ಬೆಂಗಳೂರು: ಮೀಸಲಾತಿಯ ಬಂಡಾಯದ ಬಿಸಿ ಅನುಭವಿಸುತ್ತಿದ್ದ ಸರ್ಕಾರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಎರಡು ಪ್ರಬಲ ಸಮುದಾಯಗಳಾದ ಪಂಚಮಸಾಲಿ ಸಮುದಾಯ ಹಾಗೂ ಒಕ್ಕಲಿಗ ಸಮುದಾಯಕ್ಕೆ ಕ್ರಮವಾಗಿ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 3B ಯಲ್ಲಿದ್ದ ಲಿಂಗಾಯಿತರಿಗೆ 2D ಕೆಟಗರಿ ಹಾಗೂ 3A ನಲ್ಲಿದ ಒಕ್ಕಲಿಗರಿಗೆ ಹೊಸದಾಗಿ 2C ಕೆಟಗರಿ ರಚಿಸಲು ಡಿಸೆಂಬರ್ 29ರಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಯಿತು.
ಆದರೆ ಪಂಚಮಸಾಲಿ ಸಮುದಾಯ ಸರ್ಕಾರದ ನಿರ್ಧಾರವನ್ನು ತಿರಸ್ಕರಿಸಿ ತಮಗೆ 2A ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದು.
ಸರ್ಕಾರಕ್ಕೆ ಪಂಚಮಸಾಲಿ ಸಮುದಾಯದ ಆಗ್ರಹ ತಲೆ ನೋವಾಗಿತ್ತು…
ಆದರೆ ಇದನ್ನು ಪ್ರಶ್ನಿಸಿದ ರಾಘವೇಂದ್ರ ಡಿಜಿ ಎನ್ನುವವರು ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ 2A ಮೀಸಲಾತಿ ನೀಡಬಾರದು ಎಂದು ಪಿಐಎಲ್ ಸಲ್ಲಿಸಿದರು. ರಾಘವೇಂದ್ರ ಪರವಾಗಿ ಹಿರಿಯ ವಕೀಲರಾದ ರವಿಕುಮಾರ್ ಅವರು ವಾದ ಮಂಡಿಸಿದರು ರವಿಕುಮಾರ್ ವಾದ ಆಲಿಸಿದ ಹೈಕೋರ್ಟ್ ವಿಚಾರಣೆಗೆ ಕಾಲಾವಕಾಶದ ಕೊರತೆ ಇರುವ ಹಿನ್ನೆಲೆಯಲ್ಲಿ ಜನವರಿ 30ರ ತನಕ ವಿಚಾರಣೆಯನ್ನು ಮುಂದೂಡಿದ್ದು ಅಲ್ಲಿವರೆಗೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಆದೇಶ ನೀಡಿದೆ…
ಹೈಕೋರ್ಟ್ ನ ಈ ಮಹತ್ವದ ಆದೇಶ ಸರ್ಕಾರಕ್ಕೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಆದರೆ ಮೀಸಲಾತಿಯ ಆಸೆಯಲ್ಲಿದ್ದವರಿಗೆ ನಿರಾಸೆ ಮೂಡಿದೆ…
ರಘುರಾಜ್ ಹೆಚ್.ಕೆ…9449553305…