
ಬೆಂಗಳೂರು:- ಸಾಮಾಜಿಕ ಭಧ್ರತಾ ಯೋಜನೆಯಡಿ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸುವ ವ್ಯವಸ್ಥೆಗೆ ಸರ್ಕಾರ ಚಾಲನೆ ನೀಡಿದೆ.
ದೂರವಾಣಿ ಮೂಲಕವೇ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ಮಂಜೂರಾತಿ ಮಾಡುವ ವಿನೂತನ ಕಾರ್ಯಕ್ರಮ ಇದಾಗಿದ್ದು, ಹಲೋ ಕಂದಾಯ ಸಚಿವರೇ 155245 ಸಂಖ್ಯೆಗೆ ಕರೆ ಮಾಡುವ ಮೂಲಕ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾಗಿದೆ.
ಕುಟುಂಬದ ವಾರ್ಷಿಕ ಆದಾಯ 32000/- ಗಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು, ಅವಿವಾಹಿತ / ವಿಚಿಡಿತ ಮಹಿಳೆಯರಿಗೆ ಮಾಸಿಕ ಪಿಂಚಣಿ ಸೌಲಭ್ಯಕ್ಕೆ ದೂರವಾಣಿ ಮುಖಾಂತರ ಕೋರಿಕೆ ಸಲ್ಲಿಸಬಹುದಾಗಿದೆ.
ನಾಗರೀಕ ಶುಲ್ಕ ರಹಿತ ಸಹಾಯವಾಣಿ 155245 ಕ್ಕೆ ಉಚಿತವಾಗಿ ದೂರವಾಣಿ ಕರೆ ಮಾಡುವ ಮೂಲಕ ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆ ತಿಳಿಸಬೇಕು.
ಗ್ರಾಮ ಲೆಕ್ಕಿಗರು ಅರ್ಜಿದಾರರ ಮನೆ ಬಾಗಿಲಿಗೆ ಹೋಗಿ ನವೋದಯ ಆಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನೂ ಸಂಗ್ರಹಿಸಿ ಅರ್ಹ ಪಲಾನುಭವಿಗಳಿಗೆ 72 ಗಂಟೆಯೊಳಗೆ ನಾಡಕಛೇರಿ ಉಪ ತಹಸೀಲ್ದಾರ್ ರವರಿಂದ ಪಿಂಚಣಿಗೆ ಅನುಮೋದನೆ ನೀಡಲಾಗುವುದು. ಅರ್ಹ ಪಲಾನುಭವಿಗಳಿಗೆ ಮನೆಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ವಿತರಣೆ ಮಾಡಲಾಗುತ್ತದೆ.
✒️ ಓಂಕಾರ ಎಸ್. ವಿ ತಾಳಗುಪ್ಪ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ::9449553305..