Wednesday, April 30, 2025
Google search engine
Homeಶಿವಮೊಗ್ಗವ್ಯಕ್ತಿಗಳಲ್ಲಿ ಪರಿಪೂರ್ಣತೆ ನಿರೀಕ್ಷಿಸಬಾರದು ಬದಲಿಗೆ ಸಕಾರಾತ್ಮಕ ಅಂಶಗಳ ಪ್ರಮಾಣವೆಷ್ಟಿದೆ ಎಂದಷ್ಟೇ ಗಮನಿಸಬೇಕು ತೀರ್ಥಹಳ್ಳಿ ಸರ್ಕಾರಿ...

ವ್ಯಕ್ತಿಗಳಲ್ಲಿ ಪರಿಪೂರ್ಣತೆ ನಿರೀಕ್ಷಿಸಬಾರದು ಬದಲಿಗೆ ಸಕಾರಾತ್ಮಕ ಅಂಶಗಳ ಪ್ರಮಾಣವೆಷ್ಟಿದೆ ಎಂದಷ್ಟೇ ಗಮನಿಸಬೇಕು ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅಭಿಮತ..!!

ತೀರ್ಥಹಳ್ಳಿ : ಪಟ್ಟಣದ ಬಂಟರ ಭವನದಲ್ಲಿ ವಯೋನಿವೃತ್ತಿ ಹೊಂದಿದ ಸಹೋದ್ಯೋಗಿಗಳಿಗೆ ಆರೋಗ್ಯ ಇಲಾಖಾ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಅವರು ಸಾಂಘಿಕ ಚಟುವಟಿಕೆಗಳು ಪರಸ್ಪರ ಸೌಹಾರ್ಧತೆಗಳನ್ನು ಬೆಸೆಯುತ್ತವೆ.ಸುಖ ಕಷ್ಟಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಒದಗಿಸುತ್ತದೆ. ಪರಸ್ಪರ ಒಡನಾಟಗಳು ನಮ್ಮ ಸಂತಸಗಳನ್ನು ಹೆಚ್ಚಿಸುತ್ತದೆ. ನೆನಪುಗಳನ್ನು ಮತ್ತಷ್ಟು ಸುಂದರವಾಗಿಸುತ್ತವೆ. ಇಂತವು ಕೇವಲ ಯೇಗ್ದಾಗಿದ್ದರಷ್ಟೇ ದಕ್ಕುವಂತವು. ಇತರರೊಂದಿಗೆ ನಾವು ವರ್ತಿಸುವ ರೀತಿ,ಸಾಮಾಜಿಕ ಸಂಘಟನಾತ್ಮಕ ಕಾರ್ಯಗಳಿಗೆ ನೀಡುವ ಮಹತ್ವ ಅಂತಹ ಯೋಗವನ್ನು ದೊರಕಿಸಬಲ್ಲದು.

ಮುಂದುವರೆದು, ವ್ಯಕ್ತಿಗಳಲ್ಲಿ ಪರಿಪೂರ್ಣತೆ ನಿರೀಕ್ಷಿಸಬಾರದು ಬದಲಿಗೆ ಸಕಾರಾತ್ಮಕ ಅಂಶಗಳ ಪ್ರಮಾಣವೆಷ್ಟಿದೆ ಎಂದಷ್ಟೇ ಗಮನಿಸಬೇಕು.ಆಗ ಸಾಕಷ್ಟು ಒಳಿತುಗಳು ಕಾಣಿಸುತ್ತವೆ. ಒಳಿತೆನಿಸಿದ್ದಕ್ಕೆ ಗೌರವಿಸುವ, ಪುಟ್ಟ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ, ಸಂತಸಗಳನ್ನು ಒಗ್ಗೂಡಿ ಸಂಭ್ರಮಿಸುವ ಮೂಲಕ ಸಹೋದ್ಯೋಗಿಗಳಲ್ಲಿ ಸಕಾರಾತ್ಮಕ ಪ್ರೇರಣೆ ತುಂಬಲು ನಿರಂತರವಾಗಿ ಶ್ರಮಿಸುತ್ತಿರುವ ಹೆಮ್ಮೆ ನಮ್ಮ ತಂಡದ್ದು ಎಂದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಟರಾಜ್ ಮಾತನಾಡಿ, ನಿವೃತ್ತ ಇಬ್ಬರೂ ಸಹೋದ್ಯೋಗಿಗಳು ತಮ್ಮ ಕರ್ತವ್ಯನಿಷ್ಟೆ,ಸೌಜನ್ಯಯುತ ನಡವಳಿಕೆಗಳಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವರು.ಇಂತವರ ನಿವೃತ್ತಿ ನಿಜಕ್ಕೂ ಬೇಸರದ ವಿಷಯ. ಅವರ ನಿವೃತ್ತ ಬದುಕಿಗೆ ಹಾರ್ದಿಕ ಶುಭ ಹಾರೈಸುವುದಾಗಿ ತಿಳಿಸಿ, ಇಂತವರನ್ನು ಗೌರವಿಸುವ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದರು.

ಭದ್ರಾವತಿ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್ ಮಾತನಾಡಿ, ಸದಾ ಒಂದಿಲ್ಲೊಂದು ಕಾರ್ಯ ಚಟುವಟಿಕೆಗಳ ಮೂಲಕ ಸಂಘ ವಿಶಿಷ್ಟವಾಗಿ ಕಾರ್ಯಾಚರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ.ಇಂತಹ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ನಿವೃತ್ತರಿಗೆ  ಹಾರ್ದಿಕವಾಗಿ ಶುಭಾಶಯಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಪ್ರಾ.ಆ.ಕೇಂದ್ರ ಹುಂಚದಕಟ್ಟೆಯ ವೈದ್ಯಾಧಿಕಾರಿ ಡಾ.ಶೋಭಾದೇವಿ ಮಾತನಾಡಿ, ಸೇವೆಗಳ ಗುಣಮಟ್ಟ ಹೆಚ್ಚಬೇಕೆಂದರೆ ಒಳ್ಳೆಯ ಸಂಗತಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಪ್ರೇರೆಪಣೆ ನೀಡುವ ಕಾರ್ಯವನ್ನೂ ಮಾಡಬೇಕು. ನಮ್ಮ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘ ಈ ದಿಸೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಕಾರ್ಯಚಟುವಟಿಕೆಗಳು ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಸಂಘದ ಖಜಾಂಚಿ ಎ ಎಂ ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಾ.ಆ.ಕೇಂದ್ರ ಮಾಳೂರಿನ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಿ ಸಿ ಶಿವಶಂಕರ್ ಮತ್ತು ಪ್ರಾ.ಆ.ಕೇಂದ್ರ ಆಗುಂಬೆಯ ನಿವೃತ್ತ ಹೊರಗುತ್ತಿಗೆ ಚಾಲಕ ಮೋಹನ್ ರನ್ನು ಆತ್ಮೀಯವಾಗಿ ಗೌರವಿಸಲಾಯಿತು.

ಸನ್ಮಾನಿತರ ಪರವಾಗಿ ಡಿ ಸಿ ಶಿವಶಂಕರ್ ಮಾತನಾಡಿ ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ನೂತನ ದಂಪತಿಗಳಾದ ಕೃಷ್ಣಮೂರ್ತಿ  ಮತ್ತು ಕವನ, ನಾಗರಾಜ್ ಮತ್ತು ದೇವಮ್ಮ ದಂಪತಿಗಳ ವೈವಾಹಿಕ ಬದುಕಿಗೆ ಹಾರ್ದಿಕವಾಗಿ ಶುಭಹಾರೈಸಲಾಯಿತು ಮತ್ತು ಪ್ರಾ.ಆ.ಕೇಂದ್ರ ಹುಂಚದಕಟ್ಟೆಯ ವೈದ್ಯಾಧಿಕಾರಿ ಡಾ. ಶೋಭಾದೇವಿ ಹಾಗೂ ಪ್ರಾ.ಆ.ಕೇಂದ್ರ ಮಾಳೂರಿನ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಅನಿತ ಬಿ ಸಿ ಯವರ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಕೆ ರಾಮಕೃಷ್ಣ, ಸಂಘದ ಕಾರ್ಯದರ್ಶಿ ಸುಭಾಷ್, ಉಪಾಧ್ಯಕ್ಷರಾದ ಯಶೋಧ, ತಿಲಕಮ್ಮ, ನಿವೃತ್ತ ಹಿರಿಯ ಪ್ರಾ.ಅ.ಸುರಕ್ಷಾಧಿಕಾರಿ ಗಿರಿಜಮ್ಮ, ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು, ಇಲಾಖಾ ಸಹೋದ್ಯೋಗಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವತ್ಸಲಾ ಕೃಷ್ಣ ಸ್ವಾಗತಿಸಿ, ಗುರುಪ್ರಸಾದ್ ನಿರೂಪಿಸಿ, ಹೆಚ್ ಜಿ ವಿನಾಯಕ ವಂದಿಸಿದರು.

ರಘುರಾಜ್ ಹೆಚ್.ಕೆ...9449553305...
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...