Thursday, June 19, 2025
Google search engine
Homeರಾಜ್ಯಪಿಂಚಣಿಗಾಗಿ ಪರದಾಟ..! ಸರ್ಕಾರಿ ಸೌಲಭ್ಯ ಪಡೆಯಲು 07 ಕಿ. ಮೀ ಕಾಲ್ನಡಿಗೆಯಲ್ಲಿ ಬಂದ ವೃದ್ಧೆ ಸರ್ಕಾರಿ...

ಪಿಂಚಣಿಗಾಗಿ ಪರದಾಟ..! ಸರ್ಕಾರಿ ಸೌಲಭ್ಯ ಪಡೆಯಲು 07 ಕಿ. ಮೀ ಕಾಲ್ನಡಿಗೆಯಲ್ಲಿ ಬಂದ ವೃದ್ಧೆ ಸರ್ಕಾರಿ ಕಛೇರಿಯಲ್ಲೇ ಕುಸಿದೇ ಬಿದ್ದಳು – ಎಷ್ಟೇ ಹೊತ್ತಾದರೂ ಬಾರದ ಗ್ರಾಮ ಲೆಕ್ಕಿಗ – ಕರ್ತವ್ಯ ನಿರ್ಲಕ್ಷತನ – ಕರ್ತವ್ಯ ಲೋಪವೆಸಗಿದ ಗ್ರಾಮ ಲೆಕ್ಕಿಗನನ್ನು ಸೇವೆಯಿಂದ ವಜಾ ಮಾಡುವಂತೆ ಪ್ರತಿಭಟನಾಕಾರರ ಪ್ರತಿಭಟನೆ – ನೋಟೀಸ್ ನೀಡಿ ಸುಮ್ಮನಾದ್ರು ತಹಸೀಲ್ದಾರ್..!! ಕಣ್ಣಿದ್ದೂ ಕುರುಡರಾದರೆ ಕಂದಾಯ ಇಲಾಖೆ ಅಧಿಕಾರಿಗಳು..!!

ಹೊಸನಗರ (ನಿಟ್ಟೂರು ):- ಹೊಸನಗರ ತಾಲ್ಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಿಗೆ ಗ್ರಾಮದ ನಿವಾಸಿ ಶ್ರೀಮತಿ ಸಾದಮ್ಮ ಎಂಬುವವರು ಪಿಂಚಣಿ ಸರ್ಕಾರಿ ಸೌಲಭ್ಯ ಪಡೆಯಲು ದಿನಾಂಕ 17/06/2022 ತನ್ನ ಹೆಬ್ಬಿಗೆ ಗ್ರಾಮದಿಂದ ನಿಟ್ಟೂರು ಗ್ರಾಮದವರೆಗೆ ಸುಮಾರು 07 ಕಿ. ಮೀ ಕಾಲ್ನಡಿಗೆಯಲ್ಲಿ ಬಂದು ನಿಟ್ಟೂರು ಗ್ರಾಮದಲ್ಲಿರುವ ಸರ್ಕಾರಿ ಕಛೇರಿಯಲ್ಲಿ ಆ ಬಡ ವೃದ್ಧೆ ಮಧ್ಯಾಹ್ನ 01:00 ಗೂ ಹೆಚ್ಚಿನ ಸಮಯ ಕಾಯುತ್ತಾ ಇದ್ದರೂ ಗ್ರಾಮ ಲೆಕ್ಕಿಗ ಡಿ. ಪಿ. ಮಂಜಪ್ಪ, ಗ್ರಾಮ ಲೆಕ್ಕಧಿಕಾರಿ, ನಾಗೋಡಿ ವೃತ್ತ ಕಾದು ಕಾದು ತೀವ್ರ ಅಸ್ವಸ್ಥಳಾದ ಶ್ರೀಮತಿ ಸಾದಮ್ಮ ಸರ್ಕಾರಿ ಕಛೇರಿಯಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅಸ್ವಸ್ಥಳಾಗಿ ಬಿದ್ದಿದ್ದ ವೃದ್ಧೆ ಶ್ರೀಮತಿ ಸಾದಮ್ಮ ಉಪಚರಿಸಿ, ಸ್ಥಳೀಯರು ಸ್ಥಳದಲ್ಲೇ ಪ್ರತಿಭಟನೆ ನೆಡೆಸಿ ಈ ಹಿಂದಿನಿಂದಲೂ ಈ ಗ್ರಾಮ ಲೆಕ್ಕಿಗನ ವಿರುದ್ಧ ಮೌಖಿಕವಾಗಿ ಹಾಗೂ ಲಿಖಿತ ದೂರು ಸಲ್ಲಿಸಿದರೂ ಸಂಬಂಧ ಪಟ್ಟ ಕಂದಾಯ ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಇರುವುದೇ ಇಂತಹ ಘಟನೆಗಳು ನೆಡೆಯುತ್ತಿರುವುದು ಸಕಾರಣವಾಗಿದೆ. ಕರ್ತವ್ಯ ಲೋಪ, ಕರ್ತವ್ಯ ಲೋಪವೆಸಗಿದ ಡಿ. ಪಿ. ಮಂಜಪ್ಪ ಗ್ರಾಮ ಲೆಕ್ಕಾಧಿಕಾರಿ ನಾಗೋಡಿ ವೃತ್ತ ನನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಪ್ರತಿಭಟನೆಗೆ ಹೊಸನಗರ ತಹಸೀಲ್ದಾರ್ ಕರ್ತವ್ಯ ಲೋಪವೆಸಗಿದ ಡಿ. ಪಿ. ಮಂಜಪ್ಪ ನಿಗೆ ನೋಟೀಸ್ ನೀಡಿದ್ದಾರೆ.

ದಯವಿಟ್ಟು ಅರ್ಹ ಶ್ರೀಮತಿ ಸಾದಮ್ಮ ರವರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಅಗತ್ಯ ಕ್ರಮಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಶ್ರೀ ಸೆಲ್ವಮಣಿ ಹಾಗೂ ಶಿವಮೊಗ್ಗ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ನಾಗೇಂದ್ರ ಹೊನ್ನಳ್ಳಿ ರವರು ಶ್ರೀಮತಿ ಸಾದಮ್ಮ ರವರಿಗೆ ಸೂಕ್ತ ನ್ಯಾಯ ಒದಗಿಸುವ ವಿಶ್ವಾಸ ಹೆಚ್ಚಿದೆ ಹಾಗೂ ಕರ್ತವ್ಯ ಲೋಪವೆಸಗಿದ ನಾಗೋಡಿ ವೃತ್ತ ಕರ್ತವ್ಯ ನಿರತ ಡಿ. ಪಿ. ಮಂಜಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲೇಬೇಕು – ಸಾರ್ವಜನಿಕ ತೆರಿಗೆ ಹಣದಲ್ಲಿ ಸಂಬಳ ತಿನ್ನುತ್ತಿರುವ ಇನ್ನಿತರ ಮೈಗಳ್ಳ ಭ್ರಷ್ಟ ಅಧಿಕಾರಿಗಳಿಗೆ ಪಾಠವಾಗಬೇಕು ಬೇಕು ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ತಹಸೀಲ್ದಾರ್ ಹೊಸನಗರರವರು ಕೇವಲ ಕರ್ತವ್ಯ ಲೋಪವೆಸಗಿರುವ ಡಿ. ಪಿ. ಮಂಜಪ್ಪ ವಿರುದ್ಧ ಸಾಮಾನ್ಯ ಜನರ ಕಣ್ಣು ಒರೆಸುವ ತಂತ್ರಕ್ಕೆ ನೋಟೀಸ್ ಕೊಟ್ಟು ಸುಮ್ಮನಾಗುತ್ತಾರೋ…..?! ಅಥವಾ ಯಾವುದಾದರೂ ಸೂಕ್ತ ಕ್ರಮ ಕೈಗೊಳ್ಳುವರಾ….?! ಕಾದು ನೋಡೋಣಾ……?!!!

ಓಂಕಾರ ಎಸ್. ವಿ. ತಾಳಗುಪ್ಪ…

#####################################

ರಘುರಾಜ್ ಹೆಚ್. ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!