
ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರದ ಭೀಕರ ವಾಸ್ತವವನ್ನು ವಿವರಿಸುವ ‘ದಿ ಕಶ್ಮೀರ ಫೈಲ್ಸ್’ ಬಳಿಕ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವು ಪ್ರಸ್ತುತ ಭಾರತದಲ್ಲಿ ಅತ್ಯಂತ ಚರ್ಚೆಯ ವಿಷಯವಾಗಿದೆ. ಈ ಚಲನಚಿತ್ರದ ಮಾಧ್ಯಮದಿಂದ ಮತಾಂಧರ ಕಪಿಮುಷ್ಠಿಯಿಂದ ಹಿಂದೂ ಯುವತಿಯರನ್ನು ರಕ್ಷಿಸಲು ಹಿಂದೂಗಳು ಜಾಗೃತಗೊಳ್ಳುವುದು, ಧರ್ಮಶಿಕ್ಷಣ ಪಡೆದುಕೊಳ್ಳುವುದು ಮತ್ತು ಧರ್ಮರಕ್ಷಣೆ ಮಾಡುವುದು ಎಷ್ಟು ಆವಶ್ಯಕವಾಗಿದೆ ಎಂಬುದರ ಮಹತ್ವವು ಮನದಟ್ಟಾಯಿತು. ಗಮನಸೆಳೆಯುವ ವಿಷಯವೆಂದರೆ ಈ ಸಮಸ್ಯೆಯ ಮೂಲವಾಗಿರುವ ಮತ್ತು ಮತಾಂಧ ಶಕ್ತಿಗಳು ಸಂಪೂರ್ಣ ಜಗತ್ತಿನಲ್ಲಿ ನಡೆಸಿರುವ ‘ಲವ್ ಜಿಹಾದ’ನ ಷಡ್ಯಂತ್ರ ಸುಸ್ಪಷ್ಟವಾಗಿ ಸಮಾಜದ ಎದುರು ಬಹಿರಂಗವಾಯಿತು. ಈ ಷಡ್ಯಂತ್ರದ ಪ್ರಭಾವ ಎಷ್ಟು ತೀವ್ರವಾಗಿದೆಯೆಂದರೆ ಅದನ್ನು ಬಹಿರಂಗ ಪಡಿಸಿದ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರ ದೇಶದಲ್ಲಿ ಪ್ರದರ್ಶನಗೊಳ್ಳಬಾರದು ಎಂದು ವಿರೋಧಿಗಳು ನೇರವಾಗಿ ನ್ಯಾಯಾಲಯಕ್ಕೆ ಮೊರೆ ಹೋದರು. ನ್ಯಾಯಾಲಯವು ಈ ಚಲನಚಿತ್ರವನ್ನು ನಿರ್ಬಂಧಿಸಲು ತಿರಸ್ಕರಿಸಿದ ಬಳಿಕವೂ ಎಂದಿನಂತೆ ವಿಶಿಷ್ಟ ಸಮಾಜವನ್ನು ವೈಭವೀಕರಿಸಲು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ರಾಜ್ಯ ಸರಕಾರಗಳು ಈ ಚಲನಚಿತ್ರವನ್ನು ನಿರ್ಬಂಧಿಸಿದವು. ಇತರ ಕೆಲವು ರಾಜ್ಯಗಳಲ್ಲಿ ಚಲನಚಿತ್ರ ಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಲಾಯಿತು. ಇವೆಲ್ಲವನ್ನು ಎದುರಿಸಿ ಇಂದು ಈ ಚಲನಚಿತ್ರವು ಜಾಗತಿಕ ಮಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿದೆ ಮತ್ತು ಅದಕ್ಕೆ ಒಳ್ಳೆಯ ಪ್ರತಿಸ್ಪಂದನ ಸಿಗುತ್ತಿದೆ.
ಇದಕ್ಕೆ ಕಾರಣವೇನೆಂದರೆ ಜಾಗೃತಗೊಳ್ಳುತ್ತಿರುವ ಹಿಂದೂಗಳ ಮನಸ್ಸು. ಸ್ವಾತಂತ್ರ್ಯದ ನಂತರದ ಕಾಲಾವಧಿಯಲ್ಲಿ ಹಿಂದೂಗಳ ಮನಸ್ಸನ್ನು ಕ್ರೈಸ್ತೀಕರಣ, ಇಸ್ಲಾಮೀಕರಣ ಹಾಗೂ ಜಾತ್ಯತೀತಗೊಳಿಸಲು ಬಹುದೊಡ್ಡ ಪ್ರಮಾಣದಲ್ಲಿ ಪ್ರಯತ್ನವಾಯಿತು. ಇದರಿಂದ ಜನ್ಮ ಹಿಂದೂ; ಆದರೆ ಮನಸ್ಸು ಮತ್ತು ವಿಚಾರಗಳಿಂದ ಅಹಿಂದೂ ಎಂಬಂತೆ ಜನಸಂಖ್ಯೆ ಬೆಳೆಯಿತು. ಈಗ ಮಾತ್ರ ಈ ಚಿತ್ರಣ ಬದಲಾಗುತ್ತಿದ್ದು, ಹಿಂದೂಗಳ ಮನಸ್ಸು ಜಾಗೃತಗೊಳ್ಳುತ್ತಿದೆ. ಆಗುವ ಅನ್ಯಾಯವನ್ನು ವಿರೋಧಿಸಲು ಹಿಂದೂಗಳು ಧೈರ್ಯ ತೋರಿಸುತ್ತಿದ್ದಾರೆ. ಧರ್ಮರಕ್ಷಣೆಗಾಗಿ ಕೃತಿಪ್ರವೃತ್ತರಾಗಲು ಹಿಂದೂಗಳಿಗೆ ಪ್ರೇರಣೆ ಸಿಗುತ್ತಿದೆ.
ತಾವು ಹಿಂದೂಗಳಾಗಿರುವುದರ ಮಹತ್ವವನ್ನು ಸಾರುತ್ತಿದ್ದಾರೆ. ಇಂದು ದೇಶಾದ್ಯಂತ ಹಿಂದೂ ರಾಷ್ಟ್ರ ಚಳುವಳಿ ವೇಗವಾಗಿ ಹಬ್ಬುತ್ತಿದೆ. ಈ ಜಾಗೃತಿಗೊಳ್ಳುವುದರ ಹಿಂದೆ ಹಿಂದುತ್ವನಿಷ್ಠ ಸಂಘಟನೆಗಳನ್ನು ಸಂಘಟಿಸುವ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಯೋಗದಾನ ಅಪರಿಮಿತವಾಗಿದೆ.
ಇಂದು ಹಿಂದೂಗಳು ಜಾಗೃತಗೊಂಡು ತಮ್ಮ ಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಹಿಂದೂಗಳಿಂದ ಧರ್ಮರಕ್ಷಣೆಗಾಗಿ ನೀಡುವ ಕರೆಯನ್ನು ‘ಹೇಟ್ ಸ್ಪೀಚ್’ ಎನ್ನುತ್ತ ಹಿಂದುತ್ವನಿಷ್ಠರನ್ನು ಗುರಿ ಮಾಡಲಾಗುತ್ತಿದೆ. ಮತಾಂಧರು ಮತ್ತು ಸಾಮ್ಯವಾದಿಗಳು ಈ ‘ಹೇಟ್ ಸ್ಪೀಚ್’ ಅಡಿಯಲ್ಲಿ ಹಿಂದುತ್ವನಿಷ್ಠರ ಭಾಷಣದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ಹಿಂದೂಗಳನ್ನು ಗುರಿ ಪಡಿಸುತ್ತಿದ್ದಾರೆ. ಭಾರತ ವಿಭಜನೆಗೊಳ್ಳಬಾರದು ಎಂದು ಹಿಂದೂಗಳು ಜನಜಾಗೃತಿ ಮಾಡುವುದನ್ನು ‘ಹೇಟ್ ಸ್ಪೀಚ್’ ಎನ್ನಬಹುದೇ ? ಒಂದು ವೇಳೆ ಹಿಂದೂಗಳು ತಮ್ಮ ದೇಶ ಮತ್ತು ಧರ್ಮವನ್ನು ರಕ್ಷಿಸುವ ವಿಷಯದಲ್ಲಿ ಮಾತನಾಡುತ್ತಿದ್ದರೆ, ಅದು ‘ಹೇಟ್ ಸ್ಪೀಚ್’ ಆಗುತ್ತದೆಯೇ ? ನಿಜವಾಗಿ ಹೇಳಬೇಕೆಂದರೆ ಹಿಂದೂ ಸಂಸ್ಕೃತಿಯಲ್ಲಿ ‘ಹೇಟ್’ ಗೆ ಸ್ಥಾನವೇ ಇಲ್ಲ. ಹಿಂದುತ್ವನಿಷ್ಠರು ನೀಡಿರುವ ಹೇಳಿಕೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವಂತಹ ಯಾವುದೇ ಘಟನೆ ನಡೆದಿಲ್ಲ. ಆದಾಗ್ಯೂ ಸರಕಾರದ ಮೇಲೆ ಒತ್ತಡ ಹೇರಿ ದೇಶಾದ್ಯಂತ ಹಿಂದೂಗಳ ವಿರುದ್ಧ ದೂರು ದಾಖಲಿಸಲಾಗುತ್ತಿದೆ. ಇದರ ಬದಲಾಗಿ ಇತರ ಪಂಥದವರು ‘ಸರ್ ತನ್ ಸೆ ಜುದಾ’ ದ ಕರೆ ನೀಡುತ್ತಾ, ಅನೇಕ ಹಿಂದುತ್ವನಿಷ್ಠರ ಹತ್ಯೆಯನ್ನು ನಡೆಸಲಾಗುತ್ತದೆ; ಆದರೆ ಅವರ ವಿರುದ್ಧ ತಥಾಕಥಿತ ಪ್ರಗತಿಪರರು, ಸೆಕ್ಯುಲರ್ ಅಥವಾ ‘ಪೀಸ್’ ಇವರು ದೂರು ದಾಖಲಿಸಿರುವುದು ಕಂಡು ಬಂದಿಲ್ಲ. ಒಟ್ಟಾರೆ ಪೊಲೀಸರು ಮತ್ತು ನ್ಯಾಯಾಲಯದ ದಿಕ್ಕು ತಪ್ಪಿಸಿ ಹಿಂದೂಗಳ ವಿರುದ್ಧ ನಡೆಸಿರುವಂತಹ ಒಂದು ಬಹುದೊಡ್ಡ ಷಡ್ಯಂತ್ರ ಇದಾಗಿದೆ.
ಚುನಾವಣೆಯಲ್ಲಿಯೂ ಕೆಲವು ರಾಜಕೀಯ ಪಕ್ಷಗಳಿಂದ ಹಿಂದೂ ವಿರೋಧಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆಯ ಚುನಾವಣಾ ಘೋಷಣಾಪತ್ರದಲ್ಲಿ ಕಾಂಗ್ರೆಸ್ ಪಕ್ಷವು ಮುಸಲ್ಮಾನರ ಮತಗಳ ಓಲೈಕೆಗಾಗಿ ನೇರವಾಗಿ ‘ಬಜರಂಗ ದಳ’ದ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಘೋಷಿಸಿತು. ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ನಂತರ ಈಗ ಕಾಂಗ್ರೆಸ್ಸಿಗರು ಗೋಹತ್ಯೆ ನಿಷೇಧ, ಹಿಜಾಬ್ ನಿಷೇಧ ಮುಂತಾದ ನಿರ್ಣಯಗಳನ್ನು ಹಿಂಪಡೆಯುವ ಸಿದ್ಧತೆ ನಡೆಸಿದೆ. ಮತಾಂಧರಿಂದ ಈಗ ನೇರವಾಗಿ ಹಿಂದೂಗಳ ಕಾರ್ಯಕ್ರಮಗಳು ಮತ್ತು ಉತ್ಸವಗಳ ಮೇಲೆ ನಿಷೇಧ ಹೇರುವಂತೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಇನ್ನೂ ಮುಂದೆ ಹೋಗಿ ಕ್ರೂರಕರ್ಮಿ ‘ಟಿಪ್ಪು’ವಿನ ಉದಾತ್ತೀಕರಣ ಪ್ರಾರಂಭವಾಗುವುದು. ಶಾಲೆಯ ಪಠ್ಯಪುಸ್ತಕದಲ್ಲಿ ಆಕ್ರಮಣಕಾರಿಗಳ ಇತಿಹಾಸವನ್ನು ಪುನಃ ಕಲಿಸಲು ನಿರ್ಣಯ ತೆಗೆದುಕೊಳ್ಳಲಾಗುವುದು. ಒಟ್ಟಾರೆ ಹಿಂದೂಗಳಿಗೆ ಪುನಃ ಸಂಘರ್ಷ ಮಾಡಬೇಕಾಗುವ ಪರಿಸ್ಥಿತಿಯಿದೆ.
ವಾಸ್ತವದಲ್ಲಿ ಭಾರತದಲ್ಲಿ ಹಿಂದೂಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ನಿರ್ಮಾಣವಾಗಿರುವ ಅಫಘಾನಿಸ್ತಾನ, ಶ್ರೀಲಂಕಾ, ನೇಪಾಳ, ಭೂತಾನ್, ಟಿಬೇಟ್, ಮ್ಯಾನ್ಮಾರ್, ಪಾಕಿಸ್ತಾನ ಮುಂತಾದ ದೇಶಗಳನ್ನು ಭಾರತದಿಂದ ಬೇರ್ಪಡಿಸಲಾಯಿತು. ಇದರಲ್ಲಿ ಅನೇಕ ದೇಶಗಳು ಮುಸ್ಲಿಂ ರಾಷ್ಟ್ರಗಳಾದವು. ಈಗ ಭಾರತದ ಇಸ್ಲಾಮೀಕರಣ ಮತ್ತು ಕ್ರೈಸ್ತೀಕರಣ ಮಾಡುವ ಪ್ರಯೋಗ ಪ್ರಾರಂಭವಾಗಿದೆ. ಇದರಿಂದ ಭಾರತದಲ್ಲಿರುವ ೯ ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಅಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರೆಂಬಂತೆ ನಡೆಸಿಕೊಳ್ಳಲಾಗುತ್ತಿದೆ. ಹಿಂದೂಗಳ ಮೇಲೆ ಅತ್ಯಾಚಾರ ಹೆಚ್ಚಾಗಿದೆ ಎಂಬುದು ಮಣಿಪುರದ ಹಿಂಸಾತ್ಮಕ ಘಟನೆಗಳಿಂದ ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಾರೆ ಈ ದೇಶವನ್ನು ಅನೇಕ ಭಾಗಗಳನ್ನಾಗಿಸಿ ದೇಶವನ್ನೇ ವಿಭಜಿಸಲಾಗುವುದು. ಈ ಅಪಾಯಕಾರಿ ವಿಷಯದ ಬಗ್ಗೆ ಹಿಂದೂಗಳನ್ನು ಜಾಗೃತಗೊಳಿಸಬೇಕಾಗಿದೆ. ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ, ಭಾರತವು ಇಸ್ಲಾಮೀಕರಣಗೊಳ್ಳಲು ಹೆಚ್ಚು ಸಮಯ ತಗಲುವುದಿಲ್ಲ.
ಹಿಂದೂಗಳ ವಿರುದ್ಧ ನಡೆಸಲಾಗುವ ಈ ವಿವಿಧ ಷಡ್ಯಂತ್ರಗಳನ್ನು ಬಯಲುಗೊಳಿಸುವಲ್ಲಿ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಯೋಗದಾನ ಅಪಾರವಾಗಿದೆ. ೨೦೧೨ ರಲ್ಲಿ ಗೋವಾದಲ್ಲಿ ‘ಪ್ರಥಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ನಡೆಯಿತು. ಪ್ರಥಮ ಅಧಿವೇಶನದಿಂದ ಇಲ್ಲಿಯವರೆಗೆ ‘ಹಿಂದೂ ರಾಷ್ಟ್ರದ ಉದ್ಘೋಷಣೆ’ ‘ಹಿಂದೂ ಜಾಗೃತಿ’ ಮತ್ತು ‘ಹಿಂದೂ ಸಂಘಟನೆ’ ಇವುಗಳೇ ಅಧಿವೇಶನದ ಮುಖ್ಯ ಸಾರವಾಗಿದೆ. ಮೊದಲು ಹಿಂದೂ ರಾಷ್ಟ್ರವೆಂದರೆ, ಅದರೆಡೆಗೆ ನಕಾರಾತ್ಮಕ ಮತ್ತು ಜಾತೀಯ ದೃಷ್ಟಿಯಿಂದ ನೋಡಲಾಗುತ್ತಿತ್ತು. ಇಂದು ಮಾತ್ರ ತಳಮಟ್ಟದಿಂದ ಹಿಡಿದು ಎಲ್ಲೆಡೆಯ ಹಿಂದೂಗಳೂ ಹಿಂದೂ ರಾಷ್ಟ್ರಕ್ಕೆ ಸಮರ್ಥನೆ ನೀಡುತ್ತಿದ್ದಾರೆ. ಇದಕ್ಕೆ ಹಿಂದೂ ಧರ್ಮದ ಸರ್ವಸಮಾವೇಶಕತನ ಮತ್ತು ವಿಶ್ವಕಲ್ಯಾಣಕಾರಿ ಸಂಕಲ್ಪನೆಯೇ ಕಾರಣವಾಗಿದೆ. ಇತರ ಪಂಥಗಳು ಕಾಫಿರರನ್ನು ಹತ್ಯೆ ಮಾಡುವಂತೆ ಕರೆ ನೀಡುತ್ತವೆ ಅಥವಾ ಸಂಪೂರ್ಣ ಜಗತ್ತನ್ನು ಕ್ರೈಸ್ತಮಯಗೊಳಿಸುವ ಕನಸು ಕಾಣುತ್ತಾರೆ. ಹಿಂದೂಗಳು ಮಾತ್ರ ವಿಶ್ವಕಲ್ಯಾಣದ ಪ್ರಾರ್ಥನೆ ಮಾಡುತ್ತಾರೆ. ಇಂದು ವಿದೇಶಗಳಲ್ಲಿಯೂ ಹಿಂದುತ್ವದ ವಿಷಯದಲ್ಲಿ ಆಕರ್ಷಣೆ ಹೆಚ್ಚುತ್ತಿದೆ. ಅದಕ್ಕೆ ಹಿಂದೂ ಧರ್ಮದ ಕಲ್ಯಾಣಕಾರಿ ತತ್ತ್ವಜ್ಞಾನವೇ .
ಹಿಂದೂ ಧರ್ಮದ ಮೇಲಾಗುವ ಆಘಾತಗಳ ವಿಷಯದಲ್ಲಿ ಜಾಗೃತಿಗೊಳಿಸುವಾಗ ಹಿಂದೂ ಧರ್ಮವನ್ನು ಆಚರಣೆಯಲ್ಲಿ ತರುವ ದೃಷ್ಟಿಯಿಂದಲೂ ಜಾಗೃತಿಗೊಳಸಲು ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಮಹತ್ವದ ಪಾತ್ರವನ್ನು ವಹಿಸಿದೆ.
ಜಾತ್ಯಾತೀತ ವ್ಯವಸ್ಥೆಯಲ್ಲಿ ಹಿಂದೂಗಳ ರಕ್ಷಣೆ ಮಾಡುವುದಿದ್ದರೆ, ಕೇವಲ ರಾಷ್ಟ್ರೀಯ ಮಾತ್ರವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹಿಂದೂ ಸಂಘಟನೆ ಮಾಡುವುದು ಕಾಲದ ಆವಶ್ಯಕತೆಯಾಗಿದೆ. ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವು ಆ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಈ ಅಧಿವೇಶನಗಳ ಮಾಧ್ಯಮದಿಂದ ಭಾರತದಲ್ಲಿರುವ ಸಂತರು, ಮಹಾತ್ಮರು, ಹಿಂದುತ್ವವಾದಿ ಸಂಘಟನೆಗಳ ಪದಾಧಿಕಾರಿಗಳು, ದೇವಸ್ಥಾನಗಳ ವಿಶ್ವಸ್ಥರು ಮುಂತಾದವರ ಉಪಸ್ಥಿತಿಯಲ್ಲಿ ಗೋವಾದಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗುತ್ತಿದೆ. ಈ ಅಧಿವೇಶನದಲ್ಲಿ ಹಿಂದೂ ರಾಷ್ಟ್ರದ ದೃಷ್ಟಿಯಿಂದ ವಿಚಾರ ಮಂಥನವಾಗುವುದರೊಂದಿಗೆ ಹಿಂದುತ್ವದ ಕಾರ್ಯವನ್ನು ಮಾಡುವಾಗ ಎದುರಾಗುವ ಉತ್ತಮ ಮತ್ತು ಕಹಿ ಅನುಭವಗಳ ವಿನಿಮಯ ಆಗುತ್ತದೆ. ಹಾಗೆಯೇ ಇಡೀ ವರ್ಷಕ್ಕಾಗಿ ಹಿಂದುತ್ವದ ಕಾರ್ಯದ ದಿಶೆಯನ್ನು ನಿರ್ಧರಿಸಲಾಗುತ್ತದೆ. ದೇಶ-ವಿದೇಶಗಳ ೩೦೦ಕ್ಕಿಂತ ಅಧಿಕ ಅಗ್ರಗಣ್ಯ ಹಿಂದುತ್ವನಿಷ್ಠ ಸಂಘಟನೆಗಳ ಸಹಭಾಗದಲ್ಲಿ ಈ ಅಧಿವೇಶನದ ಮಾಧ್ಯಮದಿಂದ ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸುವ ಕಾರ್ಯ ನಡೆಯುತ್ತಿದೆ.
ಈ ಸಲವೂ ೧೬ ರಿಂದ ೨೨ ಜೂನ್ ಈ ಕಾಲಾವಧಿಯಲ್ಲಿ ಗೋವಾದಲ್ಲಿ ೧೧ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅರ್ಥಾತ್ ‘ವೈಶ್ವಿಕ (ವಿಶ್ವ) ಹಿಂದೂ ರಾಷ್ಟ್ರ ಮಹೋತ್ಸವ’ ನಡೆಯಲಿದೆ. ಅದರಲ್ಲಿ ಲವ್ ಜಿಹಾದ್, ಹಲಾಲ್ ಸರ್ಟಿಫಿಕೇಶನ್, ಲ್ಯಾಂಡ್ ಜಿಹಾದ, ಕಾಶಿ-ಮಥುರಾ ಮುಕ್ತಿ, ಮತಾಂತರ, ಗೋಹತ್ಯೆ, ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಮಾತೃಭೂಮಿಯಲ್ಲಿ ಪುರ್ನವಸತಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲಿನ ಅತ್ಯಾಚಾರಗಳು, ವಿವಿಧ ಜಿಹಾದಿ ಆಕ್ರಮಣಗಳು ಇವುಗಳಲ್ಲದೇ ಹಿಂದೂ ರಾಷ್ಟ್ರದ ಅಡಿಪಾಯಕ್ಕಾಗಿ ಆವಶ್ಯಕವಿರುವ ಮುಂಬರುವ ಮಹತ್ವದ ವಿಷಯಗಳ ಮೇಲೆ ವಿಚಾರಮಂಥನ ನಡೆಯುವುದು. ಹಾಗೆಯೇ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುವುದು.
ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ಯು-ಟ್ಯೂಬ್, ಫೇಸ್ಬುಕ್ ಮತ್ತು ಟ್ವಿಟರ್ ಅಕೌಂಟ್ನಿಂದ ಹಾಗೆಯೇ HinduJagruti.org ಈ ಜಾಲಸ್ಥಳದಿಂದ ಲೈವ್ ಪ್ರಸಾರ ಮಾಡಲಾಗುವುದು. ಇಂದಿನ ವರೆಗೆ ಮಾಡಿರುವ ಆಂದೋಲನಗಳಿಂದ ಸಮಸ್ತ ಹಿಂದೂಗಳಿಗೆ ಸಿಗುತ್ತಿರುವ ಯಶಸ್ಸಿನ ಹಿನ್ನೆಲೆಯಲ್ಲಿ ಈ ಅಧಿವೇಶನವು ಸಮಸ್ತ ಹಿಂದೂಗಳಿಗೆ ಅತ್ಯಂತ ಉತ್ಸಾಹದಾಯಕವಾಗಿರಲಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ.
ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ (ಸಂಪರ್ಕ : 9987966666)
