Home ಶಿವಮೊಗ್ಗಲೋಕಾಯುಕ್ತ ಪೊಲೀಸರು ತಾಲೂಕಿಗೆ ಬರುವ ಮುನ್ನವೇ ಒಂದು ಕೇಸ್ ರೆಡಿ..! ಖಾತೆ ಬದಲಾವಣೆ ಅರ್ಜಿ ಸಲ್ಲಿಸಿ 06 ತಿಂಗಳು ಕಳೆಯುತ್ತಾ ಬಂದರೂ ಗಂಡನ ಸ್ವತ್ತನ್ನು ಹೆಂಡತಿಯ ಹೆಸರಿಗೆ ಖಾತಾ ಬದಲಾವಣೆ ಮಾಡಲು ವಿಧವೆಗೆ ಗೋಳಾಡಿಸುತ್ತಿರುವ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ದುರಾಡಳಿತ – ಬೇಸತ್ತ ವಿಧವೆ ನಾಳೆ ಸಾಗರಕ್ಕೆ ಆಗಮಿಸುವ ಮಾನ್ಯ ಲೋಕಾಯುಕ್ತರಿಗೆ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿ ದೂರು ದಾಖಲಿಸಲು ತೀರ್ಮಾನ..!!

ಲೋಕಾಯುಕ್ತ ಪೊಲೀಸರು ತಾಲೂಕಿಗೆ ಬರುವ ಮುನ್ನವೇ ಒಂದು ಕೇಸ್ ರೆಡಿ..! ಖಾತೆ ಬದಲಾವಣೆ ಅರ್ಜಿ ಸಲ್ಲಿಸಿ 06 ತಿಂಗಳು ಕಳೆಯುತ್ತಾ ಬಂದರೂ ಗಂಡನ ಸ್ವತ್ತನ್ನು ಹೆಂಡತಿಯ ಹೆಸರಿಗೆ ಖಾತಾ ಬದಲಾವಣೆ ಮಾಡಲು ವಿಧವೆಗೆ ಗೋಳಾಡಿಸುತ್ತಿರುವ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ದುರಾಡಳಿತ – ಬೇಸತ್ತ ವಿಧವೆ ನಾಳೆ ಸಾಗರಕ್ಕೆ ಆಗಮಿಸುವ ಮಾನ್ಯ ಲೋಕಾಯುಕ್ತರಿಗೆ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿ ದೂರು ದಾಖಲಿಸಲು ತೀರ್ಮಾನ..!!

by EDITOR NEWS WARRIORS
0 comments

ಕಾರ್ಗಲ್ – ಜೋಗ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಸಾರ್ವಜನಿಕರ ಸೇವೆ ನೀಡುವಲ್ಲಿ ವಿಫಲತೆಯ ಆಡಳಿತಕ್ಕೆ ಸಂಬಂಧ ಪಟ್ಟಂತೆ ಒಂದಿಲ್ಲೊಂದು ಸುದ್ದಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

ದಿನಾಂಕ 31/08/2021 ರಂದು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ಕಾರ್ಯಾಲಯಕ್ಕೆ ಖುದ್ದಾಗಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ತನ್ನ ಪತಿಯ ಮರಣ ನಂತರ ತನ್ನ ಪತಿಯ ಸ್ವತ್ತನ್ನೂ ತನ್ನ ಹೆಸರಿಗೆ ಪೌತಿ ಬದಲಾವಣೆ ಮಾಡಿಕೊಡುವಂತೆ ಕಾನೂನು ಪ್ರಕಾರ ಸಂಬಂಧ ಪಟ್ಟ ಪೂರಕ ದಾಖಲಾತಿಗಳನ್ನೂ ನೀಡಿ, 06 ಮಾಸಗಳೇ ಉರುಳುತ್ತಾ ಬಂದರೂ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಆಡಳಿತಗಾರರು ” ಇಂದು ಭಾ, ನಾಳೆ ಭಾ ” ಎಂದು ಸತಾಯಿಸುತ್ತಿರುವ ಬಗ್ಗೆ ದಾಖಲಾತಿ ಸಮೇತ ಮಾಹಿತಿಯೊಂದಿಗೆ ನಿನ್ನೆ ದಿನ ನನ್ನ ಮನೆಗೆ ನ್ಯಾಯ ಕೊಡಿಸುವಂತೆ ಹಿರಿಯ ನಾಗರೀಕರಾದ ವಿಧವಾ ಮಹಿಳೆ ಶ್ರೀಮತಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ಅಳುತ್ತಾ ತಮ್ಮ ಆಳಲನ್ನೂ ತೋಡಿಕೊಂಡರು.

ಕಾರ್ಗಲ್ ಜೋಗ ಪಂಚಾಯಿತಿ ಆಡಳಿತಗಾರನಾದ ಮುಖ್ಯಾಧಿಕಾರಿಗಳು, ಅಧ್ಯಕ್ಷರು, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸಮುಚಿತ ಮಾರ್ಗದಲ್ಲಿ ವಿಧವಾ ಹಿರಿಯ ನಾಗರೀಕರಾದ ಸುಲೋಚನಾ ಕೋಂ ರಾಜು ದೊರೆಸ್ವಾಮಿ ರವರ ಪೌತಿ ಖಾತಾ ಬದಲಾವಣೆಯ ಸರ್ಕಾರಿ ಸೇವೆಗೆ ಸತಾಯಿಸುವುದು, ಅನಗತ್ಯ ವಿಳಂಬ ಹಾಗೂ ಮಾನಸಿಕವಾಗಿ ಕಿರುಕುಳ ವಿರುದ್ಧ ಸೂಕ್ತ ನ್ಯಾಯಕ್ಕಾಗಿ ನಾಳೆ ದಿನ ಸಾಗರಕ್ಕೆ ಸಾರ್ವಜನಿಕರ ಕುಂದು – ಕೊರತೆ ಸಭೆಯಲ್ಲಿ ಕಾನೂನು ಪಾಲನೆಯೊಂದಿಗೆ ದೂರು ಸಲ್ಲಿಸಲಾಗುವುದು.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್.ಕೆ…9449553305….

Related Articles

Leave a Comment

Latest news
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): 98.53% ಡಿಜಿಟಲೀಕರಣ ಪೂರ್ಣ..! Big news :  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ  ಮಹತ್ವದ ಬದಲಾವಣೆ..! ಯಾರಿಗೆ ಯಾವ ಸ್ಥಾನ..?! ಕೋಟೆ ಪೊಲೀಸರ ಖಡಕ್ ಕಾರ್ಯಾಚರಣೆ ವಿದ್ಯಾನಗರದ ಎವರ್ ಗ್ರೀನ್ ಬ್ಯೂಟಿ ಪಾರ್ಲರ್ ಮೇಲೆ ದಾಳಿ  ಒಬ್ಬನ ಬಂಧನ ಇನ್ನೊಬ್ಬಳು ಪ... Big news : ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಬೃಹತ್ ಶಸ್ತ್ರಚಿಕಿತ್ಸೆ: 22 ಹಿರಿಯ ಭೂವಿಜ್ಞಾನಿಗಳ ವರ್ಗಾವಣೆ..! ದ... ಜಿಲ್ಲೆಯಲ್ಲಿ ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಕ್ರಮ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ..! ಬರ ಪರಿಸ್ಥಿತಿ ನಿರ್ವಹಣೆ: ತಂಡವಾಗಿ ಕರ್ತವ್ಯ ನಿರ್ವಹಿಸೋಣ – ಜಿಲ್ಲಾಧಿಕಾರಿಗಳ ಕರೆ..! ಸಾಗುವಾನಿ ಮರಗಳ ಕಡಿತಲೆ ಕರಕುಚ್ಚಿಯ ಕೃಷ್ಣಮೂರ್ತಿ ಬಂಧನ..! Shivamogga breaking : ಬ್ಯೂಟಿ ಸ್ಪಾ ಅಡ್ಡೆ ಮೇಲೆ ತುಂಗಾನಗರ ಪೊಲೀಸರ ರೈಡ್..! ಉಳಿದ ಸ್ಪಾಗಳ ಕಥೆ ಏನು..?! Shivamogga breaking : ನಕಲಿ ಬಂಗಾರದ ಜಾಲ ಬೆನ್ನತ್ತಿದ ಪೊಲೀಸರು ತೀರ್ಥಹಳ್ಳಿ ಮೂಲದ ಒಬ್ಬ ಅರೆಸ್ಟ್..?! ಇದರಲ್ಲಿ ಶಿ...