Monday, May 5, 2025
Google search engine
Homeರಾಜ್ಯ"""ವರದಿಯ ಫಲಶ್ರುತಿ""" ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ರಸ್ತೆ ಕಾಮಗಾರಿಯಲ್ಲಿ ಗೋಲ್ಮಾಲ್..! ತೇಪೆ ಹಚ್ಚಲು ಮುಂದಾದ...

“””ವರದಿಯ ಫಲಶ್ರುತಿ””” ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ರಸ್ತೆ ಕಾಮಗಾರಿಯಲ್ಲಿ ಗೋಲ್ಮಾಲ್..! ತೇಪೆ ಹಚ್ಚಲು ಮುಂದಾದ ಇಂಜಿನಿಯರ್ ಗಳು ಬಿಬಿಎಂಪಿ ಯಿಂದ ಇಂಜಿನಿಯರಿಗಳಿಗೆ ನೋಟಿಸ್ ಜಾರಿ ‌‌‌‌..!!

!!!!!!!!!!!!!!!!!!

….ಪ್ರಧಾನಿ ಮೋದಿ ಭೇಟಿ ಮರುದಿನವೇ ಹಾಳಾದ ರಸ್ತೆ…

ಬೆಂಗಳೂರು: ಮೊನ್ನೆ ಅಂದರೆ ದಿನಾಂಕ 21/ 22 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಮೈಸೂರು-ಬೆಂಗಳೂರು ಪ್ರವಾಸವನ್ನು ಕೈಗೊಂಡಿದ್ದರು. ಈ ಸಮಯದಲ್ಲಿ ಪ್ರಧಾನಿ ಮೋದಿ ಬರುತ್ತಾರೆ ಎನ್ನುವ ಆತುರದಲ್ಲಿ ಸುಮಾರು 23 ಕೋಟಿಯ ವೆಚ್ಚದಲ್ಲಿ ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿ ಹಮ್ಮಿಕೊಂಡಿದ್ದು. ಆ ಕಾಮಗಾರಿಯನ್ನು ಕಳಪೆ ಕಾಮಗಾರಿ ಮಾಡಿ ಕೇವಲ 6 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಉಳಿದ 17 ಕೋಟಿಯನ್ನು ಇಂಜಿನಿಯರ್ ಗಳು ಲೂಟಿ ಹೊಡೆದಿದ್ದರು. ಇದರ ಬಗ್ಗೆ ಪತ್ರಿಕೆ ಚಿತ್ರ ಸಮೇತ ವರದಿ ಮಾಡಿತ್ತು. ಹಾಗೆ ಸಂಬಂಧಪಟ್ಟ ಅಧಿಕಾರಿಗಳ, ಸಚಿವರ ,ಮುಖ್ಯಮಂತ್ರಿಗಳ ,ಗಮನಕ್ಕೂ ತರಲಾಗಿತ್ತು.

ವರದಿಯ ನಂತರ ಎಚ್ಚೆತ್ತ ಇಂಜಿನಿಯರ್ ಗಳಿಂದ ರಸ್ತೆಗೆ ತೇಪೆ ಹಚ್ಚುವ ಕೆಲಸ:

ಪತ್ರಿಕಾ ವರದಿ ಚಿತ್ರಸಮೇತ ಬಂದ ನಂತರ ಎಚ್ಚೆತ್ತುಕೊಂಡ ಇಂಜಿನಿಯರ್ ಗಳು ಗುಂಡಿ ಬಿದ್ದ ರಸ್ತೆಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ.

ಗುಂಡಿಬಿದ್ದ ರಸ್ತೆಗೆ ತೇಪೆ ಹಚ್ಚಿದ ಇಂಜಿನಿಯರ್ ಗಳು ಅದರ ಚಿತ್ರ ಈ ಕೆಳಗಿನಂತಿದೆ:::

ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ:

ಪತ್ರಿಕಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಕಳಪೆ ಕಾಮಗಾರಿಯನ್ನು ಮಾಡಿದ ಇಂಜಿನಿಯರ್ ಗಳಾದ ಆರ್​​.ಆರ್​​​.ನಗರ ಎಕ್ಸಿಕ್ಯೂಟಿವ್​ ಎಂಜಿನಿಯರ್​ ಎಂ.ಟಿ.ಬಾಲಾಜಿ, ಆರ್​​​.ಆರ್​​​.ನಗರದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್​ ಎಂಜಿನಿಯರ್​​ ಹೆಚ್​.ಜೆ.ರವಿ, ಆರ್​​.ಆರ್​​​.ನಗರ ಅಸಿಸ್ಟೆಂಟ್​ ಎಂಜಿನಿಯರ್​​ ಐ.ಕೆ.ವಿಶ್ವಾಸ್​ಗೆ ನೋಟಿಸ್​ ನೀಡಿದೆ.


ಮರಿಯಪ್ಪನ ಪಾಳ್ಯದ ಮುಖ್ಯರಸ್ತೆಯಲ್ಲಿ ರಿಪೇರಿ ಮಾಡಲಾಗಿತ್ತು. ಪ್ರಧಾನಿ ಬಂದು ಹೋದ ಮಾರನೇ ದಿನವೇ ರಸ್ತೆ ಕುಸಿದಿದ್ದು, ಈ ಹಿನ್ನೆಲೆ BBMP ರೋಡ್​ ಇನ್​ಫ್ರಾಸ್ಟ್ರಕ್ಚರ್​​​​ ಚೀಫ್​​ ಎಂಜಿನಿಯರ್​ರಿಂದ ಶೋಕಾಸ್ ನೋಟಿಸ್​ ನೀಡಲಾಗಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಬರುವಿಕೆ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಆತುರದಲ್ಲಿ ರಸ್ತೆ ಕಳಪೆ ಕಾಮಗಾರಿಯಿಂದ ಮಾಡಿದ್ದು . ಕೋಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ. ಇಂಥವರ ವಿರುದ್ಧ ಬರೀ ನೋಟಿಸ್ ನೀಡಿದರೆ ಸಾಲದು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಆ ಮೂಲಕ ಇತರರಿಗೂ ಇದು ಎಚ್ಚರಿಕೆಯ ಗಂಟೆಯಾಗಬೇಕು. ಎನ್ನುವುದು ಪತ್ರಿಕೆಯ ಆಶಯ…

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Shivamogga breaking:ಪಾಲಿಕೆಯ ನಿಷ್ಕ್ರಿಯ ಆಯುಕ್ತೆ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ ಸಾಧ್ಯತೆ..?! 8 ಜನ ಅಧಿಕಾರಿ... ಬೀದಿ ನಾಯಿಗಳ ಸಂತಾನ ಹರಣಕ್ಕೆ ದಿನಾಂಕ ಫಿಕ್ಸ್..! ಇಬ್ಬರು ಮಹಿಳೆಯರು ನಾಪತ್ತೆ..! ಮಿನಿಸ್ಟರ್ ಮಧು ಬಂಗಾರಪ್ಪನವರ ಮಗ ಸೂರ್ಯನ ಸಾಧನೆ..! ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..!