Saturday, May 3, 2025
Google search engine
Homeಶಿವಮೊಗ್ಗಸುಂದರ ಸಾಗರದ ಇನ್ನೊಂದು ಮುಖ, ನೋಡ ಬನ್ನಿ ಸಾಗರದ ಜೆ.ಪಿ. ನಗರ, ಕಲುಷಿತ ನೀರಿನ ಟ್ಯಾಂಕ್...

ಸುಂದರ ಸಾಗರದ ಇನ್ನೊಂದು ಮುಖ, ನೋಡ ಬನ್ನಿ ಸಾಗರದ ಜೆ.ಪಿ. ನಗರ, ಕಲುಷಿತ ನೀರಿನ ಟ್ಯಾಂಕ್ ಹಾಗೂ ನಳದಲ್ಲಿ – ಚಿರನಿದ್ರೆಯಲ್ಲಿ ಸಾಗರ ನಗರಸಭೆ ಆಡಳಿತ ರೂಢರು………..?! ಗಂಭೀರ ಆರೋಪದತ್ತ ಸಾಗರೀಕರು..!!

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ನಗರಸಭೆಯ ದುರಾಡಳಿತದ ನಡೆಯಿಂದ ಒಂದಿಲ್ಲೊಂದು ಆಡಳಿತ ನಿರ್ಲಕ್ಷತನದ ಸದಾ ಸುದ್ದಿಯಲ್ಲಿದೆ. ಸಾಗರ ನಗರದ ವಾರ್ಡ್ ನಂ. 2.ಜೆ.ಪಿ ನಗರ ಅತ್ಯಂತ ಹಿಂದುಳಿದ ವರ್ಗಗಳು ವಾಸಿಸುವ ಆಶ್ರಯ ಬಡಾವಣೆಯಲ್ಲಿ ಈಗ್ಗೆ ಕೆಲವು ವರ್ಷಗಳ ಹಿಂದೇ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಮಾಡಿ ಅನೇಕ ಜನರ ಬಾಯಾರಿಕೆಯನ್ನು ನಿವಾರಿಸಿದ ಈ ನೀರಿನ ಟ್ಯಾಂಕ್ ಪರಿಸ್ಥಿತಿ ಈಗ ಹೀಗಿದೆ.

ಏಕೆಂದರೆ ಈಗ ಜೆ.ಪಿ ನಗರದಲ್ಲಿ ಸುಸಜ್ಜಿತವಾದ ಟ್ಯಾಂಕ್ ನಿರ್ಮಾಣವಾಗಿದೆ ಆದರೆ ಕೆಲವು ಸಾರಿ ನೀರು ಸರಬರಾಜು ವ್ಯತ್ಯಯ ಉಂಟಾದಾಗ ಕುಡಿಯುವ ನೀರಿನ ಅವಶ್ಯಕತೆ ಗಾಗಿ ಈ ಟ್ಯಾಂಕಿನಿಂದ ಈಗಲೂ ನೀರನ್ನು ಬಳಸುತ್ತಿದ್ದಾರೆ ಕಾರಣ ಬೋರ್ ವೆಲ್ ನೀರು ಈ ಟ್ಯಾಂಕಿಗೆ ಸರಬರಾಜು ಮಾಡಿ ಇದರಿಂದ ಈ ಭಾಗದ ಬಡಾವಣೆಯ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಈ ಟ್ಯಾಂಕ್ ನ ಪರಿಸ್ಥಿತಿ ಅಯೋಮಯವಾಗಿದೆ ಮುಳ್ಳುಕಂಟಿಗಳು ಬೆಳೆದು ದುರಾವಸ್ಥೆ ತಲುಪಿದ್ದು ತಕ್ಷಣದಲ್ಲೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕು ಈ ಭಾಗದ ಪರಿಸರವನ್ನ ಸುಂದರವಾಗಿಸುವಲ್ಲಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಸಾಗರ ನಗರದ ಪರಿಸರ ಅಧಿಕಾರಿಗಳು ಇದ್ದಾರೆಯೇ ಎಂಬುದೇ ಯಕ್ಷ ಪ್ರೆಶ್ನೆಯಾಗಿದೆಯೆಂದು ಸ್ಥಳೀಯ ನಿವಾಸಿಗಳು ಸಾಗರ ನಗರಸಭೆ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮುಂದಾದರೂ ಕುಂಭಕರ್ಣ ನಿದ್ರೆಯಲ್ಲಿರುವ ಸಾಗರ ನಗರಸಭೆ ಆಡಳಿತ ರೂಢರೂ ಇತ್ತ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವರಾ ಎಂದು ಸ್ಥಳೀಯರು ಆಕಾಶ ನೋಡುತ್ತಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ

####################################

ರಘುರಾಜ್ ಹೆಚ್.ಕೆ….9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ...