
ತೀರ್ಥಹಳ್ಳಿ : ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋ ಒಂದು ವೈರಲ್ ಆಗುತ್ತಿತ್ತು ಅದು ತೀರ್ಥಹಳ್ಳಿಯಲ್ಲಿ ಎಬಿವಿಪಿ ಅಧ್ಯಕ್ಷ ಹಾಗೂ ಬಿಜೆಪಿಯ ಯುವ ಮುಖಂಡ ಎನ್ನಲಾಗುತ್ತಿದ್ದ ಪ್ರತಿಕ್ ಗೌಡ ಎಂಬ ಯುವಕನದ್ದು ಎಂದು ಈಗ ಬಯಲಿಗೆ ಬಂದಿದೆ.
ಕಾಲೇಜು ಯುವತಿಯರ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರತಿಕ್ ಗೌಡ :
ಕಾಲೇಜು ಯುವತಿಯರ ನಗ್ನ ಚಿತ್ರಗಳನ್ನು ವಿಡಿಯೋ ರೆಕಾರ್ಡ್ ಮಾಡಿ ನಂತರ ಅವರಿಗೆ ಬ್ಲಾಕ್ ಮೇಲ್ ಮಾಡಿ ಹಣ ತೆಗೆದುಕೊಳ್ಳುವುದು ತನ್ನೊಂದಿಗೆ ಸಹಕರಿಸುವಂತೆ ಪ್ರಚೋದಿಸುವುದು ಮಾಡುತ್ತಿದ್ದ ತೀರ್ಥಹಳ್ಳಿ ಎಬಿವಿಪಿ ಅಧ್ಯಕ್ಷ ಪ್ರತಿಕ್ ಗೌಡ ಎನ್ನುವ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ತೀರ್ಥಹಳ್ಳಿ ಎನ್ ಎಸ್ ಯು ಐ NSUI ಘಟಕ ಡಿ ವೈ ಎಸ್ ಪಿ ಗಜಾನನ್ ಸುತಾರ್ ಅವರಿಗೆ ಮನವಿ ನೀಡಿ ಒತ್ತಾಯಿಸಿತ್ತು. ಹಾಗೂ ತೀರ್ಥಹಳ್ಳಿಯ ತಾಲೂಕಿನದ್ಯಂತ ತೀವ್ರ ಸಂಚಲನ ಮೂಡಿಸಿತ್ತು ಈ ವಿಡಿಯೋಗಳು ಸಭ್ಯ ಸುಸಂಸ್ಕೃತರ ನಾಡಾದ ತೀರ್ಥಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ವಾಟ್ಸಪ್, ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕೃತ್ಯಗಳು ಹೆಚ್ಚಾಗಿದ್ದು ಅದರಲ್ಲೂ ಆಶ್ಲೀಲ ವಿಡಿಯೋ ಚಿತ್ರಿಸಿ ಬ್ಲಾಕ್ ಮೇಲ್ ಮಾಡುವುದು ಹೆಚ್ಚಾಗಿದೆ. ಈ ಪ್ರಕರಣ ಬೆಳಕಿಗೆ ಬಂದಿದ್ದು ಇನ್ನೆಷ್ಟೋ ಪ್ರಕರಣಗಳು ಮುಚ್ಚಿಹೋಗಿರುವ ಹೋಗಿವೆ ಈ ಯುವಕ ಪ್ರತಿಕ್ ಗೌಡ ಇದೇ ತಿಂಗಳ ಹದಿನಾರರಂದು ಅಶ್ಲೀಲ ವಿಡಿಯೋವನ್ನು ವಾಟ್ಸಪ್ ನಲ್ಲಿ ಹರಿಬಿಟ್ಟಿದ್ದಾನೆ ಯುವತಿಯರಿಗೆ ಎಬಿವಿಪಿ ಸದಸ್ಯತ್ವ ಕೊಡುವುದಾಗಿ ಮೋಸ ಮಾಡಿ ವಂಚಿಸಿ ಅವರ ನಗ್ನ ಚಿತ್ರಗಳನ್ನು ರೆಕಾರ್ಡ್ ಮಾಡಿ ಆಮೇಲೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಸುಜಿತ್, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ
ಅಮರ್ ನಾಥ್ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಅಶ್ವಲ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರ ಕಳುಹಿಸುವವರಿಗೆ ಎಚ್ಚರಿಕೆ ನೀಡಿದ ಸಿ ಇ ಎನ್ ಪೋಲಿಸ್ ಇನ್ಸ್ಪೆಕ್ಟರ್ ಶಿವಮೊಗ್ಗ:

ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ನಗ್ನ ಚಿತ್ರಗಳನ್ನು ಕಳುಹಿಸುವುದು ಬೇರೆಯವರಿಗೆ ಹಿಂಸಿಸುವುದು ಪ್ರಚೋದಿಸುವುದು ಮಾಡಿದರೆ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ತೀರ್ಥಹಳ್ಳಿ ಯುವಕನನ್ನು ಬಂಧಿಸಿ ಎಫ್ ಐಆರ್ ದಾಖಲಿಸಿ, ಜೈಲಿಗೆ ಕಳುಹಿಸಿದ ತೀರ್ಥಹಳ್ಳಿ ಪೊಲೀಸರು :
ಆರೋಪಿ ಯುವಕನನ್ನು ಈ ಪ್ರಕರಣದಲ್ಲಿ ಬಂಧಿಸಿ ಎಫ್ ಐಆರ್ ದಾಖಲಿಸಿ ತೀರ್ಥಹಳ್ಳಿ ಪೊಲೀಸರು ಇದೀಗ ಜೈಲಿಗೆ ಕಳುಹಿಸಿದ್ದಾರೆ…
ಯುವತಿಯರೇ ಎಚ್ಚರ ,
ಯುವತಿಯರೇ ಎಚ್ಚರವಾಗಿರಿ ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ನಿಮ್ಮನ್ನು ನಂಬಿ ತಂದೆ, ತಾಯಿಗಳು ಬಂದು ಬಳಗದವರು, ಸ್ನೇಹಿತರು ,ಇರುತ್ತಾರೆ ನೀವು ಮಾಡುವ ತಪ್ಪುಗಳಿಗೆ ಅವರು ತಲೆತಗ್ಗಿಸುವುದು ಎಷ್ಟು ಸರಿ ಇಂತಹ ಪ್ರಕರಣಗಳಲ್ಲಿ ಯುವಕರದ್ದು ಎಷ್ಟು ತಪ್ಪು ಇರುತ್ತದೆಯೋ ಅಷ್ಟೇ ತಪ್ಪು, ಯುವತಿಯರದ್ದು ಇರುತ್ತದೆ.. ಆದರೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಮಾತ್ರ ಯುವಕರಿಗೆ ಆಗಿರುತ್ತದೆ ಯುವತಿಯರ ಸಪೋರ್ಟ್ ಇಲ್ಲದೆ ಯುವಕರು ಈ ಕೃತ್ಯ ಎಸಗಲು ಹೇಗೆ ಸಾಧ್ಯ..?!
ಒಟ್ಟಾರೆಯಾಗಿ ಸಭ್ಯ ಸುಸಂಸ್ಕೃತರ ನಾಡು ತೀರ್ಥಹಳ್ಳಿ ಪ್ರಜ್ಞಾವಂತ ನಾಗರಿಕರು ಈ ಪ್ರಕರಣದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಪ್ರಕರಣಗಳು ಮತ್ತೆ ಮರುಕಳಿಸಬಾರದು ತೀರ್ಥಹಳ್ಳಿಯ ಜನತೆ ತಲೆತಗ್ಗಿಸುವಂತಹ ಘಟನೆ ನಡೆಯಬಾರದು ಇದಕ್ಕೆ ತಕ್ಕ ಶಿಕ್ಷೆ ಆಗಬೇಕು ಎಂದು ಅಭಿಪ್ರಾಯ ಪಡುತ್ತಾರೆ….
ರಘುರಾಜ್ ಹೆಚ್.ಕೆ..9449553305…