Friday, June 20, 2025
Google search engine
Homeಶಿವಮೊಗ್ಗ""ಹುಷಾರ್"" ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ...

“”ಹುಷಾರ್”” ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ..!ಇದು ಜಿಲ್ಲಾಧಿಕಾರಿಗಳ ಆದೇಶವಂತೆ..?! ರಸ್ತೆಗೆ ಬೀಳುತ್ತಂತೆ ಬೇಲಿ..! ವಿಡಿಯೋ ವೈರಲ್..!!!!!!!!!

ಶಿವಮೊಗ್ಗ : ನಗರದ ವಿದ್ಯಾನಗರದ ವ್ಯಾಪ್ತಿಗೆ ಒಳಪಡುವ ಬಿ ,ಹೆಚ್ ರಸ್ತೆಯಲ್ಲಿರುವ ರೋಟರಿ ಚಿತಾಗರಕ್ಕೆ ಹೋಗುವ ದಾರಿಯನ್ನು ಗಣೇಶ ಆಲಿಯಾಸ್ ಮಂಜಪ್ಪ ಎನ್ನುವ ವ್ಯಕ್ತಿ ಆಕ್ರಮಿಸಿಕೊಂಡಿದ್ದು. ಜೊತೆಗೆ ಅಲ್ಲಿರುವ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗವನ್ನು ಆಕ್ರಮಿಸಿಕೊಂಡಿದ್ದು. ಸರ್ಕಾರಿ ಅಂಗನವಾಡಿಯ ಹೆಸರಿಗೆ ಈತ ಬಣ್ಣವನ್ನು ಬಳಿದಿದ್ದು ಬೇಲಿ ಹಾಕಿಕೊಂಡಿದ್ದಾನೆ. ಇಲ್ಲಿ ಓಡಾಡುವ ಜನರಿಗೆ ಧಮ್ಕಿ ಹಾಕುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರಿಗೂ ದಮ್ಕಿ ಹಾಕುತ್ತಾನೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ:

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು ಮಾಜಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ಅವರು ಜನರ ದೂರಿನ ಮೇರೆಗೆ ಈತನ ಬಳಿ ಹೀಗೆಲ್ಲ ಮಾಡುವುದು ಸರಿನಾ..? ತಪ್ಪಲ್ಲವೇ..? ಎಂದು ಪ್ರಶ್ನೆ ಮಾಡಿದ್ದಕ್ಕೆ. ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಯ್ಯುತ್ತಾನೆ…

ಸ್ಥಳೀಯವಾಗಿ ಓಡಾಡುವ ಜನರಿಗೂ ಬೈಯುತ್ತಾನೆ, ನಿಂದಿಸುತ್ತಾನೆ:

ಸ್ಥಳೀಯವಾಗಿ ಸಾರ್ವಜನಿಕರು ಸಾಮಾನ್ಯವಾಗಿ ಆ ರಸ್ತೆಯಲ್ಲಿ ಓಡಾಡುವಾಗ ಅವರಿಗೆ ಬೈಯುವುದು ನಿಂದಿಸುವುದು ಈ ರಸ್ತೆಯಲ್ಲಿ ಓಡಾಡಬೇಡಿ ಇದು ನನಗೆ ಸೇರಿದ್ದು ಎಂದು ಧಮ್ಕಿ ಹಾಕುತ್ತಾನೆ…

ಪತ್ರಕರ್ತರಿಗೆ ಅವಾಜ್ ಹಾಕುವ ಈತ ಜಿಲ್ಲಾಧಿಕಾರಿಗಳ ಆದೇಶ ಇದೆ ಎನ್ನುತ್ತಾನೆ:

ಸಾರ್ವಜನಿಕರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರ ದೂರಿನ ಮೇರೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮದವರೆಂದು ಹೇಳಿದರು ಕೂಡ ಕೇಳಿಸಿಕೊಳ್ಳದೆ ನಮಗೆ ಧಮ್ಕಿ ಹಾಕಲು ಪ್ರಯತ್ನಿಸುತ್ತಾನೆ. ಕೇಳಿದ್ದಕ್ಕೆ ಜಿಲ್ಲಾಧಿಕಾರಿಗಳ ಆದೇಶವಿದೆ ಈ ರಸ್ತೆ ನನಗೆ ಸೇರಿದ್ದು ಇದಕ್ಕೆ ಬೇಲಿ ಹಾಕುತ್ತೇನೆ ಎಂದು ಹೇಳುತ್ತಾನೆ…

ಜಿಲ್ಲಾಧಿಕಾರಿಗಳೇ ಸರ್ಕಾರಿ ಜಾಗವನ್ನೇ ಆಕ್ರಮಿಸಿಕೊಂಡಿರುವ ಈತನ ಮೇಲೆ ಕ್ರಮ ತೆಗೆದುಕೊಳ್ಳಿ..! ಅಥವಾ ಈತ ಹೇಳುತ್ತಿರುವುದು ಸರಿ ಇದೆಯಾ ಪರೀಕ್ಷಿಸಿ..! ಸಾರ್ವಜನಿಕರಿಗೆ ನಮಗೆ ಇರುವ ಗೊಂದಲವನ್ನು ಬಗೆಹರಿಸಿ..!

ರಘುರಾಜ್ ಹೆಚ್.ಕೆ…9449553305….

RELATED ARTICLES

1 COMMENT

  1. Предлагаем вашему вниманию интересную справочную статью, в которой собраны ключевые моменты и нюансы по актуальным вопросам. Эта информация будет полезна как для профессионалов, так и для тех, кто только начинает изучать тему. Узнайте ответы на важные вопросы и расширьте свои знания!
    Узнать больше – https://nakroklinikatest.ru/

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!