Thursday, June 19, 2025
Google search engine
Homeರಾಜ್ಯAGUMBE: ಠಾಣಾ ವ್ಯಾಪ್ತಿಯಲ್ಲಿ ಹಂಡಿಗೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ..!! ಇದು ಕೊಲೆಯೂ..? ಸಹಜ...

AGUMBE: ಠಾಣಾ ವ್ಯಾಪ್ತಿಯಲ್ಲಿ ಹಂಡಿಗೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ..!! ಇದು ಕೊಲೆಯೂ..? ಸಹಜ ಸಾವು..? ಮಲೆನಾಡಿನಲ್ಲಿ ಆತಂಕ ಮೂಡಿಸಿದ ಅಪರಿಚಿತ ವ್ಯಕ್ತಿಯ ಮೃತ ದೇಹ..!!

ತೀರ್ಥಹಳ್ಳಿ : ಆಗುಂಬೆ ಠಾಣಾ ವ್ಯಾಪ್ತಿಗೆ ಒಳಪಡುವ ಬಿದರಗೋಡು ಗ್ರಾಮ ಹಂಡಿಗೆ ಬಸ್ ನಿಲ್ದಾಣದಲ್ಲಿ ನಿನ್ನೆ ಸುಮಾರು 45 ರಿಂದ 50 ವರ್ಷ ಪ್ರಾಯದ ಅಪರಿಚಿತ ಶವ ಒಂದು ಪತ್ತೆಯಾಗಿದ್ದು.

ಸ್ಥಳೀಯರು ಇದನ್ನು ಮೊದಲು ಗುರುತಿಸಿ ಸಂಬಂಧಪಟ್ಟ ಪೊಲೀಸ್ ಇಲಾಖೆ ಆಗುಂಬೆಗೆ ಹಾಗೂ ಬಿದರಗೋಡು ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಿದ ನಂತರ ಸ್ಥಳಕ್ಕೆ ಧಾವಿಸಿದ ಆಗುಂಬೆ ಠಾಣೆಯ ಪೊಲೀಸರು ಬಿಜೆಪಿ ಯುವ ಮೋರ್ಚಾದ ಯುವಕರ ಸಹಾಯದಿಂದ ಹಾಗೂ ಸ್ಥಳೀಯರ ಸಹಕಾರದಿಂದ ಅ ಮೃತ ದೇಹವನ್ನು ಶವ ಪರೀಕ್ಷೆಗೆ ಕಳಿಸಿದ್ದಾರೆ…

ಶವ ಪರೀಕ್ಷೆಯ ಫಲಿತಾಂಶ ಬಂದ ನಂತರ ಇದು ಸಹಜ ಸಾವೋ, ಕೊಲೆಯೂ, ಎನ್ನುವುದು ತಿಳಿದು ಬರುತ್ತದೆ…

ಪೊಲೀಸರ ಪ್ರಥಮ ಮಾಹಿತಿಯ ಪ್ರಕಾರ ಮೃತ ವ್ಯಕ್ತಿ ಬಯಲು ಸೀಮೆಯವನಾಗಿದ್ದು ಬತ್ತದ ಮಿಷನ್ ಜೊತೆ ಕೆಲಸ ಮಾಡಲು ಬಂದಿರಬಹುದು. ಕುಡಿದು ಹೆಚ್ಚಾದಾಗ ನೀರು ಸಿಗದೆ ಸತ್ತಿರಬಹುದು ಎನ್ನುತ್ತಾರೆ.. ಏಕೆಂದರೆ ಆ ಮೃತ ದೇಹದ ಬಳಿ ಲಿಕ್ಕರ್ ಪೌಚ್ ಹಾಗೂ ನೀರಿನ ಬಾಟಲ್ ಮಧು ಪ್ಯಾಕೆಟ್ ದೊರೆತಿರುವುದು ಪೊಲೀಸರ ಅನುಮಾನಕ್ಕೆ ಪ್ರಥಮ ಕಾರಣ… ಅದೇನೆ ಇದ್ದರೂ ಶವ ಪರೀಕ್ಷೆ ನಂತರ ಸಾವಿಗೆ ನಿಜವಾದ ಕಾರಣ ಬಯಲಿಗೆ ಬರುತ್ತದೆ…

ಆದರೆ ಹೀಗೆ ಒಂದು ತಿಂಗಳ ಹಿಂದೆ ಬಿದರಗೋಡು ಪಟ್ಟಣದ ಸಮೀಪ ತೋಟ ಒಂದರಲ್ಲಿ ಒಂದು ಮಹಿಳೆಯನ್ನು ಒಬ್ಬ ಕಾಮುಕ ಹತ್ಯೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು..

ಮಲೆನಾಡು ಭಾಗದಲ್ಲಿ ಅದರಲ್ಲೂ ಒಂಟಿಮನೆಗಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಇತ್ತೀಚಿಗೆ ಈ ತರ ಅನುಮಾನಾಸ್ಪದ ವ್ಯಕ್ತಿಗಳ ಸಾವು ಆತಂಕ ಮೂಡಿಸಿದೆ…

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!