Thursday, June 19, 2025
Google search engine
Homeರಾಜ್ಯಶಿವಮೊಗ್ಗದಲ್ಲಿ ತ್ರಿಪಕ್ಷಗಳ ರೋಡ್ ಶೋ ಮತಗಳ ಬೇಟೆಗೆ ಕಸರತ್ತು ..!! ಮತದಾರರ ಒಲವು ಯಾವ...

ಶಿವಮೊಗ್ಗದಲ್ಲಿ ತ್ರಿಪಕ್ಷಗಳ ರೋಡ್ ಶೋ ಮತಗಳ ಬೇಟೆಗೆ ಕಸರತ್ತು ..!! ಮತದಾರರ ಒಲವು ಯಾವ ಕಡೆ..?!

ಶಿವಮೊಗ್ಗ: ನಗರದಲ್ಲಿ ಇಂದು ಬಿಜೆಪಿ, ಕಾಂಗ್ರೆಸ್, ಜಾತ್ಯತೀತ ಜನತಾದಳ ಸೇರಿದಂತೆ ಮೂರು ಪಕ್ಷದ ಅಭ್ಯರ್ಥಿಗಳು ರೋಡ್ ಶೋ ಮೂಲಕ ನಗರದಾದ್ಯಂತ ಸಂಚರಿಸಿ ಮತದಾರರ ಗಮನ ಸೆಳೆಯಲು ಯತ್ನಿಸಿದರು.

ಬಿಜೆಪಿಯಿಂದ ಸ್ಪರ್ಧಿಸಿರುವ ಚನ್ನಬಸಪ್ಪ( ಚೆನ್ನಿ) ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹಾಗೂ ಅವರ ಪುತ್ರ ಕೆಇ ಕಾಂತೇಶ್ ಅಪಾರ ಜನಸ್ತೋಮದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಗಮನಸೆಳೆದರು.

ಜಾತ್ಯಾತೀತ ಜನತಾದಳದ ಅಭ್ಯರ್ಥಿ ಆಯನೂರ್ ಮಂಜುನಾಥ್ ಪರವಾಗಿ ಸಹ್ಯಾದ್ರಿ ಕಾಲೇಜಿನಿಂದ ಹೊರಟ ರೋಡ್ ಶೋ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾತ್ಯಾತೀತ ಜನತಾದಳದ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಮತದಾರರ ಗಮನ ಸೆಳೆದರು. ಈ ಸಮಯದಲ್ಲಿ ಇವರಿಗೆ ಮಾಜಿ ಶಾಸಕರಾದ ಕೆಬಿ ಪ್ರಸನ್ನ ಕುಮಾರ್ ಹಾಗೂ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಹಾಗೂ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ವಲಸೆ ಹೋಗಿರುವ ಹಲವು ಕಾಂಗ್ರೆಸ್ ನಾಯಕರುಗಳು ಬಿಜೆಪಿ ನಾಯಕರುಗಳು ಜೊತೆಯಾಗಿ ಮತಯಾಚಿಸಿದರು.

ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಹೆಚ್, ಸಿ ಯೋಗಿಶ್ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸುವುದರ ಮೂಲಕ ಮತದಾನವನ್ನು ಯಾಚಿಸಿದರು ಇವರಿಗೆ ಕಾಂಗ್ರೆಸ್ನ ನ ಹಾಲಿ ಮಹಾನಗರ ಪಾಲಿಕೆಯ ಸದಸ್ಯರುಗಳು, ಕಾಂಗ್ರೆಸ್ನ ನ ಯುವ ಮುಖಂಡರುಗಳು, ಸ್ನೇಹಿತರು, ಬಂಧುಗಳು, ಜೊತೆಯಾದರು..

ಈ ಮೂರು ಪಕ್ಷಗಳು ರೋಡ್ ಶೋ ನಡೆಸುವುದರ ಮೂಲಕ ಮತದಾರರ ಗಮನ ಸೆಳೆದರು ಆದರೆ ಮತದಾರ ಯಾರಿಗೆ ತನ್ನ ಅಮೂಲ್ಯವಾದ ಮತವನ್ನು ನೀಡುತ್ತಾನೆ ಎನ್ನುವುದು ಇದೇ ತಿಂಗಳ 10ನೇ ತಾರೀಖು ಅಂದರೆ ಬುಧವಾರ ಗೊತ್ತಾಗುತ್ತದೆ.

ಕೇವಲ ಒಂದು ದಿನ ಮತದಾನಕ್ಕೆ ಉಳಿದ ಈ ಸಮಯದಲ್ಲಿ ಶಿವಮೊಗ್ಗ ನಗರದ ಪ್ರಜ್ಞಾವಂತ ನಾಗರಿಕರು ತಮ್ಮ ಮುಂದಿನ ಉಜ್ವಲ ಭವಿಷ್ಯಕ್ಕಾಗಿ, ಶಿವಮೊಗ್ಗದ ಸಮಗ್ರ ಅಭಿವೃದ್ಧಿಗಾಗಿ, ಮೂರನೇ ವ್ಯಕ್ತಿಗಳ ಸಹಾಯವಿಲ್ಲದೆ ನೇರವಾಗಿ ಸಂಪರ್ಕಕ್ಕೆ ಸಿಗುವ ನಾಯಕನಿಗಾಗಿ ಉತ್ತಮ ಎಲ್ಲರೊಂದಿಗೂ ಬೆರೆತು ಎಲ್ಲರ ಸಂಪರ್ಕಕ್ಕೂ ಸಿಗುವ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳಿಸುತ್ತಾರೆ ಎನ್ನುವ ನಂಬಿಕೆ ಪತ್ರಿಕೆಯದ್ದು…

ರಘುರಾಜ್ ಹೆಚ್.ಕೆ…9449553305…

RELATED ARTICLES
- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!