Wednesday, April 30, 2025
Google search engine
Homeರಾಜ್ಯ""ಸ್ಪೋಟಕ ಸುದ್ದಿ'''' ಶಿರವಾಳ ಸತೀಶ್ ಉತ್ತಮ ಕೆಲಸ..! ಮನೆ ತೊರೆದ ಯುವತಿಯರನ್ನು ಸುರಕ್ಷಿತವಾಗಿ ರಕ್ಷಣೆ...

“”ಸ್ಪೋಟಕ ಸುದ್ದಿ”” ಶಿರವಾಳ ಸತೀಶ್ ಉತ್ತಮ ಕೆಲಸ..! ಮನೆ ತೊರೆದ ಯುವತಿಯರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ಡಿವೈಎಸ್ಪಿ ಕಚೇರಿಗೆ ಬಿಟ್ಟು ಸಮಯಪ್ರಜ್ಞೆ ಮೆರೆದ ಸತೀಶ್..!!

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶಿರವಾಳ ವಾಸಿಯಾದ ಸತೀಶ್ ಶಿರವಾಳ ನೆಹರು ಕ್ರೀಡಾಂಗಣದ ಬ್ರಾಸಂ ಬಳಿಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ದಿಢೀರನೇ ಅಡ್ಡ ಹಾಕಿದ ಬೆಂಗಳೂರು ಮೂಲದ ಇಬ್ಬರು ಯುವತಿಯರು ನಮಗೆ ವಸತಿ ವ್ಯವಸ್ಥೆಗಾಗಿ ಬಾಡಿಗೆ ಮನೆಯನ್ನು ಹುಡುಕಿಕೊಡುವಂತೆ ಒತ್ತಾಯ ಮಾಡಿದಾಗ, ಈ ಯುವತಿಯರನ್ನು ವಿಚಾರಣೆ ಮಾಡಿದ ಸತೀಶ್ ಶಿರವಾಳ ರವರು ಈ ಇಬ್ಬರು ಯುವತಿಯರ ವರ್ತನೆ ನೋಡಿ ಅನುಮಾನಗೊಂಡು, ಬನ್ನಿ ವಸತಿ ವ್ಯವಸ್ಥೆ ಮಾಡುತ್ತೇನೆ ಎಂದು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಸೀದಾ ಮಾನ್ಯ DYSP ಕಛೇರಿಗೆ ಕರೆದುಕೊಂಡು ಹೋದರು.

ತಕ್ಷಣವೇ ಸ್ಪಂದನೆ ನೀಡಿದ ಸಾಗರದ DYSP ರೋಹನ್ ಜಗದೀಶ್ ಹಾಗೂ ಸಾಗರ ನಗರ ಪೊಲೀಸ್ ಠಾಣೆಯ ಕೃಷ್ಣಪ್ಪ ಹಾಗೂ DYSP ಕಚೇರಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಸಹ ಸಿಬ್ಬಂದಿಗಳು ಬೆಂಗಳೂರು ಮೂಲದ ಈ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ತಲುಪಿಸುವ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಿದರು.

ಕೂಡಲೇ ಮಾನ್ಯ DYSP ರವರು ಆ ಇಬ್ಬರು ಯುವತಿಯರನ್ನೂ ವಿಚಾರಣೆ ಮಾಡಿ ಬೆಂಗಳೂರು ವಿದ್ಯಾರಣ್ಯ ಪುರಂ ರಲ್ಲಿರುವ ಅವರುಗಳ ತಂದೆ ತಾಯಿಗೆ ವಿಷಯ ತಿಳಿಸಿ, ಬೆಳಿಗ್ಗೆ ಬಂದು ಮಕ್ಕಳನ್ನು ಕರೆದುಕೊಂಡು ಹೋಗುವುದಾಗಿ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮಾಧ್ಯಮ ವರದಿಗಾರರು , ಸಾಮಾಜಿಕ ಹೋರಾಟಗಾರರಾದ ಸತೀಶ್ ಶಿರವಾಳ ರವರ ಸಮಯಪ್ರೆಜ್ಞೆಗೆ ಸಾಗರದ DYSP ರೋಹನ್ ಜಗದೀಶ್ ಹಾಗೂ ಸಾಗರ ನಗರ ಪೊಲೀಸ್ ಅಧಿಕಾರಿಗಳಾದ ಕೃಷ್ಣಪ್ಪ ರವರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆಗಳನ್ನೂ ಸಲ್ಲಿಸಿದರು

ಓಂಕಾರ ಎಸ್. ವಿ. ತಾಳಗುಪ್ಪ….

###################################

ರಘುರಾಜ್ ಹೆಚ್.ಕೆ…9449553305…..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...