
ಶಿವಮೊಗ್ಗ: ದಿನಾಂಕಃ-06-12-2022 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಮ ನಗರ ಬಡಾವಣೆಯ ವಾಸದ ಮನೆಯ ಬಾಗಿಲನ್ನು ಮುರಿದು ಮನೆಯ ಬೀರುವಿನಲ್ಲಿದ್ದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 550/2022 ಕಲಂ 380 ಐಪಿಸಿ ರೀತ್ಯಾ ಮನೆಗಳ್ಳತನ ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸದರಿ ಪ್ರಕರಣದ ತನಿಖೆ ಕೈಗೊಂಡ ಪಿಐ ತುಂಗಾನಗರ ಪೊಲೀಸ್ ಠಾಣೆ, ಪಿಎಸ್ಐ ಮತ್ತು ಸಿಬ್ಬಂಧಿಗಳ ತಂಡವು ದಿನಾಂಕಃ- 14-12-2022 ರಂದು ಪ್ರಕರಣದ *ಆರೋಪಿ ಗಿರೀಶ್ ಆರ್ @ ಸುಣ್ಣ, 38 ವರ್ಷ, ಶ್ರೀರಾಮ ನಗರ ಗೋಪಾಳ, ಶಿವಮೊಗ್ಗ* ಈತನನ್ನು ದಸ್ತಗಿರಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದ *ಅಂದಾಜು ಮೌಲ್ಯ 2,50,000/- ರೂಗಳ 60 ಗ್ರಾಂ ಬಂಗಾರದ ಆಭರಣಗಳನ್ನು* ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು *ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಶ್ಲಾಘಿಸಿ* ಪ್ರಶಂಸಿಸಿರುತ್ತಾರೆ.