ತೀರ್ಥಹಳ್ಳಿ : ತಾಲೂಕಿನ ಮಂಡಗದ್ದೆ ಭಾಗದ ಕೀಗಡಿ ಶಿಕ್ಷಕ ಶೇಖರಪ್ಪ ಎನ್ನುವರು 1,25,000 ಸಾವಿರಗಳನ್ನು ಎಸ್ ಡಿ ಎಂ ಸಿ ಯವರ ಗಮನಕ್ಕೆ ತರದೆ ಸದಸ್ಯರ ಮೀಟಿಂಗ್ ಕರೆಯದೆ ಯಾವ ರೆಗೃಲೇಶನ್ ಪಾಸ್ ಮಾಡದೆ ಇಲಾಖೆಗೆ ಮಾಹಿತಿ ತಿಳಿಸದೆ… ಶಾಲೆಯ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆದುಕೊಂಡು ಖರ್ಚು ಮಾಡಿರುತ್ತಾರೆ… ಆದರೆ ಈ ಶಿಕ್ಷಕನಿಗೆ ಇಲಾಖೆಯಿಂದ ಇಲ್ಲಿವರೆಗೆ ಯಾವುದೇ ಶಿಕ್ಷೆ ಕೂಡ ನೀಡಿಲ್ಲ ನೋಟಿಸ್ ಕೊಟ್ಟು ಕೈ ತೊಳೆದುಕೊಂಡಿದೆ ತೀರ್ಥಹಳ್ಳಿ ಶಿಕ್ಷಣ ಇಲಾಖೆ…
ಇದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ಹಳ್ಳಿ ಬಿದರಗೋಡ್ ಶಾಲೆಯ ಶಿಕ್ಷಕ ಮಹೇಶ್ :
ಕೀಗಡಿ ಶಾಲೆಯ ಶಿಕ್ಷಕ ಶೇಖರಪ್ಪ ತಪ್ಪು ಮಾಡಿದರು ಶಿಕ್ಷೆಯಾಗಿಲ್ಲ ಎಂದು ಇದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡ ಹಳ್ಳಿ ಬಿದರಗೋಡು ಶಾಲೆಯ ಶಿಕ್ಷಕ ಮಹೇಶ್ ಶಾಲೆಯ ಬ್ಯಾಂಕ್ ಖಾತೆಯಲ್ಲಿದ್ದ 22.0000/ ಸಾವಿರ ರೂಪಾಯಿಗಳನ್ನು ಬಳಸಿಕೊಂಡಿದ್ದಾರೆ… ಹಳ್ಳಿ ಬಿದರಗೋಡು ಶಾಲೆಯ ಶಿಕ್ಷಕ ಮಹೇಶ್ ಕೂಡ ಯಾರ ಗಮನಕ್ಕೂ ತರದೆ ತಾವೇ ಈ ಹಣವನ್ನು ಬಳಸಿಕೊಂಡು ಈಗ ಹಣವನ್ನು ಕಟ್ಟುತ್ತೇನೆ ಎಂದು ಹೇಳುತ್ತಿದ್ದಾರೆ…
ಶಿಕ್ಷಣ ಇಲಾಖೆಯಿಂದ ಹಣ ದುರುಪಯೋಗಪಡಿಸಿಕೊಂಡ ಶಿಕ್ಷಕರಿಗೆ ಶಿಕ್ಷೆ ಏನು..?!
ಶಿಕ್ಷಣ ಇಲಾಖೆ ಈ ಇಬ್ಬರು ಶಿಕ್ಷಕರಿಗೆ ಏನು ಶಿಕ್ಷೆ ನೀಡುತ್ತದೆ ಶಾಲೆಯ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಶಿಕ್ಷಕರಿಗೆ ಕಾನೂನಿನ ಪ್ರಕಾರ ಅಮಾನತ್ತಿನಲಿಡಬೇಕು (ಸಸ್ಪೆಂಡ್) ಮಾಡಬೇಕು.. ನಂತರ 3 ಇಂಕ್ರಿಮೆಂಟ್ ಗಳನ್ನು ಕಟ್ ಮಾಡಬೇಕು… ಆದರೆ ಶಿಕ್ಷಣ ಇಲಾಖೆಯಿಂದ ಕೀಗಡಿ ಶಿಕ್ಷಕರಿಗೆ ನೋಟಿಸ್ ಕೊಟ್ಟು ಕೈ ತೊಳೆದುಕೊಳ್ಳಲಾಗಿದೆ… ಈಗ ಹಳ್ಳಿ ಬಿದರಗೋಡು ಶಿಕ್ಷಕ ಮಹೇಶ್ ಸರದಿ ಈ ಶಿಕ್ಷಕನಿಗೆ ಯಾವ ಶಿಕ್ಷೆ ಶಿಕ್ಷಣ ಇಲಾಖೆ ನೀಡುತ್ತದೆ, ಕಾದು ನೋಡಬೇಕು…. ಶಿಕ್ಷಣ ಇಲಾಖೆ ತೀರ್ಥಹಳ್ಳಿಯಲ್ಲಿ ಅಸ್ತಿತ್ವದಲ್ಲಿ ಇರುವುದೇ ಆದರೆ ಇವರ ತಪ್ಪಿಗೆ ಸರಿಯಾದ ಶಿಕ್ಷೆ ಆಗುತ್ತದೆ… ಜಿಲ್ಲೆಯ ಹಾಗೂ ರಾಜ್ಯದ ಇತರ ಶಿಕ್ಷಕರಿಗೂ ಸಹ ಇದೊಂದು ಪಾಠವಾಗಬೇಕು… ಆ ನಿಟ್ಟಿನಲ್ಲಿ ತೀರ್ಥಹಳ್ಳಿಯ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ಪತ್ರಿಕೆಯದ್ದು… ಇಲ್ಲವಾದರೆ ಇಲಾಖೆಯ ಮೇಲೆ ಇಲಾಖೆಯ ಅಧಿಕಾರಿಗಳ ಮೇಲೆ ಅನುಮಾನ ಬರುತ್ತದೆ…
ರಘುರಾಜ್ ಹೆಚ್.ಕೆ…9449553305…