Wednesday, April 30, 2025
Google search engine
Homeಸಾಗರಸಾಗರ ಪೇಟೆ ಪೊಲೀಸರ ಮಿಂಚಿನ ಯಶಸ್ವಿ ಕಾರ್ಯಾಚರಣೆ - ಮನೆಗಳ್ಳರ ಬಂಧನ..!!

ಸಾಗರ ಪೇಟೆ ಪೊಲೀಸರ ಮಿಂಚಿನ ಯಶಸ್ವಿ ಕಾರ್ಯಾಚರಣೆ – ಮನೆಗಳ್ಳರ ಬಂಧನ..!!

ಸಾಗರ:- ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ವ್ಯಾಪ್ತಿಯಲ್ಲಿ ವೆಂಟಿಲೇಟರ್ ಮೂಲಕ ಮನೆಯ ಒಳಗೆ ಇಳಿದು ಕಳ್ಳತನ ಮಾಡುತಿದ್ದ ಆರೋಪಿಗಳ ಬಂಧನ, 7,45,729/ರೂ ಮೌಲ್ಯದ ಕಾರು,ವಾಚ್ ಆಭರಣ ಜಪ್ತಿ..

ಸಾಗರ ಪೇಟೆ ಠಾಣಾ ವ್ಯಾಪ್ತಿಯಲ್ಲಿ ವೆಂಟಿಲೇಟರ್ ಬಳಸಿ ಕಳ್ಳತನ ಮಾಡಿದ ಪ್ರಕರಣ ಭೇದಿಸಿದ ಸಾಗರದ ಪೋಲಿಸ್ ಇಲಾಖೆ

ಮಿಥುನ್ ಕುಮಾರ್ ಐಪಿಎಸ್ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಮತ್ತು ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಅವರ ಆದೇಶದ ಮೇರೆಗೆ

ಸಾಗರ ನಗರದ ಶಿವಮೊಗ್ಗ ರಸ್ತೆ ತೋಟಗಾರಿಕೆ ಇಲಾಖೆ ಹತ್ತಿರದ ಮನೆಯೊಂದರಲ್ಲಿ ವೆಂಟಿಲೇಟರ್ ಮೂಲಕ ಮನೆಯ ಒಳಗೆ ಇಳಿದು ವಾಚ್ ಹಾಗೂ ಆಭರಣ ಕಳ್ಳತನ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಹಚ್ಚಲು ಆದೇಶಿಸಿದ ಮೇರೆಗೆ .ರೋಹನ್ ಜಗದೀಶ್ ಐಪಿಎಸ್ ಹಿರಿಯ ಸಹಾಯಕ ಪೊಲೀಸ್‌ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ

ಸಾಗರ ಟೌನ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸೀತರಾಂ ಜೆ ಬಿ ಮತ್ತು ಕೃಷ್ಣಪ್ಪ ಕೆ ವಿ ಸರ್ಕಲ್ ಇನ್ಸ್‌ಪೆಕ್ಟರ್ ಸಾಗರ ಗ್ರಾಮಾಂತರರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ರವರಾದ ಶ್ರೀಪತಿ ಗಿನ್ನಿ ಟಿ ಡಿ ಸಾಗರರ್‌ರವರ ನೇತೃತ್ವದಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ. ರತ್ನಾಕರ್, ನಾಗರಾಜ ನಾಯ್ಕ, ಶ್ರೀಧರ್ ಪ್ರಭಾಕರ್ ವಿಶ್ವನಾಥ ಡಿ ಕೆ.ರಾಮನಗೌಡ ಪಾಟೀಲ್ ಅವರ ತಂಡ. ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಆರೋಪಿ 1)ಮಹಮದ್ ಇಪ್ಜಾಲ್ @ ಇಫಜಾಲ್ ಬಿನ್ ಆಪ್ಟಲ್ ಹುಸೇನ್.25 ವರ್ಷ.ಮುಸ್ಲಿಂ ಜಾತಿ.ಚಾಲಕ ವೃತ್ತಿ,ವಾಸ 2 ನೇ ಕ್ರಾಸ್,ಮದೀನಾ ಕಾಲೋನಿ ಭಟ್ಕಳ 2)ಯಾಸೀನ್ ಸಾಹೇಬ’ ಬಿನ್ ಭಾಷಾ ಸಾಹೇಬ 38 ವರ್ಷ,ಪೈಂಟಿಂಗ್ ಕೆಲಸ,ವಾಸ ಶಿರೂರು ಭಟ್ಕಳ 3)ಮಹಮದ್‌ ಮುಸಾಧಿಕ್ ಬಿನ್ ಅಬ್ದುಲ್ ರೆಹಮಾನ್ 33 ವರ್ಷ.ಇಂಟಿರಿಯಲ್ ವರ್ಕ್ ವಾಸ ಅಮರ್ ಕಾಲೋನಿ ಹೆಗ್ಗಲ್ ರೋಡ್ ಭಟ್ಕಳ ಇವರನ್ನು ದಸ್ತಗಿರಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೂ 7,45,729/ರೂ ಮೌಲ್ಯದ ಕಾರು,ವಾಚ್ ಮತ್ತು ಆಭರಣ ಜಪ್ತಿ ಮಾಡಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ…

ಓಂಕಾರ ಎಸ್. ವಿ. ತಾಳಗುಪ್ಪ….

RELATED ARTICLES
- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...