೆನ್ನಲ್ಲೇ,ಸಚಿವ ಸಂಪುಟ ವಿಸರ್ಜನೆ, ಜುಲೈ 29 ಕ್ಕೆ ಹೊಸ ಮುಖ್ಯಮಂತ್ರಿ ಘೋಷಣೆ...

ಬಿಎಸ್ ವೈ ರಾಜೀನಾಮೆ ಬೆನ್ನಲ್ಲೇ,ಸಚಿವ ಸಂಪುಟ ವಿಸರ್ಜನೆ, ಜುಲೈ 29 ಕ್ಕೆ ಹೊಸ ಮುಖ್ಯಮಂತ್ರಿ ಘೋಷಣೆ ಸಾಧ್ಯತೆ? ಯಾರಾಗುತ್ತಾರೆ ಮುಂದಿನ ಸಿಎಂ…. ಕಟೀಲು…

ಆರು ತಿಂಗಳ ಹಿಂದೆಯೇ ಮುಖ್ಯಮಂತ್ರಿಯ ಬದಲಾವಣೆಯ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯುತ್ತಿದ್ದವು. ಪತ್ರಿಕೆ ಕೂಡ ಈ ಬಗ್ಗೆ ಸುಳಿವು ನೀಡಿತ್ತು. ನಿರಂತರವಾಗಿ ಹೇಳಿಕೆಗಳು ಹೊರಬೀಳುತಿದ್ದವು ಬಿಎಸ್ವೈ ಮನವೊಲಿಸಲು ಬಿಜೆಪಿ ಹೈಕಮಾಂಡ್ ಬಹಳ ಕಸರತ್ತು ಮಾಡಿದೆ. ಕೊನೆಗೂ ಅದರಲ್ಲಿ ಯಶಸ್ವಿಯಾಗಿದೆ. ಒಲ್ಲದ ಮನಸ್ಸಿನಿಂದಲೇ ಕೊನೆಗೂ ಬಿಎಸ್ವೈ ತಮ್ಮ ರಾಜೀನಾಮೆಯನ್ನು ಸಲ್ಲಿಸುವುದರ ಮುಖಾಂತರ ತಮ್ಮ ಸುದೀರ್ಘ ರಾಜಕೀಯ ಜೀವನಕ್ಕೆ ಅಂತ್ಯ ಎಳೆದಿದ್ದಾರೆ ಎನ್ನಬಹುದು. ಯಾರು ಏನೇ ಹೇಳಲಿ ಭ್ರಷ್ಟಾಚಾರ ದಂತ ಅನೇಕ ಆರೋಪಗಳು ಬಿಎಸ್ವೈ ಮೇಲಿದ್ದವು. ಆದರೂ ಕೂಡ ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಬಿಎಸ್ವೈ ಕೂಡ ಒಬ್ಬರು ಹಠವಾದಿ, ಪಕ್ಷ ಕಟ್ಟುವಲ್ಲಿ ಸಂಘಟನೆಯಲ್ಲಿ ಬಿಎಸ್ವೈ ಪಾಲು ಪ್ರಮುಖವಾದದ್ದು. ರಾಜ್ಯ ರಾಜಕೀಯಕ್ಕೆ ಅದರಲ್ಲೂ ಶಿವಮೊಗ್ಗಕ್ಕೆ ಬಿಎಸ್ವೈ ಕೊಡುಗೆ ಅಪಾರ ಕೆಲವೇ ವರ್ಷಗಳು ಆಡಳಿತವನ್ನು ನಡೆಸಿದರು ಒಂದಷ್ಟು ಅಭಿವೃದ್ಧಿ ಮಾಡಿರುವುದರಲ್ಲಿ ಎರಡು ಮಾತಿಲ್ಲ. ಬಿಎಸ್ ವೈ ಅವರನ್ನು ಪಕ್ಷಾತೀತವಾಗಿ ,ಜಾತ್ಯಾತೀತವಾಗಿ ಜನರು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ ಅವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದ್ದು ಹಾಗೂ ಅದರಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡಿದ್ದು. ಹೀಗೆ ಜೀವನದುದ್ದಕ್ಕೂ ಹೋರಾಟದ ಹಾದಿಯಲ್ಲಿ ಬಂದ ಬಿಎಸ್ವೈ ಇಂದು ನೋವಿನಿಂದಲೇ ವಿದಾಯ ಹೇಳಿದ್ದಾರೆ. ಬಿಎಸ್ವೈ ವಿದಾಯದ ಬೆನ್ನಲ್ಲೇ ರಾಜ್ಯ ರಾಜಕೀಯಕ್ಕೆ ನೂತನ ಸಾರಥಿಯನ್ನು ಕಟ್ಟಲು ಬಿಜೆಪಿ ಹೈಕಮಾಂಡ್ ತೆರೆಮರೆಯಲ್ಲಿ ಹಲವು ಕಸರತ್ತುಗಳು ನಡೆದಿದ್ದು ಯಾರಾಗುತ್ತಾರೆ ಮುಂದಿನ ಸಿಎಂ ಎನ್ನುವುದು ಕುತೂಹಲಕ್ಕೆ ಎಡೆಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಜುಲೈ 29 ಕ್ಕೆ ಮುಂದಿನ ಮುಖ್ಯಮಂತ್ರಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದ್ದು. ಸಚಿವಸಂಪುಟ ಕೂಟ ಪುನರ್ರಚನೆ ಆಗಲಿದ್ದು ಹಲವು ಹೊಸ ಮುಖಗಳಿಗೆ ಆದ್ಯತೆ ಸಿಗಲಿದೆ ಅದರಲ್ಲೂ ಪ್ರಮುಖವಾಗಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಅಥವಾ ಹರತಾಳ ಹಾಲಪ್ಪ, ಗೂಳಿಹಟ್ಟಿ ಶೇಖರ್, ರೇಣುಕಾಚಾರ್ಯ, ಯತ್ನಾಳ್, ಭೂಪಯ್ಯ, ರಂಥ ಹೊಸ ಮುಖಗಳಿಗೆ ಆದ್ಯತೆ ಸಿಗಲಿದ್ದು. ಡಿಸಿಎಂ ಆಗಿ ಶ್ರೀರಾಮುಲು ನೇಮಕವಾಗುವ ಸಾಧ್ಯತೆ ಇದೆ. ಹಾಗೆ ಮುಖ್ಯಮಂತ್ರಿ ಪಟ್ಟಕ್ಕೆ ಹೊಸಮುಖಕ್ಕೆ ಆದ್ಯತೆ ಸಿಗುವ ಸಾಧ್ಯತೆ ಹೆಚ್ಚಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನಳಿನ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಹೆಸರುಗಳು ಕೇಳಿಬರುತ್ತಿವೆ. ಇಲ್ಲದಿದ್ದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಕೊನೆಯ ಹಂತದಲ್ಲಿ ಯಾರು ನಿರೀಕ್ಷಿಸದ ನಳಿನ್ ಕುಮಾರ್ ಕಟೀಲ್ ರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದರು ಆಶ್ಚರ್ಯಪಡಬೇಕಾಗಿಲ್ಲ…. (ವರದಿ…. ರಘುರಾಜ್ ಹೆಚ್, ಕೆ)

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!