Thursday, June 19, 2025
Google search engine
Homeರಾಜ್ಯಶಿವಮೊಗ್ಗದಲ್ಲಿ ಕಿಡ್ನಾಪ್ ಆದ ದಾವಣಗೆರೆ ಯುವತಿ ಹುಬ್ಬಳ್ಳಿಯಲ್ಲಿ ಪೊಲೀಸರ ಕೈಗೆ..!! ಪರಿಚಯದವರೇ ಕಿಡ್ನಾಪ್ ಮಾಡುದ್ರಾ..?!

ಶಿವಮೊಗ್ಗದಲ್ಲಿ ಕಿಡ್ನಾಪ್ ಆದ ದಾವಣಗೆರೆ ಯುವತಿ ಹುಬ್ಬಳ್ಳಿಯಲ್ಲಿ ಪೊಲೀಸರ ಕೈಗೆ..!! ಪರಿಚಯದವರೇ ಕಿಡ್ನಾಪ್ ಮಾಡುದ್ರಾ..?!

ಶಿವಮೊಗ್ಗ: ಮೊನ್ನೆ ಅಂದರೆ ದಿನಾಂಕ 14-05.2023 ರಂದು ಶಿವಮೊಗ್ಗದಲ್ಲಿ ಕಿಡ್ನಾಪ್ ಆಗಿದ್ದ ಯುವತಿ ರಂಜಿತಾ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು.

ರಂಜಿತಾ ಹುಬ್ಬಳ್ಳಿಯಲ್ಲಿ ಸಿಕ್ಕಿದ್ದು ಶಿವಮೊಗ್ಗದ ಜಯನಗರ ಪೊಲೀಸರು ಕರೆದುಕೊಂಡು ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೂಲತಃ ದಾವಣಗೆರೆಯ ವಾಸಿಯಾದ ರಂಜಿತಾ ಚೆನ್ನಗಿರಿ ತಾಲೂಕಿನ ವಾಸಿಯಾಗಿದ್ದು ನಲ್ಲೂರು ಗ್ರಾಮದ ಬಸವರಾಜ್ ಎಂಬುವವರ ಮಗಳಾಗಿದ್ದಾಳೆ.

ಎರಡು ವರ್ಷ ಆದಿಚುಂಚನಗಿರಿ ಶಾಲೆಯಲ್ಲಿ ಓದಿದ ರಂಜಿತಾ ಕಳೆದ ಒಂದುವರೆ ವರ್ಷದಿಂದ ಖಾಸಗಿ ಆಸ್ಪತ್ರೆ ಒಂದರಲ್ಲಿ ಪಿಜಿಒಥೆರಪಿ ಕೋರ್ಸ್ ಓದುತ್ತಿದ್ದಳು.

ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದ ರಂಜಿತಾ ನಂಜಪ್ಪ ಲೈಫ್ ಕೇರ್ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು ಆದರೆ ಕಳೆದ ಮೂರು ತಿಂಗಳ ಹಿಂದೆ ಸವಳಂಗ ರಸ್ತೆಯಲ್ಲಿರುವ ಸ್ಟಡಿ ಹೋಂ ಹಾಸ್ಟೆಲಿಗೆ ಶಿಫ್ಟ್ ಆಗಿದ್ದಳು.

ದಿನನಿತ್ಯ ಲೈಬ್ರರಿಗೆ ತೆರಳಿ ವಿದ್ಯಾಭ್ಯಾಸ ಮಾಡುತ್ತಿದ್ದ ರಂಜಿತಾ ಕಿಡ್ನಾಪ್ ಆಗುವ ಮುನ್ನ ಅಂದರೆ ಮೇ 14 ರಂದು ಸಂಜೆ 5-15 ಕ್ಕೆ ತನ್ನ ಸಹೋದರ ನಿಶಾಂತ್ ಗೆ ಕರೆ ಮಾಡಿ ಎಟಿಎಂ ನಲ್ಲಿ ಹಣ ಬಿಡಿಸಿಕೊಳ್ಳಬೇಕು ಪಿನ್ ನಂಬರ್ ಕೇಳುತ್ತಾಳೆ ಅದೇ ಕೊನೆಯ ಕರೆ ಆಮೇಲೆ ಸಹೋದರನಿಗೆ ಆಕೆಯಿಂದ ಯಾವುದೇ ಕರೆ ಬರುವುದಿಲ್ಲ.

ಆದರೆ ಇತ್ತ ರಾತ್ರಿ ಪಿಜಿ ರೂಮ್ ಮೇಟ್ ರಂಜಿತಾಳ ಸಹೋದರನಿಗೆ ಕರೆ ಮಾಡಿ ಸಂಜೆ ಲೈಬ್ರರಿಗೆ ಹೋದ ರಂಜಿತಾ ಇಷ್ಟು ಹೊತ್ತಾದರೂ ಬಂದಿಲ್ಲ ಎಂದು ತಿಳಿಸುತ್ತಾಳೆ. ನಂತರ ಅವಳಿಗೆ ಫೋನ್ ಮಾಡಿದ ಅವರ ಕುಟುಂಬದವರು ರಿಂಗ್ ಆದರೂ ಮಗಳು ಕರೆ ಸ್ವೀಕರಿಸದ ಕಾರಣ ಗಾಬರಿಯಾಗಿ ಏನೋ ಎಡವಟ್ಟಾಗಿದೆ ಎಂದುಕೊಂಡು ಪೋಷಕರು ನಲ್ಲೂರಿನಿಂದ ಶಿವಮೊಗ್ಗಕ್ಕೆ ಬರುತ್ತಾರೆ.

ಈ ಬೆಳವಣಿಗೆಗಳ ಮಧ್ಯೆ ರಂಜಿತಾ ಫೋನಿಂದ ರಂಜಿತಾ ಪೋಷಕರಿಗೆ ಟೆಕ್ಸ್ಟ್ ಮೆಸೇಜ್ ಒಂದು ಬಂದಿದ್ದು ನಿಮ್ಮ ಮಗಳು ನನ್ನ ಜೊತೆ ಸೇಫ್ ಆಗಿ ಇದ್ದಾಳೆ. 20 ಲಕ್ಷ ರೂ. ರೆಡಿ ಮಾಡಿಕೊಳ್ಳಿ, ಪೊಲೀಸ್ ಅಥವಾ ರಾಜಕೀಯದವರ ಹತ್ತಿರ ಹೋದರೆ ನಿಮ್ಮ ಮಗಳ ಡೆಡೆ ಬಾಡಿನೂ ಸಿಗಲ್ಲ ಎಂದು ಬೆದರಿಕೆಯ ಮೆಸೇಜ್ ಹಾಕಿರುತ್ತಾರೆ.

ಇದನ್ನು ನೋಡಿದ ರಂಜಿತಾ ಪೋಷಕರು ಇನ್ನಷ್ಟು ಗಾಬರಿಯಿಂದ ಮಗಳ ಕಿಡ್ನಾಪ್ ಹಾಗೂ ಹಣಕ್ಕೆ ಬೇಡಿಕೆ ಎರಡು ದೂರನ್ನು ಶಿವಮೊಗ್ಗ ಜಯನಗರ ಠಾಣೆಗೆ ನೀಡುತ್ತಾರೆ.

ದೂರು ದಾಖಲಿಸಿಕೊಂಡ ಶಿವಮೊಗ್ಗ ಜಯನಗರ ಠಾಣೆಯ ಪೊಲೀಸರು ಕಿಡ್ನಾಪ್ ಆದ ರಂಜಿತಾ ನನ್ನು ಹುಡುಕಲು ಒಂದು ವ್ಯವಸ್ಥಿತ ಟೀಮ್ ರೆಡಿ ಮಾಡಿಕೊಂಡು ಎಲ್ಲೆಡೆ ಹುಡುಕಾಟ ಪ್ರಾರಂಭಿಸುತ್ತಾರೆ.

ಆದರೆ ಹುಬ್ಬಳ್ಳಿಯಲ್ಲಿ ರಂಜಿತಾ ಜಯನಗರ ಪೊಲೀಸರಿಗೆ ಸಿಕ್ಕಿದ್ದು ಆಕೆಯನ್ನು ಕರೆದುಕೊಂಡು ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಒಂದು ವೇಳೆ ಆಕೆ ಸಿಕ್ಕಿದ್ದು ನಿಜವಾದರೆ ಆಕೆಯನ್ನು ಕರೆದುಕೊಂಡು ಹೋದವರು ಯಾರು ? ಅವರಿಗೂ ಆಕೆಗೂ ಮೊದಲೇ ಪರಿಚಯವಿತಾ..? ಈ ಕಿಡ್ನಾಪ್ ಪ್ರಕರಣದ ಹಿಂದೆ ಇರುವವರು ಯಾರು..? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಪೊಲೀಸರ ತನಿಖೆಯಿಂದ ಹೊರಬರಬೇಕಾಗಿದೆ…

ರಘುರಾಜ್ ಹೆಚ್.ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!