
ಸೊರಬ : ಆಕಳು ಮೈ ತೊಳೆಸಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವನಪ್ಪಿದ ಘಟನೆ ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಸಮೀಪ ನಡೆದಿದೆ.
ಬುಧವಾರ ಕುಪ್ಪಗಡ್ಡೆ ಸಮೀಪದ ದೊಡ್ಡಕೆರೆಗೆ ತಮ್ಮ ಮನೆಯ ಆಕಳನ್ನು ಮೈತೊಳೆಸಲೆಂದು ಉಮೇಶ್ ಕೆರೆಗೆ ಹೊಗಿದ್ದಾನೆ.ಆದರೆ ಆಕಳು ಹಗ್ಗದ ಸಮೇತವಾಗಿ ಉಮೇಶ ನನ್ನು ಎಳೆದುಕೊಂಡು ಹೊದ ಪರಿಣಾಮ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ..
ಅಗ್ನಿಶಾಮಕ ದಳದ ಸಿಬ್ಬಂದಿಗಳು ಎರಡು ಗಂಟೆಗಳ ಕಾಲ ಗ್ರಾಪಲ್ ಮೂಲಕ ಹುಡುಕಾಟ ನಡೆಸಿ ಶವವನ್ನು ಮೆಲಕ್ಕೆತ್ತಿದ್ದಾರೆ..ಯುವಕನ ಮೃತದೇಹವನ್ನು ಪೊಲಿಸರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ..ಈ ಕುರಿತು ಸೊರಬ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….
ಓಂಕಾರ್ ಎಸ್ ,ವಿ ತಾಳಗುಪ್ಪ….