
ಹೊಸನಗರ : ಕಚ್ಚಿಗೆಬೈಲಿನ ಬಡ ರೈತರ ಬಗರ್ ಹುಕುಂ ಶುಂಠಿ ಬೆಳೆ ನಾಶ ಮಾಡಿ ಅವರ ಮೇಲೆ ಮೊಕದ್ದಮೆ ದಾಖಲಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ಕ್ರಮ ಖಂಡಿಸಿ ಮಾಜಿ ಗೃಹ ಸಚಿವರು ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಮಾಜಿ ಶಾಸಕರಾದ ಹರತಾಳ ಹಾಲಪ್ಪನವರ ನೇತೃತ್ವದಲ್ಲಿ ಹೊಸನಗರ ತಾಲೂಕು ಕಛೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಎಸಿ ಪಲ್ಲವಿ ಅವರ ಮಧ್ಯಪ್ರವೇಶದಿಂದ ಹೋರಾಟ ಅಂತ್ಯವಾಗಿದೆ.
ಎಸಿ ಪಲ್ಲವಿ ಅವರು ನೀಡಿದ ಭರವಸೆ ಮೇಲೆ ಹಾಲಿ ಮಾಜಿ ಶಾಸಕರು ಹೋರಾಟವನ್ನು ನಿಲ್ಲಿಸಿದ್ದಾರೆ…