
ತೀರ್ಥಹಳ್ಳಿ : ಆಗುಂಬೆ ಠಾಣಾ ವ್ಯಾಪ್ತಿಗೆ ಒಳಪಡುವ ಬಿದರಗೋಡು ಗ್ರಾಮ ಹಂಡಿಗೆ ಬಸ್ ನಿಲ್ದಾಣದಲ್ಲಿ ನಿನ್ನೆ ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಶವ ಒಂದು ಪತ್ತೆಯಾಗಿದ್ದು.
ಸ್ಥಳೀಯರು ಇದನ್ನು ಮೊದಲು ಗುರುತಿಸಿ ಸಂಬಂಧಪಟ್ಟ ಪೊಲೀಸ್ ಇಲಾಖೆ ಆಗುಂಬೆಗೆ ಹಾಗೂ ಬಿದರಗೋಡು ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಿದ ನಂತರ ಸ್ಥಳಕ್ಕೆ ಧಾವಿಸಿದ ಆಗುಂಬೆ ಠಾಣೆಯ ಪೊಲೀಸರು ಬಿಜೆಪಿ ಯುವ ಮೋರ್ಚಾದ ಯುವಕರ ಸಹಾಯದಿಂದ ಹಾಗೂ ಸ್ಥಳೀಯರ ಸಹಕಾರದಿಂದ ಅ ಮೃತ ದೇಹವನ್ನು ಶವ ಪರೀಕ್ಷೆಗೆ ಕಳಿಸಿದ್ದಾರೆ…

ಶವ ಪರೀಕ್ಷೆಯ ಫಲಿತಾಂಶ ಬಂದ ನಂತರ ಇದು ಸಹಜ ಸಾವೋ, ಕೊಲೆಯೂ, ಎನ್ನುವುದು ತಿಳಿದು ಬರುತ್ತದೆ…
ಪೊಲೀಸರ ಪ್ರಥಮ ಮಾಹಿತಿಯ ಪ್ರಕಾರ ಮೃತ ವ್ಯಕ್ತಿ ಬಯಲು ಸೀಮೆಯವನಾಗಿದ್ದು ಬತ್ತದ ಮಿಷನ್ ಜೊತೆ ಕೆಲಸ ಮಾಡಲು ಬಂದಿರಬಹುದು. ಕುಡಿದು ಹೆಚ್ಚಾದಾಗ ನೀರು ಸಿಗದೆ ಸತ್ತಿರಬಹುದು ಎನ್ನುತ್ತಾರೆ.. ಏಕೆಂದರೆ ಆ ಮೃತ ದೇಹದ ಬಳಿ ಲಿಕ್ಕರ್ ಪೌಚ್ ಹಾಗೂ ನೀರಿನ ಬಾಟಲ್ ಮಧು ಪ್ಯಾಕೆಟ್ ದೊರೆತಿರುವುದು ಪೊಲೀಸರ ಅನುಮಾನಕ್ಕೆ ಪ್ರಥಮ ಕಾರಣ… ಅದೇನೆ ಇದ್ದರೂ ಶವ ಪರೀಕ್ಷೆ ನಂತರ ಸಾವಿಗೆ ನಿಜವಾದ ಕಾರಣ ಬಯಲಿಗೆ ಬರುತ್ತದೆ…
ಆದರೆ ಹೀಗೆ ಒಂದು ತಿಂಗಳ ಹಿಂದೆ ಬಿದರಗೋಡು ಪಟ್ಟಣದ ಸಮೀಪ ತೋಟ ಒಂದರಲ್ಲಿ ಒಂದು ಮಹಿಳೆಯನ್ನು ಒಬ್ಬ ಕಾಮುಕ ಹತ್ಯೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು..
ಮಲೆನಾಡು ಭಾಗದಲ್ಲಿ ಅದರಲ್ಲೂ ಒಂಟಿಮನೆಗಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಇತ್ತೀಚಿಗೆ ಈ ತರ ಅನುಮಾನಾಸ್ಪದ ವ್ಯಕ್ತಿಗಳ ಸಾವು ಆತಂಕ ಮೂಡಿಸಿದೆ…
ರಘುರಾಜ್ ಹೆಚ್.ಕೆ..9449553305…