Thursday, June 19, 2025
Google search engine
Homeಶಿವಮೊಗ್ಗತೀರ್ಥಹಳ್ಳಿ :ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿ -ರಾಶಿ .ಪ್ರಚಾರಕ್ಕಾಗಿ ಫೋಸ್ ಕೊಡುವ ಪಂಚಾಯಿತಿ...

ತೀರ್ಥಹಳ್ಳಿ :ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ರಾಶಿ -ರಾಶಿ .ಪ್ರಚಾರಕ್ಕಾಗಿ ಫೋಸ್ ಕೊಡುವ ಪಂಚಾಯಿತಿ ಸದಸ್ಯರು ಎಲ್ಲಿ..? ಸ್ವಚ್ಛಭಾರತ್ ಅಂದ್ರೆ ಇದೇನಾ ? ನೂತನ ಕಾರ್ಯನಿರ್ವಾಹಕ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದರಾಶಿಗೆ ಮುಕ್ತಿ ನೀಡಲಿ ಆ ಮೂಲಕ ಸ್ವಚ್ಛಭಾರತ್ ಆಂದೋಲನಕ್ಕೆ ನಾಂದಿ ಹಾಡಲಿ..!!

ತೀರ್ಥಹಳ್ಳಿ: ಸ್ವಚ್ಛ ಭಾರತ ಘೋಷಣೆ ಮತ್ತು ಅನುಷ್ಠಾನ ಎಲ್ಲೆಡೆ ರಾರಾಜಿಸುತ್ತಿವೆ . ಆದರೆ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಮೇಳಿಗೆ — ಕೊಪ್ಪ ಹೋಗುವ ಬಹುದೊಡ್ಡ ಸರ್ಕಲ್ ನಲ್ಲಿ ವಿದ್ಯುತ್ ಟ್ರಾನ್ಸ್ ಫರ್ಮ್ ಇರುವ ಕಂಬದ ಕೆಳಗೆ ಅನೇಕ ದಿನಗಳಿಂದ ಕಸದ ತೊಟ್ಟಿ ತುಂಬಿ ಮತ್ತು ಅದರ ಆಜುಬಾಜಿನಲ್ಲಿ ಕಸದ ರಾಶಿ ರಾಶಿ ಬಿದ್ದಿವೆ .ಕೊಳೆತು ನಾರುತ್ತಿದ್ದು ಕ್ರಿಮಿಕೀಟಗಳು ತುಂಬಿಕೊಂಡು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರತೊಡಗಿದೆ

ಜೊತೆಯಲ್ಲಿ ನೀರಿನ ತೇವಾಂಶದಿಂದ ಪಕ್ಕದಲ್ಲೇ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಗ್ರೌಂಡ್ ಆಗಿ ಸಾರ್ವಜನಿಕರ ಜೀವಕ್ಕೆ ಮತ್ತು ಪ್ರಾಣಿಗಳಿಗೆ ಜೀವಕ್ಕೆ ಅಪಾಯವಿರುವ ಸ್ಥಿತಿ ಇದೆ .

ಜನ ಛೀಮಾರಿ ಹಾಕುತಿದ್ದಾರೆ?


ಬಹುಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ನೂರಾರು ಜನ ಬಸ್ಸಿನ ವ್ಯವಸ್ಥೆ ಕಾದು ನಿಲ್ಲುವ ಪ್ರಮುಖ ಸ್ಥಳದಲ್ಲಿ ಈ ವ್ಯವಸ್ಥೆಯನ್ನು ಕಂಡು ಜನರು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಛೀಮಾರಿ ಹಾಕತೊಡಗಿದ್ದಾರೆ .

ಪೋಸ್ ಕೊಡುವ ನಾಯಕರೇ ನಿಮ್ಮ ಕಣ್ಣಿಗೆ ಇದು ಕಾಣುವುದಿಲ್ಲವೇ?


ಯಾರೋ ಮಾಡಿದ ಕೆಲಸಗಳಿಗೆ ಫೋಟೊ ತೆಗೆದು ಫೋಸ್ ಕೊಡುವ ಜನಪ್ರತಿನಿಧಿಗಳ ಕಣ್ಣಿಗೆ ಇದೆಲ್ಲ ಕಾಣಿಸದೇ ಇರುವುದು ದುರಂತ ಅಲ್ಲದೆ ಮತ್ತೇನು ?

ನೂತನ ಕಾರ್ಯನಿರ್ವಾಹಕ ಅಧಿಕಾರಿಗಳು ಇತ್ತ ಗಮನ ಹರಿಸಲಿ:

ಜನಪರ ಕಾಳಜಿಯುಳ್ಳ
ನೂತನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ತಕ್ಷಣ ಗಮನ ಹರಿಸಲಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಲ್ಲಿ ಕಸದ ರಾಶಿ ಗಳಿವೆ ಅದನ್ನು ಸ್ವಚ್ಛಗೊಳಿಸಲು ಆದೇಶ ನೀಡಲಿ ಎಂದು ಗ್ರಾಮಸ್ಥರ ಒತ್ತಾಯವಾಗಿದೆ .


ಲಿಯೋ ಆರೋಜ….

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!