Thursday, May 1, 2025
Google search engine
Homeಶಿವಮೊಗ್ಗಲೋಕಾಯುಕ್ತ ಪೊಲೀಸರು ತಾಲೂಕಿಗೆ ಬರುವ ಮುನ್ನವೇ ಒಂದು ಕೇಸ್ ರೆಡಿ..! ಖಾತೆ ಬದಲಾವಣೆ ಅರ್ಜಿ ಸಲ್ಲಿಸಿ...

ಲೋಕಾಯುಕ್ತ ಪೊಲೀಸರು ತಾಲೂಕಿಗೆ ಬರುವ ಮುನ್ನವೇ ಒಂದು ಕೇಸ್ ರೆಡಿ..! ಖಾತೆ ಬದಲಾವಣೆ ಅರ್ಜಿ ಸಲ್ಲಿಸಿ 06 ತಿಂಗಳು ಕಳೆಯುತ್ತಾ ಬಂದರೂ ಗಂಡನ ಸ್ವತ್ತನ್ನು ಹೆಂಡತಿಯ ಹೆಸರಿಗೆ ಖಾತಾ ಬದಲಾವಣೆ ಮಾಡಲು ವಿಧವೆಗೆ ಗೋಳಾಡಿಸುತ್ತಿರುವ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ದುರಾಡಳಿತ – ಬೇಸತ್ತ ವಿಧವೆ ನಾಳೆ ಸಾಗರಕ್ಕೆ ಆಗಮಿಸುವ ಮಾನ್ಯ ಲೋಕಾಯುಕ್ತರಿಗೆ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಸೇರಿ ದೂರು ದಾಖಲಿಸಲು ತೀರ್ಮಾನ..!!

ಕಾರ್ಗಲ್ – ಜೋಗ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಸಾರ್ವಜನಿಕರ ಸೇವೆ ನೀಡುವಲ್ಲಿ ವಿಫಲತೆಯ ಆಡಳಿತಕ್ಕೆ ಸಂಬಂಧ ಪಟ್ಟಂತೆ ಒಂದಿಲ್ಲೊಂದು ಸುದ್ದಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ.

ದಿನಾಂಕ 31/08/2021 ರಂದು ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ಕಾರ್ಯಾಲಯಕ್ಕೆ ಖುದ್ದಾಗಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ತನ್ನ ಪತಿಯ ಮರಣ ನಂತರ ತನ್ನ ಪತಿಯ ಸ್ವತ್ತನ್ನೂ ತನ್ನ ಹೆಸರಿಗೆ ಪೌತಿ ಬದಲಾವಣೆ ಮಾಡಿಕೊಡುವಂತೆ ಕಾನೂನು ಪ್ರಕಾರ ಸಂಬಂಧ ಪಟ್ಟ ಪೂರಕ ದಾಖಲಾತಿಗಳನ್ನೂ ನೀಡಿ, 06 ಮಾಸಗಳೇ ಉರುಳುತ್ತಾ ಬಂದರೂ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಆಡಳಿತಗಾರರು ” ಇಂದು ಭಾ, ನಾಳೆ ಭಾ ” ಎಂದು ಸತಾಯಿಸುತ್ತಿರುವ ಬಗ್ಗೆ ದಾಖಲಾತಿ ಸಮೇತ ಮಾಹಿತಿಯೊಂದಿಗೆ ನಿನ್ನೆ ದಿನ ನನ್ನ ಮನೆಗೆ ನ್ಯಾಯ ಕೊಡಿಸುವಂತೆ ಹಿರಿಯ ನಾಗರೀಕರಾದ ವಿಧವಾ ಮಹಿಳೆ ಶ್ರೀಮತಿ ಸುಲೋಚನಾ ಕೋಂ ರಾಜು ದೊರೆಸ್ವಾಮಿ ಅಳುತ್ತಾ ತಮ್ಮ ಆಳಲನ್ನೂ ತೋಡಿಕೊಂಡರು.

ಕಾರ್ಗಲ್ ಜೋಗ ಪಂಚಾಯಿತಿ ಆಡಳಿತಗಾರನಾದ ಮುಖ್ಯಾಧಿಕಾರಿಗಳು, ಅಧ್ಯಕ್ಷರು, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸಮುಚಿತ ಮಾರ್ಗದಲ್ಲಿ ವಿಧವಾ ಹಿರಿಯ ನಾಗರೀಕರಾದ ಸುಲೋಚನಾ ಕೋಂ ರಾಜು ದೊರೆಸ್ವಾಮಿ ರವರ ಪೌತಿ ಖಾತಾ ಬದಲಾವಣೆಯ ಸರ್ಕಾರಿ ಸೇವೆಗೆ ಸತಾಯಿಸುವುದು, ಅನಗತ್ಯ ವಿಳಂಬ ಹಾಗೂ ಮಾನಸಿಕವಾಗಿ ಕಿರುಕುಳ ವಿರುದ್ಧ ಸೂಕ್ತ ನ್ಯಾಯಕ್ಕಾಗಿ ನಾಳೆ ದಿನ ಸಾಗರಕ್ಕೆ ಸಾರ್ವಜನಿಕರ ಕುಂದು – ಕೊರತೆ ಸಭೆಯಲ್ಲಿ ಕಾನೂನು ಪಾಲನೆಯೊಂದಿಗೆ ದೂರು ಸಲ್ಲಿಸಲಾಗುವುದು.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...