Thursday, June 19, 2025
Google search engine
Homeರಾಜ್ಯಆಗುಂಬೆ ಹೋಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸೂರುನಲ್ಲಿ ನಡೆದ ಅದ್ದೂರಿ ಶಾಲಾ ವಾರ್ಷಿಕೋತ್ಸವ ..!!

ಆಗುಂಬೆ ಹೋಬಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸೂರುನಲ್ಲಿ ನಡೆದ ಅದ್ದೂರಿ ಶಾಲಾ ವಾರ್ಷಿಕೋತ್ಸವ ..!!

ಶಾಲಾ ಸಮಗ್ರ ಪ್ರಗತಿಗೆ ಪ್ರಶಂಸೆ ವ್ಯಕ್ತಪಡಿಸಿದ ..
ತಹಶೀಲ್ದಾರ್ ಅಮೃತ ಅತ್ರೇಶ್

ಪುಟಾಣಿ ಮಕ್ಕಳ ಡ್ಯಾನ್ಸ್ ಗೆ ಫಿದಾ ಆದ ಪೋಷಕರು ಮತ್ತು ಸಾರ್ವಜನಿಕರು..‌ದಾನಿಗಳು..

ಇತ್ತೀಚಿಗೆ ತಾಲೂಕಿನ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲೆ ಎನ್ನುವ ಪ್ರಶಸ್ತಿಗೆ ಬಾಜನರಾಗಿರುವ ಗುಡ್ಡೇಕೇರಿ ಸಮೀಪದ ಸರ್ಕಾರಿ ಕಿರಿಯ ಪ್ರಾಥಾಮಿಕ ಶಾಲೆ ಹೊಸೂರು ಇಲ್ಲಿ.. ಸರ್ವರ ಸಹಕಾರದಿಂದ ಅದ್ದೂರಿಯಾಗಿ ಶಾಲಾ ವಾರ್ಷಿಕೋತ್ಸವ ನೆರವೇರಿದ್ದು ಮಕ್ಕಳ ನೃತ್ಯ,ಹಾಡು, ಮಿಮಿಕ್ರಿ ಕಿರು ನಾಟಕ ಹಾಸ್ಯಗಳಿಗೆ ಪೋಷಕರ ಮತ್ತು ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದ್ದು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತೀರ್ಥಹಳ್ಳಿ ತಾಲೂಕಿನ ತಾಲೂಕು ದಂಡಾಧಿಕಾರಿಗಳು ಮತ್ತು ತಹಶೀಲ್ದರಾದ ಅಮೃತ್ ಅತ್ರೇಶ್ ಅವರು ಮಾತನಾಡಿ ” ಪೋಷಕರು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶವನ್ನು ನೀಡಿ ಆ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕೆಂದು ಮಾರ್ಗದರ್ಶನ ನೀಡಿದರು..”

ಇದೇ ಕಾರ್ಯಕ್ರಮದಲ್ಲಿ ಶಾಲೆಗಾಗಿ ದುಡಿದ ಶ್ರೀಮತಿ ರೂಪಿಣಿ, ಗಣೇಶ್ ನಾಯಕ್, ಸರ್ಕಾರಿ ಶಾಲೆಯ ಅಭ್ಯುದಯಕ್ಕೆ ತಂಡದ ಜೊತೆಗೆ ದುಡಿಯುತ್ತಿರುವ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಬಾಬು ಎಚ್ ಪಿ ಮತ್ತು ಅಡುಗೆ ಸಿಬ್ಬಂದಿಗಳಾದ ಶ್ರೀಮತಿ ನೇತ್ರಾವತಿ ಮತ್ತು ಶ್ರೀಮತಿ ಪಾರ್ವತಿ ಅವರನ್ನು ಗೌರವಿಸಲಾಯಿತು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ರವಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಾಘವೇಂದ್ರ, ಸದಸ್ಯರಾದ ಶ್ವೇತಾ ಗಿರೀಶ್ ಹೆಗಡೆ, ಮಾಜಿ ಅಧ್ಯಕ್ಷರಾದ ನಾಗರತ್ನ ಶ್ರೀನಿವಾಸ್, ಹಾಗೂ, ಜಯೇಶ್ ಹೆಗಡೆ, ಗಿರೀಶ್ ಹೆಗಡೆ, ಮಹಾಬಲೇಶ್ ಹಸಿರು ಮನೆ, ಅಬ್ದುಲ್ಲ ಹೆಚ್ ಹೆಚ್, ಆಲಿದ್, ಸುಬ್ರಹ್ಮಣ್ಯ ಭಟ್, ಬಾಳೇಹಳ್ಳಿ ಪ್ರಭಾಕರ್, ರೇಷ್ಮಾ, ಹಾಗೂ ಎಲ್ಲಾ ಎಸ್ ಡಿ ಎಂ ಸಿ ಸದ್ಯಸರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು..
ಕಾರ್ಯಕ್ರಮದ ರೂವಾರಿ, ಮುಖ್ಯ ಶಿಕ್ಷಕರಾದ ಪೂರ್ಣೇಶ್ ಅವರು ಕಾರ್ಯಕ್ರಮ ವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು, ಶಿಕ್ಷಕಿ ಜಲಜಾಕ್ಷಿ ವಂದಿಸಿದರು..

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!