
ಶಿವಮೊಗ್ಗ ಜೆಡಿಎಸ್ ನಗರಾಧ್ಯಕ್ಷರಾದ ದೀಪಕ್ ಸಿಂಗ್ ರವರ ಅದ್ಯಕ್ಷತೆಯಲ್ಲಿ ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ನಗರದಲ್ಲಿ ರಾಜ್ಯ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ ಇಂದು ಹಮ್ಮಿಕೊಂಡಿದ್ದು.
ಈ ಸಮಾವೇಶದಲ್ಲಿ ಬಿಜೆಪಿ ಸಂಸದರಾದ ಬಿ ವೈ ರಾಘವೇಂದ್ರ ಜೆಡಿಎಸ್ ಜಿಲ್ಲಾಧ್ಯಕ್ಷರು, ಜೆಡಿಎಸ್ ನ ಬೂತ್ ಹೋಬಳಿ ತಾಲೂಕು ಜಿಲ್ಲಾ ಮಟ್ಟದ ಎಲ್ಲಾ ಕಾರ್ಯಕರ್ತರು,ಉಪಾಧ್ಯಕ್ಷರು, ಮಾಜಿ ಶಾಸಕರಾದ ಪ್ರಸನ್ನ ಕುಮಾರ್ ದೀಪಕ್ ಸಿಂಗ್, ನರಸಿಂಹ ಗಂಧದ ಮನೆ, ಗೋಪಿ ಮೊದಲಿಯಾರ್, ಮುಂತಾದವರಿಂದ ಮುಂತಾದವರು ಉಪಸ್ಥಿತರಿದ್ದರು.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಈ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ ಸಮಾವೇಶಕ್ಕೆ ಬಂದು ತುಂಬಾ ಖುಷಿಯಾಯಿತು ಬಿಜೆಪಿ ಜೆಡಿಎಸ್ ಎರಡು ಪಕ್ಷ ಒಗ್ಗೂಡಿ ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸೋಣ ಎನ್ನುವ ಮಾತುಗಳನಾಡಿದರು.