
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಮನೆಯಲ್ಲಿ ನಿನ್ನೆ ಬಾಡೂಟ ಸವಿದಿದ್ದಾರೆ.
ಬರೋಬ್ಬರಿ 21 ವಿವಿಧ ರೀತಿಯ ಖಾದ್ಯಗಳನ್ನು ಸಿದ್ದರಾಮಯ್ಯ ನವರಿಗಾಗಿ ಸಿದ್ಧಪಡಿಸಲಾಗಿತ್ತು.
ಸಿಎಂ ಸಿದ್ದರಾಮಯ್ಯ ಗೆ ಪ್ರಿಯವಾದ ಮಟನ್ ಚಾಪ್ಸ್, ಮಟನ್ ಕೈಮಾ, ನಾಟಿ ಕೋಳಿ, ಮುದ್ದೆ, ನೀರ್ ದೋಸೆ ಸೇರಿ 21 ಖಾದ್ಯಗಳನ್ನು ಬಡಿಸಿದ್ದಾರೆ.
ಭೋಜನದ ನಂತರ ಸಿದ್ದರಾಮಯ್ಯನವರು ಅಲ್ಲಿಂದ ನೇರವಾಗಿ ದಾವಣಗೆರೆ ಜಿಲ್ಲಾ ಪಂಚಾಯತ್ ಮಿಟಿಂಗ್ ಗೆ ಆಗಮಿಸಿದ್ದಾರೆ. ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಸೇರಿ ಜಿಲ್ಲೆ ಆರು ಶಾಸಕರು ಭಾಗಿಯಾಗಿದ್ದರು.