Thursday, June 19, 2025
Google search engine
Homeರಾಜ್ಯTHIRTHALLI Political calculation : ಒಗ್ಗಟ್ಟಿನ ಮಂತ್ರ ಜಪಿಸಿದ ಆರ್‌ಎಂ ಎಂ ಮತ್ತು ಕಿಮ್ಮನೆ...

THIRTHALLI Political calculation : ಒಗ್ಗಟ್ಟಿನ ಮಂತ್ರ ಜಪಿಸಿದ ಆರ್‌ಎಂ ಎಂ ಮತ್ತು ಕಿಮ್ಮನೆ ರತ್ನಾಕರ್ ದೇವರ ಸನ್ನಿಧಾನದಲ್ಲಿ ಒಂದಾದ ಮುಖಂಡರುಗಳು..!! ಈ ಒಗ್ಗಟ್ಟು ಎಷ್ಟು ದಿನ..?! ಕಿಮ್ಮನೆ ಹೊಂದಾಣಿಕೆಗೆ ಕಾರಣವೇನು ಗೊತ್ತಾ..?!

ತೀರ್ಥಹಳ್ಳಿ : ಗಾಡ್ರಗದ್ದೆಯ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಆರ್ ಎಂ ಮಂಜುನಾಥ್ ಗೌಡರು ಹಾಗೂ ಕಿಮ್ಮನೆ ರತ್ನಾಕರ್ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ…

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಗಳಾಗಿರುವ ಅಪೇಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರು ಕೆಪಿಸಿಸಿಯ ಸದಸ್ಯರು ಆಗಿರುವ ಆರ್ ಎಂ ಮಂಜುನಾಥ್ ಗೌಡರು ಹಾಗೂ ಮಾಜಿ ಸಚಿವರು ಕೆಪಿಸಿಸಿಯ ವಕ್ತಾರರು ಆಗಿರುವ ಕಿಮ್ಮನೆ ರತ್ನಾಕರ್ ಅವರು ಇತ್ತೀಚಿನ ದಿನಗಳಲ್ಲಿ ಒಬ್ಬರಿಗೊಬ್ಬರು ಟೀಕಾಪ್ರಹಾರ ನಡೆಸುತ್ತಾ ಬಂದಿದ್ದರು. ಎಷ್ಟು ಸಮಯದಲ್ಲಿ ನಾವು ಒಂದಾಗಿದ್ದೇವೆ ಒಗ್ಗಟ್ಟಿನಿಂದ ಇರುತ್ತೇವೆ ಎಂದು ಒಗ್ಗಟ್ಟಿನ ಮಂತ್ರ ಕೂಡ ಜಪಿಸಿದ್ದರು. ಆದರೆ ಪುನಂ ಮತ್ತೆ ಬೇರಾಗುತ್ತಿದ್ದರು ಟೀಕಾ ಪ್ರಹಾರಗಳನ್ನು ನಡೆಸುತ್ತಿದ್ದರು. ಆದರೆ ಈಗ ತಾಜಾ ಬೆಳವಣಿಗೆ ಒಂದರಲ್ಲಿ ದೇವರ ಸನ್ನಿಧಾನದಲ್ಲಿ ಇಬ್ಬರು ಮುಖಂಡರುಗಳು ಒಂದಾಗಿ ಹಳೆ ವೈಶ್ಯಮ್ಯಗಳನ್ನು ಮರೆತು ಪಕ್ಷ ಗೋಸ್ಕರ ದುಡಿಯೋಣ ಯಾರಿಗೆ ಟಿಕೆಟ್ ಕೊಟ್ಟರು ಗೆಲುವು ಒಂದೇ ನಮ್ಮ ಗುರಿ ಎಂದು ಮತ್ತೆ ಚುನಾವಣೆ ಗೋಸ್ಕರ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಈ ಬೆಳವಣಿಗೆ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದೆ ಎಂದರೆ ತಪ್ಪಾಗಲಾರದು ..

ಕಿಮ್ಮನೆ ಆರ್‌ಎಂ, ಎಂ ಜೊತೆಗೆ ಹೊಂದಿಕೊಳ್ಳಲು ಕಾರಣವೇನು..?!

ಇತ್ತೀಚಿನ ದಿನಗಳಲ್ಲಿ ಕಿಮ್ಮನೆ ರತ್ನಾಕರ್ ಜೊತೆಗೆ ಇರುತ್ತಿದ್ದ ಸಾಕಷ್ಟು ಜನ ಪ್ರಭಾವಿ ಮುಖಂಡರುಗಳು ಆರ್ ಎಂ ಮಂಜುನಾಥ್ ಗೌಡರ ಕಡೆ ವಾಲಿದ್ದಾರೆ ಹಾಗೂ ಇನ್ನೂ ಕೆಲವರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಬಾಳೆಹಳ್ಳಿ ಸುಧಾಕರ್ ಅಂತ ಪ್ರಬಲ ಮುಖಂಡರು ಬಿಜೆಪಿ ಪಕ್ಷವನ್ನು ಸೇರಿದ್ದಾರೆ ಇನ್ನು ಕೆಲವರು ಸೇರುವ ಹಂತದಲ್ಲಿದ್ದಾರೆ ಇವೆಲ್ಲವನ್ನು ಅರಿತಿರುವ ಕಿಮ್ಮನೆ ರತ್ನಾಕರ್ ಎಲ್ಲೋ ಒಂದು ಕಡೆ ಇಲ್ಲಿ ಹಿನ್ನಡೆ ಆಗುತ್ತಿದೆ ಈ ಹಿನ್ನಡೆಯನ್ನು ತಪ್ಪಿಸಲು ಹೊಂದಾಣಿಕೆ ಅನಿವಾರ್ಯ ಎನ್ನುವುದನ್ನು ಅರಿತು ಈ ಹೊಂದಾಣಿಕೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ ‌.. ಹಾಗೂ ಈ ಸಲ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಅನ್ನು ಶತಾಯಗತಾಯ ತೆಗೆದುಕೊಳ್ಳಬೇಕೆಂದು ಆರ್‌ಎಂ ಮಂಜುನಾಥ್ ಗೌಡರು ನಿರ್ಧರಿಸಿದ್ದು ಅದಕ್ಕೋಸ್ಕರ ಆರೋಗ್ಯ ಸರಿಯಿಲ್ಲದಿದ್ದರೂ ಪಕ್ಷ ನಿಷ್ಠೆಯಿಂದ ಕಾಶ್ಮೀರದವರೆಗೂ ಪಯಣ ಬೆಳೆಸಿದ್ದಾರೆ.. ಇದಕ್ಕೂ ಹೆಚ್ಚಾಗಿ ಅರ್ ಎಂ ಮಂಜುನಾಥ್ ಗೌಡರು ಮತ್ತು ಡಿಕೆ ಶಿವಕುಮಾರ್ ನಡುವೆ ಉತ್ತಮ ಬಾಂಧವ್ಯವಿದೆ… ಇದು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ…

ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇನ್ನೂ ಕೆಲವೇ ದಿನಗಳಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಘೋಷಣೆ ಆಗುವ ಹಂತದಲ್ಲಿರುವಾಗಲೇ ಈ ಜೋಡಿಗಳು ಒಂದಾಗಿರುವುದು ಈ ಇಬ್ಬರ ಪರಸ್ಪರ ವಿರೋಧದಿಂದ ಗೆಲುವಿಗೆ ಮುನ್ನುಡಿ ಬರೆದಿದ್ದ ಹಾಲಿ ಗೃಹ ಸಚಿವರಾಗಿರುವ ಆರಗ ಜ್ಞಾನೇಂದ್ರ ಅವರಿಗೆ ಸ್ವಲ್ಪ ನಿದ್ದೆ ಕೆಡಿಸಿದೆ ಎಂದರೆ ತಪ್ಪಾಗಲಾರದು…

ರಘುರಾಜ್ ಹೆಚ್.ಕೆ..9449553305…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!