
ಮಳವಳ್ಳಿ:ಇಂದು ಉಪಾಧ್ಯಕ್ಷರ ಚುನಾವಣೆಗೆ ಸಕಲ ಸಿದ್ಧತೆ ಮಾಡಲಾಗಿತ್ತು ಪ್ರಶಾಂತ್ ರವರು ಬಿಟ್ಟರೆ ಅರ್ಜಿಯನ್ನು ಯಾರು ಹಾಕದ ಕಾರಣ ಅವರನ್ನು ಅವಿರೋಧ ಆಯ್ಕೆ ಮಾಡಿ ಚುನಾವಣೆ ಅಧಿಕಾರಿಗಳ ತಾಲ್ಲೂಕು ದಂಡಾಧಿಕಾರಿ ಆತ ವಿಜಿಯಣ್ಣ ಘೋಷಣೆ ಮಾಡಿದ್ದಾರೆ .
ನೂತನ ಪುರಸಭೆಯ ಉಪಾಧ್ಯಕ್ಷರಾದ ಪ್ರಶಾಂತ್ ಮಾತನಾಡಿ ನನ್ನ ಉಪಾಧ್ಯಕ್ಷರ ಸ್ಥಾನಕ್ಕಾಗಿ ಆಯ್ಕೆ ಮಾಡಿದ ಶಾಸಕ ಡಾ.ಕೆ.ಅನ್ನದಾನಿ ರವರಿಗೂ ಹಾಗೂ ಎಲ್ಲ ಸದಸ್ಯರಿಗೂ ಅಧ್ಯಕ್ಷರಿಗೂ ಮಾಜಿ ಉಪಾಧ್ಯಕ್ಷ ನಂದಕುಮಾರ್ ರವರೆಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಶಾಸಕ ಡಾ.ಕೆ.ಅನ್ನದಾನಿ ಪುರಸಭೆ
ಅಧ್ಯಕ್ಷರಾದ ರಾಧ ನಾಗರಾಜು ಮಾಜಿ ಉಪಾಧ್ಯಕ್ಷರಾದ ನಂದಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುಟ್ಟಸ್ವಾಮಿ ಸದಸ್ಯರಾದ ನೂರುಲ್ಲಾ ಕುಮಾರ್ ಮಾಜಿ ಅಧ್ಯಕ್ಷ ದೊಡ್ಡಯ್ಯ ಭಾಗ್ಯಮ್ಮ ಅಂಕರಾಜು ರವಿ ಕೃಷ್ಣ ಹಲವರು ಇದ್ದರು .
ಮಂಜು ಎಸ್ ಮಳವಳ್ಳಿ…
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…