Tuesday, April 29, 2025
Google search engine
Homeವಿಶೇಷ ವರದಿಗಳುBig news:ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್..? ಮಹತ್ವದ ಆದೇಶ ನೀಡಿದ ...

Big news:ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್..? ಮಹತ್ವದ ಆದೇಶ ನೀಡಿದ ತ್ರಿಸದಸ್ಯ ಪೀಠ..!

ನವದೆಹಲಿ: ಪತ್ರಕರ್ತರು ಸುದ್ದಿಗಳನ್ನು ಬರೆದರೆ ಆ ಸುದ್ದಿಗಳ ವಿರುದ್ಧ ಕೇಸ್ ದಾಖಲಿಸುವುದು ಅವರಿಗೆ ಬೆದರಿಕೆ ಹಾಕುವುದು ತಮ್ಮ ಹಣಬಲ ತೋಳ್ಬಲವನ್ನು ಬಳಸಿಕೊಂಡು ಪತ್ರಕರ್ತರನ್ನೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುವುದು ಸಾಮಾನ್ಯವಾದ ಸಂಗತಿಯಾಗಿದೆ.

ಆದರೆ ಇದಕ್ಕೆ ಶೇಕಡ 5ರಷ್ಟು ಪತ್ರಕರ್ತರು ಮಣಿದರೆ 95 ರಷ್ಟು ಪತ್ರಕರ್ತರು ಭ್ರಷ್ಟ ವ್ಯವಸ್ಥೆಯ ವಿರುದ್ಧ ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಇಲ್ಲವಾದರೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡದ್ದಕ್ಕೂ ಸ್ವಾರ್ಥಕವಾಗುವುದಿಲ್ಲ ಏಕೆಂದರೆ ಹಣ ಮಾಡಲು ಸಾಕಷ್ಟು ವ್ಯವಹಾರಗಳಿವೆ ಹಣ ಮಾಡಲು ಪತ್ರಿಕೋದ್ಯಮ ವ್ಯವಹಾರ ವಾಗಬಾರದು ,ವ್ಯವಹಾರವಾಗಿಲ್ಲ ಈ ಪೀಠಿಕೆ ಈಗ ಏಕೆಂದರೆ,

ಮಾನ್ಯ ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶವನ್ನು ನೀಡಿದ್ದು ಈ ಆದೇಶದಲ್ಲಿ ಪತ್ರಕರ್ತರು ತಮ್ಮ ಅಂಕಣದಲ್ಲಿ ಬರೆದ ಬರಹಗಳು ತಪ್ಪಾಗಿದ್ದರೆ ಅದು ಅಪರಾಧವಲ್ಲ ತಪ್ಪು ವರದಿ ಅಷ್ಟೇ ಅದಕ್ಕೆ ಶಿಕ್ಷಿಸುವ ಅಗತ್ಯತೆ ಇಲ್ಲ ಎನ್ನುವ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ನೀಡಿದೆ.

ಮಣಿಪುರ ಹಿಂಸಾಚಾರ ಕುರಿತಂತೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ನಾಲ್ಕು ಜನ ಸದಸ್ಯರ ಬಂಧನಕ್ಕೆ ಮಧ್ಯಾಂತರ ತಡೆ ನೀಡಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಪರ್ದಿ ವಾಲಾ, ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಐಪಿಸಿ ಸೆಕ್ಷನ್ 153 ಎ ರ ಅಡಿಯಲ್ಲಿ ಯಾವುದೇ ಘಟನೆಯ ಬಗ್ಗೆ ಪತ್ರಕರ್ತರು ತಪ್ಪಾಗಿ ಬರೆದಿದ್ದರೆ ಅದು ಅಪರಾಧಕ್ಕೆ ಸಮಾನವಲ್ಲ, ಅದನ್ನು ತಪ್ಪಾದ ವರದಿ ಎಂದು ಪರಿಗಣಿಸಬಹುದು . ತಪ್ಪು ಮಾಹಿತಿ ತಪ್ಪು ವರದಿ ಮಾಡಿದ ಎಲ್ಲಾ ಪತ್ರಕರ್ತರನ್ನು ವಿಚಾರಣೆ ಮಾಡುತ್ತೀರಾ..? ಎಂದು ತ್ರಿಸದಸ್ಯ ಪೀಠ ಸರ್ಕಾರವನ್ನು ಪ್ರಶ್ನಿಸಿದೆ.

ಮಣಿಪುರ ಸರ್ಕಾರ ಪತ್ರಕರ್ತರ ವಿರುದ್ಧ ಸಲ್ಲಿಸಿದ ಎಫ್ ಆರ್ ನಲ್ಲಿ ಯಾವುದೇ ಗುರುತರವಾದ ಆರೋಪ ಮಾಡಿಲ್ಲ ಹೀಗಿರುವಾಗ ಎಫ್ಐಆರ್ ಅನ್ನು ಏಕೆ ರದ್ದು ಮಾಡಬಾರದು ಎಂದು ನ್ಯಾಯಪೀಠ ಸರ್ಕಾರವನ್ನು ಪ್ರಶ್ನಿಸಿದೆ.

ರಘುರಾಜ್ ಹೆಚ್.ಕೆ.9449553305.

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...