ಶಿವಮೊಗ್ಗ :: ಜ್ಯೋತಿ ನಗರದ ನಿವಾಸಿಯಾದ ಶಿವಣ್ಣ ಎಂಬುವರ ಮಗನಾದ ದಿನೇಶ್ ಕುಮಾರ್ ಆಲಿಯಾಸ್ ದಿನೇಶ್ ಎಂಬ ವ್ಯಕ್ತಿಗೆ ಮಂಜುಳಾ ಎಂಬ ಯುವತಿಯೊಡನೆ ಈಗ 12 ವರ್ಷದ ಹಿಂದೆ ಅಂದರೆ 2010ರಲ್ಲಿ ವಿವಾಹವಾಗುತ್ತದೆ. ಇವರಿಗೆ ಖುಷಿ 11 ವರ್ಷದ ಮಗಳು, ಮನ್ವಿತಾ 6 ವರ್ಷದ ಮಗಳು ಇರುತ್ತಾರೆ. ಇವರು ಶಿವಮೊಗ್ಗದ ವಿದ್ಯಾನಗರದ ಪ್ರಿಯಾಂಕ ಲೇಔಟ್ ನಲ್ಲಿ ವಾಸವಾಗಿರುತ್ತಾರೆ. ದಿನೇಶ್ ಮೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದು ಶಿವಮೊಗ್ಗ, ಭದ್ರಾವತಿ, ಗೋಪಾಲ, ಸಾಗರದಲ್ಲಿ ಕೆಲಸ ಮಾಡಿ ನಂತರ ಹುದ್ದೆಯಲ್ಲಿ ಮುಂಬಡ್ತಿ ಪಡೆದು ಸೀನಿಯರ್ ಅಸಿಸ್ಟೆಂಟ್ ಹುದ್ದೆಗೆ ಮುಂಬಡ್ತಿ ನಂತರ ಶಿವಮೊಗ್ಗದ ರೈಲ್ವೆ ಸ್ಟೇಷನ್ ಹತ್ತಿರ ಇರುವ ಮೆಸ್ಕಾಂ ಕಚೇರಿಯಲ್ಲಿ ಈಗ 2 ವರ್ಷಗಳ ಹಿಂದೆ ಕೆಲಸ ಮಾಡಿಕೊಂಡಿದ್ದ ದಿನೇಶ್ ಯಾವಾಗಲೂ ಮನೆಗೆ ತಡವಾಗಿ ಬರುತ್ತಿದ್ದ ರಜಾ ದಿನಗಳಲ್ಲೂ ಸಹ ಕೆಲಸ ಇದೆ ಎಂದು ಹೇಳಿ ಹೋಗುತ್ತಿದ್ದ ಸರಿಯಾದ ಸಮಯಕ್ಕೆ ಬರುತ್ತಿಲ್ಲವಾದ್ದರಿಂದ ದಿನೇಶ್ ಮತ್ತು ಹೆಂಡತಿ ಮಂಜುಳಾ ನಡುವೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಹೆಂಡತಿ ಮಂಜುಳಾಗೆ ಗಂಡ ದಿನೇಶ್ ಮೇಲೆ ಈತ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ಅದರಿಂದ ಈತ ಮನೆಗೆ ಲೇಟಾಗಿ ಬರುತ್ತಿದ್ದಾನೆ ಸುಳ್ಳು ಹೇಳುತ್ತಿದ್ದಾನೆ ಎಂದು ಅನುಮಾನ ಬರುತ್ತದೆ. ಅದನ್ನು ತನ್ನ ಸಂಬಂಧಿಕರ ಹತ್ತಿರ ತನ್ನ ಅಣ್ಣನ ಹತ್ತಿರ ಸಾಕಷ್ಟು ಸಲ ಹೇಳಿಕೊಂಡಿರುತ್ತಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಸಲ ಗಲಾಟೆ ನಡೆಯುತ್ತಿರುತ್ತದೆ.
ಆ ದಿನ ರಾತ್ರಿ ನಡೆದಿದ್ದೇನು..?!
ಈಗ 2 ತಿಂಗಳ ಹಿಂದೆ ಅಂದರೆ ದಿನಾಂಕ 7/ 9/ 2022ರಂದು ಯಥಾ ಪ್ರಕಾರ ದಿನೇಶ್ ತಡರಾತ್ರಿ ಮನೆಗೆ ಬರುತ್ತಾನೆ ಇದನ್ನು ಮಂಜುಳಾ ಪ್ರಶ್ನಿಸುತ್ತಾಳೆ ಆಗ ಇಬ್ಬರ ನಡುವೆ ಗಲಾಟೆ ನಡೆಯುತ್ತದೆ ಈ ಗಲಾಟೆ ಅತಿರೇಕಕ್ಕೆ ಹೋಗುತ್ತದೆ ಆಗ ಇವರ ಗಲಾಟೆಯ ಶಬ್ದ ಕೇಳಿದ ಮಕ್ಕಳು ಅಡುಗೆ ಮನೆ ಹತ್ತಿರ ಬಂದು ನೋಡುತ್ತಾರೆ ಆಗ ದಿನೇಶ್ ಮಕ್ಕಳಿಗೆ ಹೆದುರಿಸಿ ಹೋಗಿ ಮಲಗಿಕೊಳ್ಳಿ ಎಂದು ಹೇಳುತ್ತಾನೆ. ಆಗ ಮಕ್ಕಳು ಹೋಗಿ ಬೆಡ್ ರೂಮ್ನಲ್ಲಿ ಮಲಗಿಕೊಳ್ಳುತ್ತಾರೆ ನಂತರ ಒಂದೇ ಸಲ ದಿಡೀರ್ ಎನ್ನುವ ಶಬ್ದ ಬಂದಾಗ ಮಕ್ಕಳು ಗಾಬರಿಗೊಂಡು ಎದ್ದು ಬಂದು ನೋಡಿದಾಗ ತನ್ನ ತಾಯಿ ಮಂಜುಳಾ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾಳೆ ತಂದೆಯ ಕೈಯಲ್ಲೂ ರಕ್ತ ಬರುತ್ತಿರುತ್ತದೆ .
ಇದರಿಂದ ಗಾಬರಿಗೊಂಡ ಮಕ್ಕಳು ತನ್ನ ಅಜ್ಜಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ ಕೂಡಲೇ ಮಂಜುಳಾ ಸಂಬಂಧಿಕರು ಮನೆಗೆ ಬರುತ್ತಾರೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಶವವಾಗಿ ಮಂಜುಳಾ ಬಿದ್ದಿರುತ್ತಾಳೆ. ಇತ್ತ ಆಕೆಯನ್ನು ಕೊಂದ ಪತಿ ದಿನೇಶ್ ತಾನು ಕೈಗೆ ಚಾಕುವನ್ನು ಚುಚ್ಚಿಕೊಂಡಿರುತ್ತಾನೆ ಈತನನ್ನು ಕೂಡಲೇ ಆಂಬುಲೆನ್ಸ್ ನಿಂದ ಆಸ್ಪತ್ರೆಗೆ ಸೇರಿಸುತ್ತಾರೆ..
ಪತ್ನಿಯನ್ನು ಕೊಂದು ತಾನು ಕೈಗೆ ಚಾಕು ಚುಚ್ಚಿಕೊಂಡು ಆಸ್ಪತ್ರೆಗೆ ಸೇರಿದ ದಿನೇಶ್ ಇದು ಕೌಟುಂಬಿಕ ಕಲಹಕ್ಕೆ ಆದ ಕೊಲೆ ಅಲ್ಲ ಇದು ಅನೈತಿಕ ಸಂಬಂಧಕ್ಕೆ ಆದ ಕೊಲೆ ಎಂದು ಪತ್ರಿಕೆ ಸುದ್ದಿ ಪ್ರಕಟಿಸಿತ್ತು ::
ತಡರಾತ್ರಿ ಮನೆಗೆ ಲೇಟಾಗಿ ಬಂದ ದಿನೇಶ್ ನನ್ನು ಪ್ರಶ್ನಿಸಿದ ಮಂಜುಳಾ ಗೆ ಚಾಕುವಿನಿಂದ ಕುತ್ತಿಗೆ ಎದೆ ಭಾಗವನ್ನು ಚುಚ್ಚಿ ಕೊಲೆ ಮಾಡಿದ ದಿನೇಶ್ ತಾನು ಕೈಗೆ ಚಾಕು ಚುಚ್ಚಿಕೊಳ್ಳುತ್ತಾನೆ.. ಆದರೆ ಈತ ಈ ಕೊಲೆ ಮಾಡಲು ಕಾರಣವೇನು ಗೊತ್ತಾ..?! ಈತ ಇನ್ನೊಬ್ಬ ಮಹಿಳೆಯೊಂದಿಗೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧ ಮತ್ತು ಆಕೆ ಕೊಲೆ ಮಾಡಲು ಹೇಳಿದ್ದರಿಂದ ಈತ ಪ್ರೇರಣೆಯಾಗಿ ಈ ಕೊಲೆ ಮಾಡಿದ್ದ ಇದನ್ನು ತನಿಖಾ ವರದಿ ಮಾಡಿದ ಪತ್ರಿಕೆ ಅಂದೆ ಸುದ್ದಿಯಲ್ಲಿ ಇದು ಕೌಟುಂಬಿಕ ಕಲಹದಿಂದ ಆದ ಕೊಲೆ ಅಲ್ಲ.. ಅನೈತಿಕ ಸಂಬಂಧದಿಂದ ಆದ ಕೊಲೆ ..ಎಂದು ಸುದ್ದಿ ಪ್ರಕಟಿಸಿತ್ತು ಅಂದು ಈ ಸುದ್ದಿಯನ್ನು ನೋಡಿದ ಮಂಜುಳಾ ನ ಸಂಬಂಧಿಕರು ಪತ್ರಿಕೆಯ ಸುದ್ದಿ ನಿಜ ಸಾರ್ ಎಂದು ಕರೆ ಮಾಡಿ ತಿಳಿಸಿದ್ದರು.. ಅದು ಈಗ ನಿಜವಾಗಿದೆ ಆ ಮಹಿಳೆ ಪೊಲೀಸರ ಅತಿಥಿಯಾಗಿ ಜೈಲು ಪಾಲಾಗಿದ್ದಾಳೆ…
ಯಾರು ಆ ಮಹಿಳೆ ..?!ಆ ಮಹಿಳೆಯನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆಯ ಪಾತ್ರವೇನು…?!
ದಿನೇಶ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಮಂಜುಳಾ ಕೊಲೆಗೆ ಕಾರಣವಾಗಿದ್ದ ಆ ಮಹಿಳೆ ವಿದ್ಯಾನಗರದ ನಿವಾಸಿ ಗಾಯಿತ್ರಿ ಎಂದು ಆಕೆಯ ಪತಿಯ ಹೆಸರು ಕಲ್ಲನಾಥ್ ಪತಿಯನ್ನು ಕಳೆದುಕೊಂಡು ವಿಧವೆಯಾಗಿರುವ ಗಾಯತ್ರಿಗೆ ಒಂದು ಮಗುವಿದೆ.. ಈಕೆ ಕೂಡ ಎಂ ಆರ್ ಎಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕ್ವಾಟ್ರಸ್ ನಲ್ಲಿ ವಾಸವಾಗಿದ್ದಾಳೆ… ಈಕೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ದಿನೇಶ್ ಮಂಜುಳಾ ಸಾವಿಗೆ ಮುಹೂರ್ತ ಫಿಕ್ಸ್ ಮಾಡಿದ್ದ.. ಇದಕ್ಕೆ ಪೂರಕವಾಗಿ ಗಾಯಿತ್ರಿ ಕೂಡ ದಿನೇಶ್ಗೆ ಸಹಕಾರ ನೀಡಿದ್ದಳು ಕೊಲೆ ಮಾಡಲು ಪ್ರೇರಣೆಯಾಗಿದ್ದಳು… ಇದನ್ನು ಸಮಗ್ರವಾಗಿ ತನಿಖೆ ನಡೆಸಿದ ತುಂಗಾ ನಗರದ ಪಿ ಐ ಮಂಜುನಾಥ್ ಅವರ ನೇತೃತ್ವದ ತಂಡ ಗಾಯತ್ರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ…
ಪತ್ರಿಕೆ ನಡೆಸಿದ ತನಿಖಾವರದಿ ನಿಜವಾಗಿದ್ದು ಕೊಲೆ ಮಾಡಿದ ದಿನೇಶ್ ಹಾಗೂ ಕೊಲೆಗೆ ಪ್ರೇರಣೆಯಾಗಿದ್ದ ಗಾಯಿತ್ರಿ ಈಗ ಜೈಲುಕಂಬಿ ಎಣಿಸುತ್ತಿದ್ದಾರೆ. ಕೊನೆಗೂ ಅನೈತಿಕ ಸಂಬಂಧದ ರೂವಾರಿ ಗಾಯತ್ರಿ ಮೇಲೆ ದಿಟ್ಟ ಕ್ರಮ ತೆಗೆದುಕೊಂಡು ಬಂಧಿಸಿ ಕೇಸ್ ದಾಖಲಿಸಿ ಜೈಲಿಗೆ ಕಳಿಸಿರುವ ಪೊಲೀಸರ ಮೇಲೆ ಹಾಗೂ ಮೊದಲೇ ತನಿಖ ವರದಿ ನಡೆಸಿ ವರದಿ ಮಾಡಿದ ಪತ್ರಿಕೆಯ ಮೇಲೆ ಮಂಜುಳಾ ಬಂಧುಗಳು ಸಂತಸ ವ್ಯಕ್ತಪಡಿಸಿದ್ದು ಮಂಜುಳಾ ಸಾವಿಗೆ ಸ್ವಲ್ಪಮಟ್ಟಿನ ಸಮಾಧಾನ ಸಿಕ್ಕಿದೆ ಆದರೆ ಮಂಜುಳಾ ಗೆ ಎರಡು ಹೆಣ್ಣು ಮಕ್ಕಳು ಇರುವುದರಿಂದ ತಾಯಿ ಇಲ್ಲದೆ ಅನಾಥವಾಗಿರುವ ಆ ಹೆಣ್ಣು ಮಕ್ಕಳ ಮುಂದಿನ ಜೀವನಕ್ಕೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ… ಆಕೆಗೆ ನ್ಯಾಯಯುತವಾಗಿ ಬರಬೇಕಾದ ಆಸ್ತಿಪಾಸ್ತಿಗಳು ಬರಬೇಕೆಂದು ಪತ್ರಿಕೆ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ…
ರಘುರಾಜ್ ಹೆಚ್. ಕೆ..9449553305…