Thursday, May 1, 2025
Google search engine
Homeಶಿವಮೊಗ್ಗಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ - ಕದ್ದ ಮಾಲು ಸಮೇತ ಕಳ್ಳನ ಬಂಧನ..!!

ಸೊರಬ ಪೊಲೀಸರ ಮಿಂಚಿನ ಕಾರ್ಯಾಚರಣೆ – ಕದ್ದ ಮಾಲು ಸಮೇತ ಕಳ್ಳನ ಬಂಧನ..!!

ಸೊರಬ :- ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಗುತ್ತಿ ಗ್ರಾಮದಲ್ಲಿ ದಿನಾಂಕ 06-06-2022 ರಂದು ಪಿ. ಡಬ್ಲ್ಯೂ. ಡಿ ವಸತಿ ಗೃಹದ ಮುಂಬಾಗಿಲಿನ ಬೀಗ ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸೊರಬ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 92/2022 ಕಲಂ 457,380 ಐ. ಪಿ. ಸಿ. ರೀತ್ಯಾ ಪ್ರಕರಣ ದಾಖಲಾಗಿದ್ದು .

ಕಳುವಾದ ಮಾಲು ಮತ್ತು ಆರೋಪಿಗಳನ್ನೂ ಪತ್ತೆ ಮಾಡುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಿ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ಶಿವಾನಂದ ಎಸ್. ಮದಗಂಡಿ ಕೆ. ಎಸ್. ಪಿ. ಎಸ್. ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪ ವಿಭಾಗ ರವರ ಮೇಲುಸ್ತುವಾರಿಯಲ್ಲಿ ಸೊರಬ ವೃತ್ತ ನಿರೀಕ್ಷಕರಾದ ರಾಜಶೇಖರ್ ಮತ್ತು ಸೊರಬ ಠಾಣಾ ದೇವರಾಜ ಪಿ. ಎಸ್. ಐ. ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು.

ತಂಡದಲ್ಲಿ ಆನವಟ್ಟಿ ಪಿ. ಎಸ್. ಐ. ರಾಜು ರೆಡ್ಡಿ, ಪ್ರೊಬೆಷನರಿ ಪಿ. ಎಸ್. ಐ. ಕುಮಾರ್, ಸಿಬ್ಬಂದಿಗಳಾದ ಸಿ. ಎಚ್. ಸಿ.- 514 ನಾಗರಾಜ, ಪಿ. ಸಿ.-1212 ನಾಗರಾಜ್, ಸಲ್ಮಾನ್ ಖಾನ್ ಹಾ. ಜಿ ಪಿ. ಸಿ.- 714, ರಾಘವೇಂದ್ರ ಪಿ. ಸಿ. – 1106, ಸಂದೀಪ್ ಪಿ. ಸಿ.1305, ಗೋಪಾಲ ಪಿ. ಸಿ. 751, ಶಿವಾನಂದ ಪಿ. ಸಿ.816, ವಿಶ್ವನಾಥ್ ಪಿ. ಸಿ.1021, ಪಿ. ಸಿ.2105 ಹನುಮಂತಪ್ಪ, ಪಿ. ಸಿ.878 ಉಮೇಶ್, ಎ. ಎಚ್. ಸಿ ಜಗದೀಶ್ ಹಾಗೂ ಬಂಗಾರಪ್ಪ ರವರು ಇದ್ದು.

ದಿನಾಂಕ 18/06/2022 ರಂದು ಈ ಪ್ರಕರಣದ ಆರೋಪಿಯಾದ ಮಂಜುನಾಥ @ ಬಿದರಿ ಮಂಜು ಬಿನ್ ಧರಿಯಪ್ಪ,44 ವಯಸ್ಸು, ಯಮ್ಮಿಗನೂರು ಗ್ರಾಮ ಹಿರೇಕೆರೂರ ತಾಲ್ಲೂಕು, ಹಾವೇರಿ ಜಿಲ್ಲೆ ಈತನನ್ನು ಚಿಕ್ಕೇರೂರು ಗ್ರಾಮದಲ್ಲಿ ವಶಕ್ಕೆ ಪಡೆದುಕೊಂಡು ಸದ್ರಿ ಆರೋಪಿತನಿಂದ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 03 ಮನೆ ಕಳ್ಳತನ ಪ್ರಕರಣಗಳು ಮತ್ತು ಆನವಟ್ಟಿ ಠಾಣಾ ವ್ಯಾಪ್ತಿಯಲ್ಲಿ 02 ಮನೆ ಕಳ್ಳತನ ಪ್ರಕರಣಗಳು ಒಟ್ಟು 05 ಪ್ರಕರಣಗಳು ಪತ್ತೆಯಾಗಿದ್ದು. ಸದರಿ ಪ್ರಕರಣಗಳಿಂದ 182 ಗ್ರಾಂ ಚಿನ್ನಾಭರಣಗಳು ಮತ್ತು 01 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 9,80,000 ರೂ ಗಳಾಗಿರುತ್ತದೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂದನಕ್ಕೆ ನೀಡಲಾಗಿರುತ್ತದೆ. ಕಳ್ಳನನ್ನು ಹೆಡೆಮುರಿ ಕಟ್ಟುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಸಿಬ್ಬಂದಿಗಳಿಗೂ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಓಂಕಾರ ಎಸ್. ವಿ. ತಾಳಗುಪ್ಪ

#####################################

ರಘುರಾಜ್ ಹೆಚ್.ಕೆ…9449553305…..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...