Thursday, June 19, 2025
Google search engine
Homeರಾಜ್ಯತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಕೊಂ ಕೃಷ್ಣ...

ತೀರ್ಥಹಳ್ಳಿ : ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಕೊಂ ಕೃಷ್ಣ ಕುಮಾರ ರವರ ಮೇಲೆ ಬಲತ್ಕಾರ ಪ್ರಯತ್ನ,ಹಲ್ಲೆಗೆ ಯತ್ನ ..!! ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು ಬಂಡೆ ಮಾಲಿಕ ಆರ್ಮುಗಂ ಬಿನ್ ನಲ್ಲ ಸ್ವಾಮಿ ಜೈಲು ಪಾಲು..!!

ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಬಂಡೆ ಕಾರ್ಮಿಕಳಾಗಿರುವ ಸುಧಾ ಕೊಂ ಕೃಷ್ಣ ಕುಮಾರ ರವರ ಮೇಲೆ ಹಲ್ಲೆ ಬಲತ್ಕಾರಕ್ಕೆ ಪ್ರಯತ್ನ, ಬಲವಂತವಾಗಿ ಕೈ ಹಿಡಿದಿರುವ ಪ್ರಕರಣ ಮತ್ತು ಮೊಬೈಲ್ ಕಸಿದುಕೊಂಡಿರುವ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ

ಬಂಡೆ ಮಾಲಿಕ ಆರ್ಮುಗಂ ಬಿನ್ ನಲ್ಲ ಸ್ವಾಮಿ ಜೈಲು ಪಾಲು ಪಾಲಾಗಿದ್ದು… ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯೆ ಸುಧಾ ಎಂಬುವರು ಜೀವನದ ನಿರ್ವಹಣೆಗೆ ಕೂಲಿ ಮಾಡಿಕೊಂಡು ಅನೇಕ ವರ್ಷಗಳಿಂದ ಬಂಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸಮಯದಿಂದ ಅವರ ಗಂಡ ಕೃಷ್ಣಕುಮಾರ ರೊಂದಿಗೆ ಆರ್ಮುಗಂ ಬಂಡೆಯಲ್ಲಿ ಕೆಲಸವನ್ನು ಮಾಡುತ್ತಿದ್ದು. ಇವರುಗಳು ಮಾಡುತ್ತಿರುವ ಬಂಡೆಯು ಅಕ್ರಮವಾಗಿದ್ದು, ಅಧಿಕಾರಿಗಳು ಬಂದು ಪದೇಪದೇ ನಿಲ್ಲಿಸುತ್ತಿರುವ ಕಾರಣ ಸುಧಾರವರು ಬೇರೆ ಬಂಡೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆರ್ಮುಗಂ ಕಳೆದ ತಿಂಗಳು ಆಕೆಯ ಮೇಲೆ ಹಲ್ಲೆಗೆ ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದ ಪರಿಣಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪುನಃ: ದಿನಾಂಕ 19 -12- 2022 ರಂದು ಸುಧಾ ಮತ್ತು ಅವರ ಗಂಡ ಬೇರೆಯವರ ಬಂಡೆಯಲ್ಲಿ ಕೆಲಸ ಮಾಡುವಾಗ ಅಲ್ಲಿಗೆ ಬಂದ ಆಕೆಯನ್ನು ಅವಾಚ್ಚ ಶಬ್ದಗಳಿಂದ ಬೈದು ಹಲ್ಲೆಗೆ ಪ್ರಯತ್ನಿಸಿ ಮೊಬೈಲ್ ಕಸಿದುಕೊಳ್ಳುವಾಗ ಆಕೆ ಕೈ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಕಾರಣ ಇವರು ತೀರ್ಥಹಳ್ಳಿ ಠಾಣೆಗೆ ನಿನ್ನೆ ದಿನ 20 -12- 2022 ರಂದು ದೂರು ನೀಡಿದ್ದು , ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಅಪರಾಧ ಸಂಖ್ಯೆ 0228 /2022 ರಲ್ಲಿ ಐಪಿಸಿ ಸೆಕ್ಷನ್ 354 (ಎ ),506, 341 ರೆಡ್ ವಿತ್ 34, 504, 386, 354 ಮತ್ತು 114 ಸೆಕ್ಷನ್ ಪ್ರಕಾರ ಬಂಧಿಸಿ ತೀರ್ಥಹಳ್ಳಿ ವ್ಯವಹಾರಗಳ ನ್ಯಾಯಾಲಯ (ಕಿರಿಯ ವಿಭಾಗ )ಮತ್ತು ಜೆಎಂಎಫ್ ಸಿ ನ್ಯಾಯಾಲಯದೆದುರು ಹಾಜರುಪಡಿಸಿದಾಗ, ಗೌರವಾನ್ವಿತ ನ್ಯಾಯಾಧೀಶರು ಆರೋಪಿ ಆರ್ಮುಗಂ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ…

ರಘುರಾಜ್ ಹೆಚ್.ಕೆ…9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!