Tuesday, May 6, 2025
Google search engine
Homeಶಿವಮೊಗ್ಗ""ಹುಷಾರ್"" ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ...

“”ಹುಷಾರ್”” ಇನ್ನು ಮುಂದೆ ರೋಟರಿ ಚಿತ್ತಾಗಾರಕ್ಕೆ ಹೋಗುವ ಹಾಗಿಲ್ಲ..! ಬದುಕಿರುವವರಿಗೆ ಓಡಾಡಲು ಬಿಡುವುದಿಲ್ಲ..! ಸತ್ತವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತಿಲ್ಲ..!ಇದು ಜಿಲ್ಲಾಧಿಕಾರಿಗಳ ಆದೇಶವಂತೆ..?! ರಸ್ತೆಗೆ ಬೀಳುತ್ತಂತೆ ಬೇಲಿ..! ವಿಡಿಯೋ ವೈರಲ್..!!!!!!!!!

ಶಿವಮೊಗ್ಗ : ನಗರದ ವಿದ್ಯಾನಗರದ ವ್ಯಾಪ್ತಿಗೆ ಒಳಪಡುವ ಬಿ ,ಹೆಚ್ ರಸ್ತೆಯಲ್ಲಿರುವ ರೋಟರಿ ಚಿತಾಗರಕ್ಕೆ ಹೋಗುವ ದಾರಿಯನ್ನು ಗಣೇಶ ಆಲಿಯಾಸ್ ಮಂಜಪ್ಪ ಎನ್ನುವ ವ್ಯಕ್ತಿ ಆಕ್ರಮಿಸಿಕೊಂಡಿದ್ದು. ಜೊತೆಗೆ ಅಲ್ಲಿರುವ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಜಾಗವನ್ನು ಆಕ್ರಮಿಸಿಕೊಂಡಿದ್ದು. ಸರ್ಕಾರಿ ಅಂಗನವಾಡಿಯ ಹೆಸರಿಗೆ ಈತ ಬಣ್ಣವನ್ನು ಬಳಿದಿದ್ದು ಬೇಲಿ ಹಾಕಿಕೊಂಡಿದ್ದಾನೆ. ಇಲ್ಲಿ ಓಡಾಡುವ ಜನರಿಗೆ ಧಮ್ಕಿ ಹಾಕುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರಿಗೂ ದಮ್ಕಿ ಹಾಕುತ್ತಾನೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ:

ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರು ಮಾಜಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಯಮುನಾ ರಂಗೇಗೌಡ ಅವರು ಜನರ ದೂರಿನ ಮೇರೆಗೆ ಈತನ ಬಳಿ ಹೀಗೆಲ್ಲ ಮಾಡುವುದು ಸರಿನಾ..? ತಪ್ಪಲ್ಲವೇ..? ಎಂದು ಪ್ರಶ್ನೆ ಮಾಡಿದ್ದಕ್ಕೆ. ಅವರ ವಿರುದ್ಧವೇ ತಿರುಗಿ ಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಯ್ಯುತ್ತಾನೆ…

ಸ್ಥಳೀಯವಾಗಿ ಓಡಾಡುವ ಜನರಿಗೂ ಬೈಯುತ್ತಾನೆ, ನಿಂದಿಸುತ್ತಾನೆ:

ಸ್ಥಳೀಯವಾಗಿ ಸಾರ್ವಜನಿಕರು ಸಾಮಾನ್ಯವಾಗಿ ಆ ರಸ್ತೆಯಲ್ಲಿ ಓಡಾಡುವಾಗ ಅವರಿಗೆ ಬೈಯುವುದು ನಿಂದಿಸುವುದು ಈ ರಸ್ತೆಯಲ್ಲಿ ಓಡಾಡಬೇಡಿ ಇದು ನನಗೆ ಸೇರಿದ್ದು ಎಂದು ಧಮ್ಕಿ ಹಾಕುತ್ತಾನೆ…

ಪತ್ರಕರ್ತರಿಗೆ ಅವಾಜ್ ಹಾಕುವ ಈತ ಜಿಲ್ಲಾಧಿಕಾರಿಗಳ ಆದೇಶ ಇದೆ ಎನ್ನುತ್ತಾನೆ:

ಸಾರ್ವಜನಿಕರ ಹಾಗೂ ಸ್ಥಳೀಯ ಮಹಾನಗರ ಪಾಲಿಕೆಯ ಸದಸ್ಯರ ದೂರಿನ ಮೇರೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮದವರೆಂದು ಹೇಳಿದರು ಕೂಡ ಕೇಳಿಸಿಕೊಳ್ಳದೆ ನಮಗೆ ಧಮ್ಕಿ ಹಾಕಲು ಪ್ರಯತ್ನಿಸುತ್ತಾನೆ. ಕೇಳಿದ್ದಕ್ಕೆ ಜಿಲ್ಲಾಧಿಕಾರಿಗಳ ಆದೇಶವಿದೆ ಈ ರಸ್ತೆ ನನಗೆ ಸೇರಿದ್ದು ಇದಕ್ಕೆ ಬೇಲಿ ಹಾಕುತ್ತೇನೆ ಎಂದು ಹೇಳುತ್ತಾನೆ…

ಜಿಲ್ಲಾಧಿಕಾರಿಗಳೇ ಸರ್ಕಾರಿ ಜಾಗವನ್ನೇ ಆಕ್ರಮಿಸಿಕೊಂಡಿರುವ ಈತನ ಮೇಲೆ ಕ್ರಮ ತೆಗೆದುಕೊಳ್ಳಿ..! ಅಥವಾ ಈತ ಹೇಳುತ್ತಿರುವುದು ಸರಿ ಇದೆಯಾ ಪರೀಕ್ಷಿಸಿ..! ಸಾರ್ವಜನಿಕರಿಗೆ ನಮಗೆ ಇರುವ ಗೊಂದಲವನ್ನು ಬಗೆಹರಿಸಿ..!

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!