ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ದಾವಣಗೆರೆ ಜಿಲ್ಲೆ, ಹರಿಹರ ಘಟಕ ಅವರ ವತಿಯಿಂದ ಆಧುನಿಕ ಕನ್ನಡ ಸಾಹಿತ್ಯ ಸಂವೇದನೆಯ ಬಹುರೂಪಗಳು ವಿಚಾರ ಸಂಕೀರ್ಣ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಇಂದು ನಗರದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಗೆ ಬಂದ ಖ್ಯಾತ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಕಾರ್ಯಕ್ರಮವನ್ನು ಉದ್ದೇಶಿಸಿ ಹಾಗೂ ಪ್ರಸ್ತುತ ಘಟನೆಗಳ ಬಗ್ಗೆ ಒಂದಷ್ಟು ಮಾತುಗಳನ್ನು ಆಡಿದರು. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಹಾಗೂ ದಲಿತರಿಗೆ ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜಕೀಯ ಶಕ್ತಿಗಳ ಪಿತೂರಿಯ ಬಗ್ಗೆ ಹಾಗೂ ಮಾಧ್ಯಮಗಳು ಉದ್ಯಮಗಳಾಗಿ ಪರಿವರ್ತನೆ ಆಗುತ್ತಿರುವ ಬಗ್ಗೆ ಕೂಲಂಕುಶವಾಗಿ ಮಾತನಾಡಿದರು.
ಭಾರತದ ರಾಜಕೀಯ ವ್ಯವಸ್ಥೆ ವಿದೇಶದಲ್ಲಿ ತೀರ್ಮಾನವಾಗುತ್ತದೆ ಅದಕ್ಕೆ ಉದಾಹರಣೆ ಹಿಂದೆ ಓಪಿಎಸ್ ನಿಷೇಧವಾಗಬೇಕು ಎಂದು ನಿರ್ಧಾರವಾಗಿದ್ದು ವಿಶ್ವ ಬ್ಯಾಂಕ್ ನಲ್ಲಿ 2001ರಲ್ಲಿ ಆದರೆ ಅದನ್ನು ಭಾರತ ಸರ್ಕಾರ ಅಂಗೀಕೃತ ಮಾಡಿದ್ದು 2004ರಲ್ಲಿ ಹಾಗಾಗಿ ಎಲ್ಲೋ ಒಂದು ಕಡೆಯಿಂದ ಭಾರತವು ವಿದೇಶಿರ ಆಳ್ವಿಕೆಯಲ್ಲಿ ಇದೆ ಎಂದು ಅನಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ನಂತರ ಕಾರ್ಯಕ್ರಮ ಮುಗಿಸಿ ಹೊರಹೋಗುವಾಗ ಸುಸ್ತಾಗಿ ಕುಸಿದರು ತಕ್ಷಣವೇ ಕಾರ್ಯಕ್ರಮದ ಆಯೋಜಕರಾದ ಎಚ್ ನಿಜಗುಣ ಹಾಗೂ ಸ್ನೇಹಿತರು ಹರಿಹರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಎಲ್ಲಾ ರೀತಿಯ ಪ್ರಾಥಮಿಕ ಚಿಕಿತ್ಸೆಗಳನ್ನು ನಡೆಸಿದ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದು ಸ್ವಲ್ಪ ಹೊತ್ತಿನಲ್ಲಿಯೇ ಒಂದು ಡ್ರಿಪ್ ಹಾಕಿ ನಂತರ ಡಿಸ್ಚಾರ್ಜ್ ಮಾಡಿದರು. ಪ್ರಸ್ತುತ ಆರಾಮಾಗಿರುವ ಬರಗೂರು ರಾಮಚಂದ್ರಪ್ಪನವರು ಬೆಂಗಳೂರಿಗೆ ತೆರಳಲು ಸಿದ್ಧವಾಗಿದ್ದಾರೆ…
ಎಂದಿನಂತೆ ನಿಗದಿತ ಕಾರ್ಯಕ್ರಮ ನಡೆಯುತ್ತಿದ್ದು ಕವಿಗೋಷ್ಠಿಯಲ್ಲಿ ಸಾಕಷ್ಟು ಜನ ಕವಿಗಳು ಭಾಗವಹಿಸಿದ್ದಾರೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ. ಎರಡು ಕವಿಗೋಷ್ಠಿಗಳಿದ್ದು ನಂತರ ಸಮರೂಪ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಎನ್ ರುದ್ರಮುನಿ ,ರಾಮಚಂದ್ರ ಕಲಾಲ್, ತೇಜಸ್ವಿ ಪಟೇಲ್, ಹೆಚ್, ಕೆ ಕೊಟ್ರಪ್ಪ, ಉಪಸ್ಥಿತರಿದ್ದಾರೆ ಅಧ್ಯಕ್ಷತೆಯನ್ನು ಬಿಎನ್ ಮಲ್ಲೇಶ್ ವಹಿಸಿದ್ದು ಕಾರ್ಯಕ್ರಮದ ನಿರ್ವಹಣೆಯನ್ನು ಹೆಚ್ ಚಂದ್ರಪ್ಪ ಮಾಡಿದರು ಸ್ವಾಗತ, ಪ್ರಸ್ತಾವನೆಯನ್ನು ಏಬಿ ರಾಮಚಂದ್ರಪ್ಪ ನೆರವೇರಿಸಿದರು… ಕಾರ್ಯಕ್ರಮದ ಉಸ್ತುವಾರಿಯನ್ನು ಹೆಚ್, ನಿಜಗುಣ ವಹಿಸಿದ್ದರು…
ರಘುರಾಜ್ ಹೆಚ್.ಕೆ…9449553305…
В этом обзорном материале представлены увлекательные детали, которые находят отражение в различных аспектах жизни. Мы исследуем непонятные и интересные моменты, позволяя читателю увидеть картину целиком. Погрузитесь в мир знаний и удивительных открытий!
Углубиться в тему – https://nakroklinikatest.ru/