Tuesday, April 29, 2025
Google search engine
Homeವಿಶೇಷ ವರದಿಗಳುVaramahalakshmi Special :ಸೂತ ಮಹಾ ಮುನಿಗಳು ಹೇಳುವ ಪ್ರಕಾರ ವ್ರತ ಆಚರಣೆ ಹೇಗಿರಬೇಕು..!

Varamahalakshmi Special :ಸೂತ ಮಹಾ ಮುನಿಗಳು ಹೇಳುವ ಪ್ರಕಾರ ವ್ರತ ಆಚರಣೆ ಹೇಗಿರಬೇಕು..!


ಇಂದು ಶ್ರೀ ವರ ಮಹಾಲಕ್ಷ್ಮಿ ವ್ರತ ಆಚರಣೆ. ವಿಶೇಷವಾಗಿ ಸುಮಂಗಲಿಯರು ತಮ್ಮ ಆರ್ಥಿಕ ಸ್ಥಿತಿಯ ಸುಧಾರಣೆಗೆ ಲಕ್ಷ್ಮಿ ದೇವಿಯ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ.
ವರ ಮಹಾಲಕ್ಷ್ಮಿ ವ್ರತ ಆಚರಣೆಯ ಮೂಲ ಹರಸುತ್ತಾ ಹೋದರೆ ನಮಗೆ ವ್ಯಾಸ ಮಹಾಮುನಿಗಳು ಸಿಗುತ್ತಾರೆ. ನಮ್ಮ ಹಿಂದೂ ಧರ್ಮ 18ಪುರಾಣಗಳ ಆಧಾರದ ಮೇಲೆ ನಿಂತಿದೆ. ಭಗವಂತನ ಪ್ರೇರಣೆಯಿಂದ ಈ ಪುರಾಣಗಳನ್ನು ವ್ಯಾಸ ಮಹರ್ಷಿಗಳು ರಚಿಸಿದರು.
ಮನುಕುಲದ ಉದ್ಧಾರಕ್ಕಾಗಿ ಈ ಎಲ್ಲಾ 18ಪುರಾಣಗಳಲ್ಲಿ ವ್ರತಗಳನ್ನು ಉಲ್ಲೇಖಿಸಿದ್ದಾರೆ ಅಂತಹ ವ್ರತಗಳಲ್ಲಿ ಒಂದು ಇಂದು ನಾವು ಆಚರಿಸುತ್ತಿರುವ ಶ್ರೀ ವರ ಮಹಾಲಕ್ಷ್ಮಿ ವ್ರತ.
ಉದ್ಯೋಗ, ವ್ಯಾಪಾರ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಈ ವ್ರತವನ್ನು ಆಚರಿಸಲಾಗುತ್ತದೆ. ವರ ಮಹಾ ಲಕ್ಷ್ಮಿ ವ್ರತ ಆಚರಣೆ ಪದ್ಧತಿ ಬಗ್ಗೆ ಸ್ಕಂಧ ಪುರಾಣದಲ್ಲಿ ಸೂತ ಮಹಾಮುನಿಗಳು ಹೇಳಿರುವಂತೆ ವ್ರತವನ್ನು ಆಚರಿಸುವವರು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ತೈಲ ಅಭ್ಯಂಜನ ಮಾಡಿ ಹರಿಯುವ ನದಿಯಿಂದ ನೀರನ್ನು ತಂದು ಕಳಸ ಪ್ರತಿಷ್ಠಾಪಸಿ ನೀರನ್ನು ಕಳಸದಲ್ಲಿ ಹಾಕಬೇಕು ನಂತರ ಕಳಸಕ್ಕೆ ಮಂಟಪ ನಿರ್ಮಿಸಿ ಹೂಗಳಿಂದ ಅಲಂಕಾರ ಮಾಡಿ ಐದು ತರಹದ ಭಕ್ಷ್ಯಗಳನ್ನು ಅಂದರೆ ಐದು ಬಗೆಯ ಅನ್ನ ಪದಾರ್ಥಗಳನ್ನು ಸಿದ್ಧಪಡಿಸಿ ಐದು ಬಗೆಯ ಹಣ್ಣುಗಳನ್ನು ಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಿ ಕನಿಷ್ಠ ಐದು ಮಂದಿ ಸುಮಂಗಲಿಯರಿಗೆ ಬಾಗಿನ ಅರ್ಪಿಸಿ ಅನ್ನದಾನವನ್ನು ಮಾಡಬೇಕು.
ಸಂಜೆ ಕಳಸಕ್ಕೆ ದೇವಿ ಸಂಬಂದಿಸಿದ ಹಾಡನ್ನು ಹಾಡುತ್ತಾ ಆರತಿ ಬೆಳಗಿ ಮರು ದಿನ ಕಳಸ ವಿಸರ್ಜನೆ ಮಾಡುವ ಮೂಲಕ ವರ ಮಹಾ ಲಕ್ಷ್ಮಿ ವ್ರತವನ್ನು ಆಚರಿಸಬಹುದು ಎಂದು ಸೂತ ಪುರಾಣದಲ್ಲಿ ಮುನುಗಳು ತಿಳಿಸಿದ್ದಾರೆ.


ಪ್ರಿಯ ಓದುಗರೆ ನಿಮಗೆಲ್ಲರಿಗೂ ಶ್ರಿ ವರ ಮಹಾಲಕ್ಷ್ಮಿ ವ್ರತ ಆಚರಣೆಯ ಶುಭಾಶಯಗಳು.

ಮಾಹಿತಿ- ಶ್ರೀನಿಧಿ ಭಟ್
ಪ್ರಧಾನ ಅರ್ಚಕರು ಪಿಳ್ಳಯ್ಯನ ಗಿರಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ.

ವಿವರಣೆ- ಹೆಚ್.ಎಮ್ ವಿನಯ್ ಕುಮಾರ್. ವರದಿಗಾರರು…

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...