
ಶಿವಮೊಗ್ಗ: ನಗರದ ಮೆಘನ್ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಲ್ಲದೆ ರೋಗಿಗಳು ಹಾಗೂ ಅವರಿಗೆ ಸಂಬಂಧಪಟ್ಟವರು ಪರದಾಡುತ್ತಿದ್ದು ನೂಕು ನುಗ್ಗಲು ಏರ್ಪಟ್ಟಿದೆ …
ಕೌಂಟರ್ ನಲ್ಲಿ ರಕ್ತ ಪರೀಕ್ಷೆಗೆ ಬಿಲ್ ಕಟ್ಟಿಸಿಕೊಳ್ಳುವವರು ಒಬ್ಬರೇ, ರೋಗಿಗಳ ಪ್ರವೇಶಕ್ಕೆ ರಶೀದಿ ಹಾಕುವವರು ಒಬ್ಬರೇ ಹಾಗಾದರೆ ಉಳಿದ ಸಿಬ್ಬಂದಿಗಳು ಎಲ್ಲಿ ..?! ದಿನನಿತ್ಯ ಸಾವಿರಾರು ಜನ ಬರುವ ಆಸ್ಪತ್ರೆಯ ಪರಿಸ್ಥಿತಿ ಹೀಗಾದರೆ ಕಥೆ ಏನು..?! ಜನ ಪತ್ರಿಕೆಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..
ದಯವಿಟ್ಟು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳನ್ನು ನೋಡಿಕೊಳ್ಳುತ್ತಿರುವ ಏಜೆನ್ಸಿ ಇತ್ತ ಗಮನಹರಿಸಿ ಸೂಕ್ತ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು..
ಬಹುತೇಕ ಬಡವರೇ ಬರುವ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಲ್ಲದೆ ರೋಗಿಗಳು ಹಾಗೂ ಅವರ ಪೋಷಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಅದು ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ದುರಂತವೇ ಸರಿ… ಮೆಘನ್ ನಲ್ಲಿ ನಡೆಯುತ್ತಿರುವ ಕರ್ಮಕಾಂಡಗಳು ಮುಂದಿನ ದಿನಗಳಲ್ಲಿ ಬಯಲಾಗಲಿದೆ…
ರಘುರಾಜ್ ಹೆಚ್.ಕೆ…9449553305…