
ಶ್ರೀಮತಿ, ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 125ನೇ ವೇದ ಚಿತ್ರ ತಂಡವು ದಿನಾಂಕ: 6.01.2023 ಶುಕ್ರವಾರದಂದು ಶಿವಮೊಗ್ಗ ನಗರಕ್ಕೆ ಆಗಮಿಸಲಿದ್ದು, ರಾತ್ರಿ 8 ಗಂಟೆಗೆ ಡಿವಿಎಸ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ, ನಂತರ
ದಿನಾಂಕ 7.1.2023ರ ಶನಿವಾರ ಬೆಳಗ್ಗೆ 10.30 ಗಂಟೆಗೆ ಸಿಂಗಾರ ಸಭಾಂಗಣದಲ್ಲಿ ವೇದ ಚಲನಚಿತ್ರ ವೀಕ್ಷಿಸಿದ ರಂಗಭೂಮಿ ಕಲಾವಿದೆಯರು, ಕಾಲೇಜು ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕ ಮಹಿಳೆಯರು, ಹಾಗೂ ಆಯ್ದ ಕೆಲವು ಚಿತ್ರ ವೀಕ್ಷಕ ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ. (ಕೇವಲ 250 ವೀಕ್ಷರಿಗೆ ಅವಕಾಶವಿದ್ದು ಪಾಸ್ ಕಡ್ಡಾಯವಿರುತ್ತದೆ) ನಂತರ 12:30 ಗಂಟೆಗೆ ಶಿವಪ್ಪ ನಾಯಕ ಸರ್ಕಲ್ ಗೆ ಆಗಮಿಸಿ ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆಯನ್ನು ಸಲ್ಲಿಸಿ ಚಿತ್ರತಂಡದ ಎಲ್ಲಾ ನಟ ನಟಿಯರು ಹಾಗೂ ಅಪಾರ ಅಭಿಮಾನಿಗಳೊಂದಿಗೆ ತೆರೆದ ವಾಹನದ ಮೂಲಕ ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ ಮೂಲಕ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ಆಗಮಿಸಲಿದ್ದು ಚಿತ್ರಮಂದಿರ ಒಳಭಾಗದಲ್ಲಿ ಹಾಕಿರುವ ವೇದಿಕೆ ಮೂಲಕ ಚಿತ್ರದ ಯಶಸ್ಸಿಗೆ ಸಹಕರಿಸಿದ ಅಭಿಮಾನಿಗಳು, ಚಿತ್ರ ರಸಿಕರು, ಹಾಗೂ ಸಾರ್ವಜನಿಕರು ಆಶೀರ್ವದಿಸಿರುವುದನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಲಿದ್ದಾರೆ… ಎನ್ನುವ ಮಾಹಿತಿಯನ್ನು
ವೇದಾ ಟೀಮ್ ಪರವಾಗಿ
ಜಿ.ಡಿ. ಮಂಜುನಾಥ್
ಶಿವಮೊಗ್ಗ… ಅವರು ನೀಡಿದ್ದಾರೆ….
ರಘುರಾಜ್ ಹೆಚ್.ಕೆ..9449553305…