Wednesday, April 30, 2025
Google search engine
Homeಶಿವಮೊಗ್ಗನಿನ್ನೆ ಬೆಳಿಗ್ಗೆ ಸನ್ಮಾನ ಇವತ್ತು ಮುಂಜಾನೆ ಜೀವ ಉಳಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ..!ಸಾರ್ಥಕವಾಯಿತು ಸನ್ಮಾನ..!!

ನಿನ್ನೆ ಬೆಳಿಗ್ಗೆ ಸನ್ಮಾನ ಇವತ್ತು ಮುಂಜಾನೆ ಜೀವ ಉಳಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ..!ಸಾರ್ಥಕವಾಯಿತು ಸನ್ಮಾನ..!!

ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿ ಶಾಮಕ ದಳದ ಶ್ರೀ ಮಹಾಬಲೇಶ್ವರ ಮರತ್ತೂರು ರವರಿಗೆ ಸೊರಬ ರೋಟರಿ ಕ್ಲಬ್ ವತಿಯಿಂದ ಸನ್ಮಾನ..

ಸೊರಬ:- ಶಿವಮೊಗ್ಗ ಜಿಲ್ಲೆ ಸೊರಬ ಅತ್ಯಂತ ತುರ್ತು ಪರಿಸ್ಥಿತಿಯಾದ ಬೆಂಕಿ ಆಕಸ್ಮಿಕ, ಬಾವಿ, ನದಿ, ಹೊಳೆ, ಶರಾವತಿ ಹಿನ್ನೀರು ಆಕಸ್ಮಿಕವಾಗಿ ಬಿದ್ದ ಜನ, ಜಾನವರು, ಪ್ರಾಣಿಗಳು ತಮ್ಮ ಜೀವದ ಹಂಗು ತೊರೆದು ಸಂರಕ್ಷಣೆ ಮಾಡುತ್ತಿರುವ ಅಗ್ನಿ ಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮಹಾಬಲೇಶ್ವರ ಮರತ್ತೂರು ರವರ ಕರ್ತವ್ಯ ಸೇವೆಯನ್ನೂ ಗುರುತಿಸಿದ ಸೊರಬ ರೋಟರಿ ಕ್ಲಬ್ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಸೊರಬ ರೋಟರಿ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀ ಮಹಾಬಲೇಶ್ವರ ಮರತ್ತೂರು ಮಾತನಾಡಿ ” ತುರ್ತು ಸೇವೆಯಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ನನ್ನ ಕರ್ತವ್ಯಕ್ಕೆ ಸಂದ ಗೌರವ. ಇನ್ನೂ ಮುಂದೂ ಕರ್ತವ್ಯದಿಂದ ಹೆಚ್ಚಿನ ಜವಾಬ್ದಾರಿಯೊಂದಿಗೆ ಸಮಾಜಕ್ಕೆ ಕರ್ತವ್ಯವನ್ನೂ ಸಲ್ಲಿಸುತ್ತೇನೆ. ಈ ಸನ್ಮಾನ ಬರೀ ನನಗೆ ಮಾತ್ರ ಸನ್ಮಾನ ಸಲ್ಲುತ್ತಿರುವುದು ಅಲ್ಲ ನನ್ನ ಅಗ್ನಿ ಶಾಮಕ ದಳದಲ್ಲಿ ಕರ್ತವ್ಯ ನಿರತ ತಂಡಕ್ಕೆ ಸಲ್ಲಿಸಿದ ಸನ್ಮಾನ ಎಂದು ನುಡಿದರು.

ರಾತ್ರಿ ಹೋಗಿದ್ದೂ ಬಹಿರ್ದಶೆಗೆ – ಬಿದ್ದಿದ್ದು ಬಾವಿಗೆ – ಕಾಪಾಡಿದ್ದೂ ಅಗ್ನಿ ಶಾಮಕ ದಳ ::

ಸೊರಬ :- ಸೊರಬ ತಾಲ್ಲೂಕು ಹೊಸಬಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏನ್ ದೊಡ್ಡೇರಿ ಹನುಮಂತಪ್ಪ ತಂದೆ ಕಣ್ಣಪ್ಪ ಸುಮಾರು 48 ವರ್ಷ ರಾತ್ರಿ ಬಹಿದರ್ಶೆಗೆ ಹೋದಾಗ ಪಕ್ಕದ ಮನೆ ನಾಗರಾಜ ತಂದೆ ಹಾಲಪ್ಪ ಬಾವಿಯಲ್ಲಿ ಕಾಲು ಜಾರಿ 60 ಅಡಿ ಆಳದ ಬಾವಿ ಬಿದ್ದಿದ್ದು ಸೊರಬ ಅಗ್ನಿ ಶಾಮಕ ದಳ ಸತತವಾಗಿ 02 ತಾಸುಗಳ ಅವಿರತ ಶ್ರಮದಿಂದ ಬಾವಿಗೆ ಬಿದ್ದ ಹನುಮಂತಪ್ಪ ರವರನ್ನು ರಕ್ಷಣೆ ಮಾಡಿದ್ದಾರೆ. ಬಾವಿಯಲ್ಲಿ ಬಿದ್ದ ಗಾಯಳುಗಳನ್ನೂ ಸೊರಬ ಸರ್ಕಾರಿ ಆಸ್ಪತ್ರೆ ಸೂಕ್ತ ಚಿಕಿತ್ಸೆಗಾಗಿ ದಾಖಲಿಸಿದ್ದೂ ಹನುಮಂತಪ್ಪರವರ ಅರೋಗ್ಯವಾಗಿದ್ದಾರೆ.

ಬದುಕುಳಿದ ಗಾಯಳು ಹನುಮಂತ ರವರು ಅಗ್ನಿ ಶಾಮಕ ದಳದ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸ್ಥಳೀಯರೂ ಸಹ ಸತತವಾಗಿ 2 ಗಂಟೆಗಳ ಕಾಲ ಅವಿರತ ಶ್ರಮವಹಿಸಿ ಹನುಮಂತಪ್ಪ ರವರನ್ನು ಸಂರಕ್ಷಣೆ ಮಾಡಿದ ಅಗ್ನಿ ಶಾಮಕ ದಳದವರ ಕರ್ತವ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಕಾರ್ಯಾಚರಣೆಯಲ್ಲಿ ಮಹಾಬಲೇಶ್ವರ ಅಗ್ನಿ ಶಾಮಕ ಠಾಣಾಧಿಕಾರಿ, ಚಾಲಕ ಪ್ರಶಾಂತ್ ಏನ್. ಪ್ರಮುಖ ಅಗ್ನಿ ಶಾಮಕರು ಮಂಜುನಾಥ ಎಂ. ಆರ್ ಹಾಗೂ ಅಗ್ನಿ ಶಾಮಕರು ಪ್ರದೀಪ್ ಏನ್. ಜಿ, ಪರುಶುರಾಮಪ್ಪ ಏನ್. ಎಚ್ ಎಂ ಪ್ರಸನ್ನ ಕುಮಾರ್, (ಬಾವಿಯಿಳಿದು ಸಾಹಸ ಮಾಡಿ ಬಾವಿಯಿಂದ ಮೇಲಕ್ಕೆತ್ತಿದ ಅಗ್ನಿ ಶಾಮಕರು ) ಅಗ್ನಿ ಶಾಮಕ ದಳ ಸೊರಬ ಹನುಮಂತಪ್ಪರವರನ್ನು ಸಂರಕ್ಷಣೆ ಮಾಡುವಲ್ಲಿ ಭಾಗವಹಿಸಿದ್ದರು

✒️ ಓಂಕಾರ ಎಸ್. ವಿ. ತಾಳಗುಪ್ಪ

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...