
ತೀರ್ಥಹಳ್ಳಿ:- ಕಾರ್ಮಿಕ ಇಲಾಖೆ ಕಿಟ್ ಬಂದು ತಿಂಗಳುಗಳು ಕಳೆದಿದ್ದರೂ ವಿತರಣೆ ಮಾಡದೆ ಇರುವುದು ಅವರ ನಿರ್ಲಕ್ಷತನವನ್ನು ಎದ್ದು ಕಾಣಿಸುತ್ತದೆ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಒದಗಿಸುವಲ್ಲಿ ಕಾರ್ಮಿಕ ಇಲಾಖೆ ವಿಫಲವಾಗಿದೆ ಎನ್ನಬಹುದು. ಇಲಾಖೆಯಲ್ಲಿ ಲಂಚಾವತಾರ ಹೆಚ್ಚಾಗಿದ್ದು ಯೋಜನೆಗಳನ್ನು ಸರಿಯಾಗಿ ಜನರಿಗೆ ತಲುಪಿಸಬೇಕಾದ ಇವರುಗಳೇ ಲಂಚಕ್ಕಾಗಿ ಬೇಡಿಕೆ ಇಡುತ್ತಿರುವುದು ವಿಪರ್ಯಾಸ ಎನ್ನಬಹುದು.. ಕರ್ತವ್ಯ ಲೋಪದಡಿಯಲ್ಲಿ ಒಬ್ಬ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಈಗಾಗಲೇ ವಜಾ ಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು..
6ನೇ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಬಿಡುಗಡೆಯಾದ ಕಿಟ್ ವಿತರಣೆ ಮಾಡದೆ ಹಾಗೆ ಇಟ್ಟುಕೊಂಡಿರುವುದು ಇವರ ಕರ್ತವ್ಯ ನಿರ್ಲಕ್ಷತನವನ್ನು ತೋರುತ್ತದೆ..
ಇದಕ್ಕೆಲ್ಲ ನೇರವಾಗಿ ಹೊಣೆ ತಾಲೂಕ ಆಡಳಿತ ಎಂದರೆ ತಪ್ಪಾಗುವುದಿಲ್ಲ ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿ ತಾಲೂಕು ಆಡಳಿತ ಸಮರ್ಪಕವಾದ ಕರ್ತವ್ಯ ನಿರ್ವಹಿಸುವುದರಲ್ಲಿ ವಿಫಲವಾಗಿದೆ ಎನ್ನಬಹುದು…
ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಕಾರ್ಮಿಕ ಇಲಾಖೆಗೆ ಸರಿಯಾದ ಮಾರ್ಗದರ್ಶನ ನೀಡಿ ಸಮರ್ಪಕವಾಗಿ ಕಿಟ್ ವಿತರಣೆ ಆಗುವಂತೆ ನೋಡಿಕೊಂಡರೆ ಸರ್ಕಾರ ತಂದ ಯೋಜನೆ ಸಮರ್ಪಕವಾಗಿ ಅನುಷ್ಠಾನವಾದಂತೆ ಆಗುತ್ತದೆ..
ರಘುರಾಜ್ ಹೆಚ್. ಕೆ…9449553305…