Wednesday, April 30, 2025
Google search engine
Homeಶಿವಮೊಗ್ಗಆಧಾರ್ ಕಾರ್ಡ್ ಸೇವೆ ಗಗನಕುಸುಮ - ತೀವ್ರ ಪರದಾಟದತ್ತ ವಿದ್ಯಾರ್ಥಿಗಳು, ರೈತರು - ಕಣ್ಣಿದ್ದೂ ಕುರುಡರಾದ...

ಆಧಾರ್ ಕಾರ್ಡ್ ಸೇವೆ ಗಗನಕುಸುಮ – ತೀವ್ರ ಪರದಾಟದತ್ತ ವಿದ್ಯಾರ್ಥಿಗಳು, ರೈತರು – ಕಣ್ಣಿದ್ದೂ ಕುರುಡರಾದ ಅಧಿಕಾರಿಗಳು – ವಚನ ಭ್ರಷ್ಟರಾದರೇ ಮಲ್ಲೇಶ್ ಪೂಜಾರ್ ತಹಸೀಲ್ದಾರ್ ಸಾಗರ..!!

ತಾಳಗುಪ್ಪ:- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡಕಛೇರಿಯಲ್ಲಿರುವ ಆಧಾರ್ ಸೇವಾ ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂತಾಗಿದೆ.

ಮಾನ್ಯ ತಹಸೀಲ್ದಾರ್ ರವರಾದ ಶ್ರೀ ಮಲ್ಲೇಶ್ ಪೂಜಾರ್ ರವರು ವಾರದಲ್ಲಿ 03 ದಿನ ತಾಳಗುಪ್ಪ ನಾಡಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಿದ್ದಷ್ಟೇ ಹೊರತು ಆದೇಶ ಅನುಷ್ಠಾನ ಪಾಲಿಸದೇ ಇರುವುದು ಗಮನಕ್ಕೆ ಬಂದಿದೆ.

ಕೇಂದ್ರ ಸರ್ಕಾರ ಲಕ್ಷಾಂತರ ರೂ ಗಳ ಸಾರ್ವಜನಿಕ ತೆರಿಗೆ ಹಣ ವಿನಿಯೋಗಿಸಿ ಸುಲಲಿತ ಸೇವೆಗಾಗಿ ಆಧಾರ್ ಸೇವಾ ಕೇಂದ್ರಕ್ಕೆ ಅಗತ್ಯ ಉಪಕರಣಗಳನ್ನೂ ತಾಳಗುಪ್ಪ ನಾಡಕಛೇರಿಗೆ ಒದಗಿಸಿರುವುದು ಸರಿಯಷ್ಟೇ.

ಸರ್ಕಾರದ ಅಗತ್ಯ ಸರ್ಕಾರಿ ಸೇವೆ ಪಡೆಯಲು ಎಲ್ಲದಕ್ಕೂ ಆಧಾರ್ ಕಾರ್ಡ್ ಕೇಳುವ ಸರ್ಕಾರ ಆಧಾರ್ ಕಾರ್ಡ್ ಸೇವೆ ನೀಡುವಲ್ಲಿ ವಿಫಲವಾಗಿದೆ.

ತಾಳಗುಪ್ಪ ನಾಡಕಛೇರಿಯ ಆಧಾರ್ ಕಾರ್ಡ್ ಸೇವೆ ಅಲಭ್ಯತೆಯಿಂದ ನಾಡಕಛೇರಿ ಒಳಪಡುವ ವಿದ್ಯಾರ್ಥಿಗಳು ರೈತರು ತೀವ್ರ ಪರದಾಟದಿಂದ ಇತ್ತ ವಿದ್ಯಾರ್ಥಿಗಳು ಶಾಲೆಯತ್ತ ತೆರಳದೇ, ಅತ್ತ ರೈತರು ಜಮೀನು ಕೆಲಸಕ್ಕೆ ಹೋಗದೇ ದಿನ0ಪ್ರತಿ ನಾಡಕಛೇರಿ ತಾಳಗುಪ್ಪಕ್ಕೆ ಅಳೆಯುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನಾದರೂ ಶಿವಮೊಗ್ಗ ಜಿಲ್ಲಾಡಳಿತ ತಾಳಗುಪ್ಪ ನಾಡಕಛೇರಿಯಲ್ಲಿ ಸರ್ಕಾರಿ ಸಮಯದಲ್ಲಿ ಆಧಾರ್ ಕಾರ್ಡ್ ಸೇವಾ ಕೇಂದ್ರದ ಸೇವಾ ಸೌಲಭ್ಯ ಸಿಗುವಂತಾಗಲಿ ಎಂಬುದು ನೊಂದ ಆಧಾರ್ ಕಾರ್ಡ್ ಪಡೆಯಲು ಆಗಮಿಸಿದವರ ಒಕ್ಕೊರಲ ಧ್ವನಿಯಾಗಿದೆ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...