
ತೀರ್ಥಹಳ್ಳಿ : ಪಟ್ಟಣದಲ್ಲಿ ಕಾಡಾನೆ ಎಂಟ್ರಿಕೊಟ್ಟಿದೆ. ಕುರುವಳ್ಳಿಯಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಇಂದು ಬೆಳಗಿನ ಜಾವ 3-30 ರ ಸಮಯದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ರಾತ್ರಿ ಮೇಳಿಗೆ ಗ್ರಾಮದ ಕೆಳೆಕೆರೆಯಲ್ಲಿ ಕಂಡಿದ್ದ ಕಾಡಾನೆ ಕುರುವಳ್ಳಿಯಲ್ಲಿ ದಾಂದಲೆ ನಡೆಸಿದೆ.
4 ರಿಂದ 5 ವರ್ಷದ ಕಾಡಾನೆ ಎನ್ ಆರ್ ಪುರದಿಂದ ಬಂದಿರುವ ಅನುಮಾನ ವ್ಯಕ್ತವಾಗಿದೆ. ಕುರುವಳ್ಳಿಯ ನಾಗರಕಟ್ಟೆ ಸಮೀಪ ತುಂಗಾ ನದಿಗೆ ಕಾಡಾನೆ ಇಳಿದಿದೆ.
ಬೆಳಗ್ಗಿನ ಜಾವ 3.30 ರ ವೇಳೆಯಲ್ಲಿ ಕಾಣಿಸಿಕೊಂಡ ಆನೆ, ಸ್ಥಳೀಯ ನಿವಾಸಿಯೊಬ್ಬರಿಗೆ ಕಾಣಿಸಿಕೊಂಡಿದೆ. ಕುರುವಳ್ಳಿ ನಾಗರಾಜ್ ಎಂಬುವರ ಮನೆಯ ಮುಂದಿನ ಚಪ್ಪರದ ಕಂಬಗಳನ್ನ ಪುಡಿ ಮಾಡಿದೆ. ಸ್ಥಳದಲ್ಲಿ ಹೆಜ್ಜೆ ಗುರುತು ಕೂಡ ಪತ್ತೆಯಾಗಿದೆ.
2 ದಿನಗಳ ಹಿಂದೆ ಶೇಡ್ಗಾರ್, ಕಟ್ಟೆಹಕ್ಲು ಸಮೀಪ ಕಾಣಿಸಿಕೊಂಡಿದ್ದ ಕಾಡಾನೆ, ರಾಷ್ಟಿಯ ಹೆದ್ದಾರಿ 169 ರ ತೀರ್ಥಹಳ್ಳಿ-ಕೊಪ್ಪ- ಶೃಂಗೇರಿ ಮಾರ್ಗದಲ್ಲಿರುವ ಕುರುವಳ್ಳಿ ಮುಖ್ಯ ರಸ್ತೆಯಲ್ಲಿ ಓಡಾಡಿದೆ. ಅಂಗಡಿಯೊಂದರ ನೇಮ್ ಬೋರ್ಡ್ ನ್ನ ಹಾಳು ಮಾಡಿದೆ.
ಆಗುಂಬೆ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ತೀರ್ಥಹಳ್ಳಿಯ ಪಟ್ಟಣಕ್ಕೆ ಹೊಂದಿಕೊಂಡಿರುವ ಕುರುವಳ್ಳಿಯಲ್ಲಿ ಮೊದಲಬಾರಿಗೆ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕಾಡಾನೆಯ ಹುಡುಕಾಟದಲ್ಲಿದ್ದಾರೆ.
ವಿಷಯ ತಿಳಿದ ತಕ್ಷಣ ಬೆಂಗಳೂರಿನಲ್ಲಿ ಇರುವ ಗೃಹ ಸಚಿವರು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಆನೆಯನ್ನು ಹಿಡಿಯಬೇಕು ಇಲ್ಲವಾದಲ್ಲಿ ದೂರದ ಕಾಡಿಗೆ ಓಡಿಸಬೇಕು ಎಂದು ಸೂಚಿಸಿದರಲ್ಲದೇ ಹಿಡಿಯಲು ಬೇಕಾದ ಮಾವುತರು ತರಬೇತಿ ಪಡೆದ ಆನೆಗಳು ಬೇಕಾದಲ್ಲಿ ಬಳಿಸಿಕೊಳ್ಳಬೇಕು ಸೂಕ್ತ ವ್ಯವಸ್ಥೆ ಮಾಡಿ ತಕ್ಷಣವೇ ಜನರಲ್ಲಿ ಇರುವ ಆತಂಕವನ್ನು ದೂರ ಮಾಡಬೇಕೆಂದು ಸೂಚಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದಲ್ಲಿ ಇರುವ ಗೃಹ ಸಚಿವರು ನಾಳೆ ಭಾನುವಾರ ಕ್ಷೇತ್ರಕ್ಕೆ ಆಗಮಿಸಲಿದ್ದು ಕ್ಷೇತ್ರದ ಜನರು ಕಾಡಾನೆ ಹಾವಳಿಯಿಂದ ಭಯಪಡುವ ಅಗತ್ಯತೆ ಇಲ್ಲ ಎಂದು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ….
ರಘುರಾಜ್ ಹೆಚ್.ಕೆ…9449553305…