
ಶಿವಮೊಗ್ಗ: ಇಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಡಿಕೊಪ್ಪ ಗ್ರಾಮದಲ್ಲಿ ಕಾರ್ತಿಕೇಯನ್ ಅವರಿಗೆ ಸೇರಿದ ಗೊಡೌನ್ ನಲ್ಲಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಅನಧಿಕೃತವಾಗಿ ಸಂಗ್ರಹಣೆ ಮಾಡಿ ಲಾರಿಗಳಲ್ಲಿ ಸಾಗಾಣಿಕೆ ಮಾಡಲು ಲೋಡ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವು ಆಹಾರ ನಿರೀಕ್ಷಕರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿತರಾದ 1) ಕಾರ್ತಿಕೇಯನ್ @ ಕಾರ್ತಿಕ, 53 ವರ್ಷ, ಕಸ್ತೂರ್ ಬಾ ರಸ್ತೆ ಶಿವಮೊಗ್ಗ, 2)ಗೋಪಿ 23 ವರ್ಷ ಕಾಚಿನಕಟ್ಟೆ ಶಿವಮೊಗ್ಗ , 3)ಸೀತಾರಾಮ, 40 ವರ್ಷ ಕಾಚಿನಕಟ್ಟೆ ಶಿವಮೊಗ್ಗ, 4) ಕಾಂತರಾಜ 32 ವರ್ಷ ಮತ್ತಿಘಟ್ಟ ಶಿವಮೊಗ್ಗ ಮತ್ತು 5) ಯುವರಾಜ 28 ವರ್ಷ ನ್ಯೂ ಮಂಡ್ಲಿ ಶಿವಮೊಗ್ಗ, 6)ಶ್ರೀನಿಧಿ 20 ವರ್ಷ ದೇವರ ನರಸೀಪುರ ಭದ್ರಾವತಿ ರವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 3,70,000 /- ರೂ ಗಳ ಒಟ್ಟು 338 ಚೀಲಗಳಲ್ಲಿ ತುಂಬಿದ್ದ 168 ಕ್ವಿಂಟಾಲ್ ತೂಕದ ಅಕ್ಕಿ, 2 ಕ್ಯಾಂಟರ್ ವಾಹನಗಳು, 2 ಎಲೆಕ್ಟ್ರಾನಿಕ್ ತೂಕ ಮಾಡುವ ಯಂತ್ರ ಮತ್ತು 1 ಚೀಲಗಳನ್ನು ಹೊಲಿಗೆ ಯಂತ್ರ ವನ್ನು ಅಮಾನತುಪಡಿಸಿಕೊಂಡು, ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
ರಘುರಾಜ್ ಹೆಚ್.ಕೆ…9449553305…