ಆರು ತಿಂಗಳ ಹಿಂದೆಯೇ ಮುಖ್ಯಮಂತ್ರಿಯ ಬದಲಾವಣೆಯ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯುತ್ತಿದ್ದವು. ಪತ್ರಿಕೆ ಕೂಡ ಈ ಬಗ್ಗೆ ಸುಳಿವು ನೀಡಿತ್ತು. ನಿರಂತರವಾಗಿ ಹೇಳಿಕೆಗಳು ಹೊರಬೀಳುತಿದ್ದವು ಬಿಎಸ್ವೈ ಮನವೊಲಿಸಲು ಬಿಜೆಪಿ ಹೈಕಮಾಂಡ್ ಬಹಳ ಕಸರತ್ತು ಮಾಡಿದೆ. ಕೊನೆಗೂ ಅದರಲ್ಲಿ ಯಶಸ್ವಿಯಾಗಿದೆ. ಒಲ್ಲದ ಮನಸ್ಸಿನಿಂದಲೇ ಕೊನೆಗೂ ಬಿಎಸ್ವೈ ತಮ್ಮ ರಾಜೀನಾಮೆಯನ್ನು ಸಲ್ಲಿಸುವುದರ ಮುಖಾಂತರ ತಮ್ಮ ಸುದೀರ್ಘ ರಾಜಕೀಯ ಜೀವನಕ್ಕೆ ಅಂತ್ಯ ಎಳೆದಿದ್ದಾರೆ ಎನ್ನಬಹುದು. ಯಾರು ಏನೇ ಹೇಳಲಿ ಭ್ರಷ್ಟಾಚಾರ ದಂತ ಅನೇಕ ಆರೋಪಗಳು ಬಿಎಸ್ವೈ ಮೇಲಿದ್ದವು. ಆದರೂ ಕೂಡ ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಬಿಎಸ್ವೈ ಕೂಡ ಒಬ್ಬರು ಹಠವಾದಿ, ಪಕ್ಷ ಕಟ್ಟುವಲ್ಲಿ ಸಂಘಟನೆಯಲ್ಲಿ ಬಿಎಸ್ವೈ ಪಾಲು ಪ್ರಮುಖವಾದದ್ದು. ರಾಜ್ಯ ರಾಜಕೀಯಕ್ಕೆ ಅದರಲ್ಲೂ ಶಿವಮೊಗ್ಗಕ್ಕೆ ಬಿಎಸ್ವೈ ಕೊಡುಗೆ ಅಪಾರ ಕೆಲವೇ ವರ್ಷಗಳು ಆಡಳಿತವನ್ನು ನಡೆಸಿದರು ಒಂದಷ್ಟು ಅಭಿವೃದ್ಧಿ ಮಾಡಿರುವುದರಲ್ಲಿ ಎರಡು ಮಾತಿಲ್ಲ. ಬಿಎಸ್ ವೈ ಅವರನ್ನು ಪಕ್ಷಾತೀತವಾಗಿ ,ಜಾತ್ಯಾತೀತವಾಗಿ ಜನರು ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿ ಅವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದ್ದು ಹಾಗೂ ಅದರಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡಿದ್ದು. ಹೀಗೆ ಜೀವನದುದ್ದಕ್ಕೂ ಹೋರಾಟದ ಹಾದಿಯಲ್ಲಿ ಬಂದ ಬಿಎಸ್ವೈ ಇಂದು ನೋವಿನಿಂದಲೇ ವಿದಾಯ ಹೇಳಿದ್ದಾರೆ. ಬಿಎಸ್ವೈ ವಿದಾಯದ ಬೆನ್ನಲ್ಲೇ ರಾಜ್ಯ ರಾಜಕೀಯಕ್ಕೆ ನೂತನ ಸಾರಥಿಯನ್ನು ಕಟ್ಟಲು ಬಿಜೆಪಿ ಹೈಕಮಾಂಡ್ ತೆರೆಮರೆಯಲ್ಲಿ ಹಲವು ಕಸರತ್ತುಗಳು ನಡೆದಿದ್ದು ಯಾರಾಗುತ್ತಾರೆ ಮುಂದಿನ ಸಿಎಂ ಎನ್ನುವುದು ಕುತೂಹಲಕ್ಕೆ ಎಡೆಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಜುಲೈ 29 ಕ್ಕೆ ಮುಂದಿನ ಮುಖ್ಯಮಂತ್ರಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದ್ದು. ಸಚಿವಸಂಪುಟ ಕೂಟ ಪುನರ್ರಚನೆ ಆಗಲಿದ್ದು ಹಲವು ಹೊಸ ಮುಖಗಳಿಗೆ ಆದ್ಯತೆ ಸಿಗಲಿದೆ ಅದರಲ್ಲೂ ಪ್ರಮುಖವಾಗಿ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಅಥವಾ ಹರತಾಳ ಹಾಲಪ್ಪ, ಗೂಳಿಹಟ್ಟಿ ಶೇಖರ್, ರೇಣುಕಾಚಾರ್ಯ, ಯತ್ನಾಳ್, ಭೂಪಯ್ಯ, ರಂಥ ಹೊಸ ಮುಖಗಳಿಗೆ ಆದ್ಯತೆ ಸಿಗಲಿದ್ದು. ಡಿಸಿಎಂ ಆಗಿ ಶ್ರೀರಾಮುಲು ನೇಮಕವಾಗುವ ಸಾಧ್ಯತೆ ಇದೆ. ಹಾಗೆ ಮುಖ್ಯಮಂತ್ರಿ ಪಟ್ಟಕ್ಕೆ ಹೊಸಮುಖಕ್ಕೆ ಆದ್ಯತೆ ಸಿಗುವ ಸಾಧ್ಯತೆ ಹೆಚ್ಚಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನಳಿನ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಹೆಸರುಗಳು ಕೇಳಿಬರುತ್ತಿವೆ. ಇಲ್ಲದಿದ್ದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಪ್ರಹ್ಲಾದ್ ಜೋಶಿ, ಅರವಿಂದ್ ಬೆಲ್ಲದ್ ಮುಂಚೂಣಿಯಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಕೊನೆಯ ಹಂತದಲ್ಲಿ ಯಾರು ನಿರೀಕ್ಷಿಸದ ನಳಿನ್ ಕುಮಾರ್ ಕಟೀಲ್ ರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದರು ಆಶ್ಚರ್ಯಪಡಬೇಕಾಗಿಲ್ಲ…. (ವರದಿ…. ರಘುರಾಜ್ ಹೆಚ್, ಕೆ)
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ….9449553305….