Thursday, June 19, 2025
Google search engine
Homeರಾಜ್ಯA special gift for the birth festival from the Congress High Command:...

A special gift for the birth festival from the Congress High Command: ರಾಜ್ಯದ ಚುಕ್ಕಾಣಿ ಡಿಕೆ ಶಿವಕುಮಾರ್ ಗೆ ಸಿಗುತ್ತಾ..?ಗುರುವಾರಕ್ಕೆ ಪ್ರಮಾಣವಚನ ಡೇಟ್ ಫಿಕ್ಸ್ ಆಗುತ್ತಾ..? ಡಿಕೆ,ಸಿದ್ದು ಇಬ್ಬರಲ್ಲಿ ಯಾರಾಗ್ತಾರೆ ಮುಖ್ಯಮಂತ್ರಿ..?!

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ 2023ರ ಸಾರ್ವತಿಕ ಚುನಾವಣೆ ಮುಗಿದು ಕಾಂಗ್ರೆಸ್ 135 ಸ್ಥಾನ ತೆಗೆದುಕೊಳ್ಳುವುದರ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದು ಆಡಳಿತ ಪಕ್ಷ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ.

ಜೆಡಿಎಸ್ ಪಕ್ಷ ಆಟಕ್ಕುಂಟು ಲೆಕ್ಕ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದಿದೆ.

ಕೋಮದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಆಕ್ಸಿಜನ್ ಸಿಕ್ಕಿದ್ದು ಆರೋಗ್ಯವಂತ ಸ್ಥಿತಿಯಲ್ಲಿದ್ದ ಬಿಜೆಪಿ ಕೋಮ ತಲುಪಿದೆ. .

ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣಾ ಯುದ್ಧವೇನು ಗೆದ್ದಾಯಿತು ಆದರೆ ಯಾರಾಗಬೇಕು ರಾಜರು ಎನ್ನುವ ಗೊಂದಲದಲ್ಲಿ ಇದೆ. ಸಾಕಷ್ಟು ಭಿನ್ನಮತ ಉಂಟಾಗಿದೆ ಒಂದು ರಾಜ್ಯಕ್ಕೆ ಇಬ್ಬರು ರಾಜರುಗಳು ಸ್ಪರ್ಧೆಗೆ ನಿಂತಿದ್ದಾರೆ.

ಅದರಲ್ಲಿ ಒಬ್ಬರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರಿಗೂ ಅವರವರದೇ ಆದ ಬೆಂಬಲಿಗರು ಕಾರ್ಯಕರ್ತರು ಅಭಿಮಾನಿಗಳು ಇದ್ದು ಅವರವರ ಅಭಿಮಾನಿಗಳು ಕಾರ್ಯಕರ್ತರು ,ಹಿತೈಷಿಗಳು, ಮಾರ್ಗದರ್ಶಕರು ಇವರೇ ಮುಖ್ಯಮಂತ್ರಿ ಆಗಬೇಕು ಎಂದು ಈಗಾಗಲೇ ಎಲ್ಲ ಕಡೆ ಪ್ರಚಾರ ಶುರು ಮಾಡಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರದ ಮೇಲೆ ಯಾರಾಗುತ್ತಾರೆ ಮುಖ್ಯಮಂತ್ರಿ ಎನ್ನುವುದು ನಿಂತಿದೆ.

ಒಂದು ಕಡೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ಪರಿಸ್ಥಿತಿ ಇದ್ದರೂ ಎಲ್ಲವನ್ನು ಎದುರಿಸಿ ಪಕ್ಷವನ್ನು ಕಟ್ಟಿ ಬೆಳೆಸಿ ಪಕ್ಷದ ಸಾರಥ್ಯವನ್ನು ವಹಿಸಿ ಎಲ್ಲ ಕಡೆ ತಿರುಗಾಡಿ ಪಕ್ಷ ಸಂಘಟನೆ ಮಾಡಿ ಇಷ್ಟು ಸ್ಥಾನ ಗೆಲ್ಲಲು ಕಾರಣಕರ್ತರಾದ ಡಿಕೆ ಶಿವಕುಮಾರ್ ಒಂದು ಕಡೆ ಆದರೆ ಇನ್ನೊಂದೆಡೆ ಕಳೆದ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ 5 ವರ್ಷ ಆಡಳಿತ ನಡೆಸಿ ಉತ್ತಮ ಆಡಳಿತ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಹೆಸರು ತಂದುಕೊಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೊಂದು ಕಡೆ ಇಬ್ಬರಲ್ಲಿ ಯಾರಿಗೆ ಮುಖ್ಯಮಂತ್ರಿ ಪದವಿ ನೀಡಬೇಕು ಎನ್ನುವ ಗೊಂದಲದಲ್ಲಿ ಹೈಕಮಾಂಡ್ ನಿಂತಿದೆ.

ಆದರೆ ಈಗಾಗಲೇ ಒಂದು ಬಾರಿ ಮುಖ್ಯಮಂತ್ರಿ ಆಗಿ ಕರ್ನಾಟಕ ರಾಜ್ಯದಲ್ಲಿ 5 ವರ್ಷ ಯಶಸ್ವಿಯಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಸಿದ್ದರಾಮಯ್ಯ ಅವರಿಗೆ ವಯಸ್ಸು ಆಗಿದೆ ಹಾಗೆ ಒಂದು ಬಾರಿ ಅಧಿಕಾರವನ್ನು ಅನುಭವಿಸಿರುವ ಕಾರಣ ಅವರಿಗಿಂತ ಕಿರಿಯ ವಹಿಸಿನ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಪದವಿ ನೀಡಿದರೆ ಪಕ್ಷ ಇನ್ನಷ್ಟು ಬಲಿಷ್ಠವಾಗುತ್ತದೆ ಮುಂದೆ ಲೋಕಸಭೆ ಚುನಾವಣೆಗೆ ಅದು ನೆರವಾಗುತ್ತದೆ ಎನ್ನುವ ಅಭಿಪ್ರಾಯ ಕೇಂದ್ರದ ಹಲವು ನಾಯಕರದ್ದು ಹಾಗೂ ಪಕ್ಷದ ಹೈಕಮಾಂಡ್ದು ಎನ್ನಲಾಗುತ್ತಿದೆ.

ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ಜನರ ನಾಡಿಮಿಡಿತ ಅರಿತು ಜನರ ಮೂಲ ಸಮಸ್ಯೆಗಳಾದ ಬೆಲೆ ಏರಿಕೆಯ ವಿರುದ್ಧ ಬಹಿರಂಗವಾಗಿ ಹಲವು ಉಚಿತ ಯೋಜನೆಗಳನ್ನು ನೀಡುತ್ತೇವೆ ಎಂದು ಹೇಳಿರುವುದರಿಂದ ಅಂತ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ ಆದರೆ ಆ ಎಲ್ಲಾ ಪ್ರಣಾಳಿಕೆಯಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಕಷ್ಟು ಹಣ ಖಜಾನೆಗೆ ಬೇಕಾಗುತ್ತದೆ ಇದೆಲ್ಲವನ್ನು ಯಾವ ಮಾರ್ಗದಿಂದ ತುಂಬಬೇಕು ಎನ್ನುವ ಜ್ಞಾನ ಮುಖ್ಯಮಂತ್ರಿ ಆದವರಿಗೆ ಇರಬೇಕಾಗುತ್ತದೆ.

ಆದ್ದರಿಂದ ಈಗಾಗಲೇ ಮುಖ್ಯಮಂತ್ರಿ ಆಗಿ ಹಲವು ಬಜೆಟ್ ಗಳನ್ನು ಯಶಸ್ವಿಯಾಗಿ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರೀ ಪದವಿ ಮೊದಲನೇ ಹಂತದಲ್ಲಿ ನೀಡಿದರೆ ಒಳಿತು ಎನ್ನುವುದು ಸಹ ಹೈಕಮಾಂಡ್ ನ ಕೆಲವು ನಾಯಕರ ಅಭಿಪ್ರಾಯ.

ಒಂದು ವೇಳೆ ಎರಡು ಹಂತದಲ್ಲಿ ಅಧಿಕಾರ ವಿಕೇಂದ್ರಿಕರಣ ಮಾಡಿದರೆ ಇಬ್ಬರಿಗೂ ಮುಖ್ಯಮಂತ್ರಿ ಪದವಿ ಸಿಕ್ಕಂತಾಗುತ್ತದೆ ಹಾಗೆ ಪಕ್ಷ ಸಂಘಟನೆಗೆ ಹೋರಾಡಿದ ಸಂಘಟನೆ ಮಾಡಿದ ಇಬ್ಬರಿಗೂ ಪಕ್ಷ ಬೆಂಬಲ ನೀಡಿದಂತಾಗುತ್ತದೆ ಅವರ ಕಾರ್ಯಕರ್ತರಿಗೂ ಅವರ ಅಭಿಮಾನಿಗಳಿಗೂ ಸಮಾಧಾನ ಆದಂತಾಗುತ್ತದೆ ಎನ್ನುವ ನಿಲುವು ಕೂಡ ಹೈಕಮಾಂಡ್ ದು ಆಗಿದೆ.

ಈ ಎಲ್ಲಾ ಗೊಂದಲಗಳಿಗೂ ಇಂದು ಅಥವಾ ನಾಳೆ ತೆರೆ ಬೀಳುವ ಸಾಧ್ಯತೆ ಇದ್ದು ಬಹುತೇಕ ಇದೆ ಗುರುವಾರದಂದು ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ…

ರಘುರಾಜ್ ಹೆಚ್.ಕೆ…9449553305….

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!