
ಶಿವಮೊಗ್ಗ :- ನಗರದ ಉಪವಿಭಾಗದ ಡಿವೈಎಸ್ಪಿ ಬಿ ಬಾಲರಾಜ್ ರವರಿಗೆ ಅವರ ಸುದೀರ್ಘ ಸೇವೆಯನ್ನು ಗುರುತಿಸಿ ಅವರ ಸೇವಾ ಅವಧಿಯಲ್ಲಿ ಮಾಡಿದ ಕರ್ತವ್ಯಗಳನ್ನು ಗುರುತಿಸಿ ಕೇಂದ್ರ ಗೃಹ ಸಚಿವಾಲಯ ನೀಡುವ ತನಿಖಾ ಶ್ರೇಷ್ಠತೆಗಾಗಿ ಪದಕ ಘೋಷಣೆ ಮಾಡಿ ಗೌರವಿಸಿದ್ದು.
ಡಿ ವೈ ಎಸ್ ಪಿ ಬಾಲರಾಜ್ ಅವರಿಗೆ ನಿಜವಾಗಿ ಈ ಪ್ರಶಸ್ತಿ ಸಲ್ಲಬೇಕು.. ಬಾಲರಾಜ್ ಅವರು ಕೇವಲ ಪೊಲೀಸ್ ಅಧಿಕಾರಿ ಅಷ್ಟೇ ಅಲ್ಲ ಮಾನವೀಯ ಮೌಲ್ಯವುಳ್ಳ ಅಧಿಕಾರಿ, ತಮ್ಮ ಸೇವಾ ಅವಧಿಯಲ್ಲಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಅದೇ ತರ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವುದರಲ್ಲೂ ಇವರ ಪಾತ್ರ ಹೆಚ್ಚಾಗಿದೆ ಎನ್ನಬಹುದು. ಸರಿಸುಮಾರು 20 ವರ್ಷಗಳ ಹಿಂದೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದ ಬಾಲರಾಜ್ ಅವರು ಈಗ ಶಿವಮೊಗ್ಗ ನಗರದಲ್ಲಿ ಡಿವೈಎಸ್ಪಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದು. ಇಲ್ಲೂ ಕೂಡ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ತಮ್ಮ ಕೇಳಹಂತದ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸುವ ಇವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ತಡೆಗಟ್ಟುವಲ್ಲಿ , ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ನಿಸ್ಸೀಮರು ಎನ್ನಬಹುದು…
ಜನರ ನಡುವೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಡಿ ವೈ ಎಸ್ ಪಿ ಬಾಲರಾಜ್ ಅವರಿಗೆ ಈ ಗೌರವ ಬಂದಿರುವುದು ಹೆಮ್ಮೆಯ ಸಂಗತಿ ಅಭಿನಂದನೆಗಳು ಡಿವೈಎಸ್ಪಿ ಬಾಲರಾಜ್ ಅವರಿಗೆ…
ಓಂಕಾರ ಎಸ್. ವಿ. ತಾಳಗುಪ್ಪ…