ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಬಂಡೆ ಕಾರ್ಮಿಕಳಾಗಿರುವ ಸುಧಾ ಕೊಂ ಕೃಷ್ಣ ಕುಮಾರ ರವರ ಮೇಲೆ ಹಲ್ಲೆ ಬಲತ್ಕಾರಕ್ಕೆ ಪ್ರಯತ್ನ, ಬಲವಂತವಾಗಿ ಕೈ ಹಿಡಿದಿರುವ ಪ್ರಕರಣ ಮತ್ತು ಮೊಬೈಲ್ ಕಸಿದುಕೊಂಡಿರುವ ಬಗ್ಗೆ ತೀರ್ಥಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ…
ಬಂಡೆ ಮಾಲಿಕ ಆರ್ಮುಗಂ ಬಿನ್ ನಲ್ಲ ಸ್ವಾಮಿ ಜೈಲು ಪಾಲು ಪಾಲಾಗಿದ್ದು… ತೀರ್ಥಹಳ್ಳಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯೆ ಸುಧಾ ಎಂಬುವರು ಜೀವನದ ನಿರ್ವಹಣೆಗೆ ಕೂಲಿ ಮಾಡಿಕೊಂಡು ಅನೇಕ ವರ್ಷಗಳಿಂದ ಬಂಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸಮಯದಿಂದ ಅವರ ಗಂಡ ಕೃಷ್ಣಕುಮಾರ ರೊಂದಿಗೆ ಆರ್ಮುಗಂ ಬಂಡೆಯಲ್ಲಿ ಕೆಲಸವನ್ನು ಮಾಡುತ್ತಿದ್ದು. ಇವರುಗಳು ಮಾಡುತ್ತಿರುವ ಬಂಡೆಯು ಅಕ್ರಮವಾಗಿದ್ದು, ಅಧಿಕಾರಿಗಳು ಬಂದು ಪದೇಪದೇ ನಿಲ್ಲಿಸುತ್ತಿರುವ ಕಾರಣ ಸುಧಾರವರು ಬೇರೆ ಬಂಡೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆರ್ಮುಗಂ ಕಳೆದ ತಿಂಗಳು ಆಕೆಯ ಮೇಲೆ ಹಲ್ಲೆಗೆ ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ಬೈದ ಪರಿಣಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪುನಃ: ದಿನಾಂಕ 19 -12- 2022 ರಂದು ಸುಧಾ ಮತ್ತು ಅವರ ಗಂಡ ಬೇರೆಯವರ ಬಂಡೆಯಲ್ಲಿ ಕೆಲಸ ಮಾಡುವಾಗ ಅಲ್ಲಿಗೆ ಬಂದ ಆಕೆಯನ್ನು ಅವಾಚ್ಚ ಶಬ್ದಗಳಿಂದ ಬೈದು ಹಲ್ಲೆಗೆ ಪ್ರಯತ್ನಿಸಿ ಮೊಬೈಲ್ ಕಸಿದುಕೊಳ್ಳುವಾಗ ಆಕೆ ಕೈ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿರುತ್ತಾನೆ. ಈ ಕಾರಣ ಇವರು ತೀರ್ಥಹಳ್ಳಿ ಠಾಣೆಗೆ ನಿನ್ನೆ ದಿನ 20 -12- 2022 ರಂದು ದೂರು ನೀಡಿದ್ದು , ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಅಪರಾಧ ಸಂಖ್ಯೆ 0228 /2022 ರಲ್ಲಿ ಐಪಿಸಿ ಸೆಕ್ಷನ್ 354 (ಎ ),506, 341 ರೆಡ್ ವಿತ್ 34, 504, 386, 354 ಮತ್ತು 114 ಸೆಕ್ಷನ್ ಪ್ರಕಾರ ಬಂಧಿಸಿ ತೀರ್ಥಹಳ್ಳಿ ವ್ಯವಹಾರಗಳ ನ್ಯಾಯಾಲಯ (ಕಿರಿಯ ವಿಭಾಗ )ಮತ್ತು ಜೆಎಂಎಫ್ ಸಿ ನ್ಯಾಯಾಲಯದೆದುರು ಹಾಜರುಪಡಿಸಿದಾಗ, ಗೌರವಾನ್ವಿತ ನ್ಯಾಯಾಧೀಶರು ಆರೋಪಿ ಆರ್ಮುಗಂ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ…
ರಘುರಾಜ್ ಹೆಚ್.ಕೆ…9449553305…