
ತೀರ್ಥಹಳ್ಳಿ: ಕ್ಷೇತ್ರದ ಶಿಕ್ಷಣಾಧಿಕಾರಿ ಆಗಿರುವ ಆನಂದ್ ಅವರು ಇದೇ ತಿಂಗಳು ನಿವೃತ್ತಿ ಆಗುತ್ತಿದ್ದು ಕಳೆದ ಮೂರುವರೆ ವರ್ಷಗಳಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಸೇವೆಯನ್ನು ನಿರಂತರವಾಗಿ ಸಲ್ಲಿಸಿರುವುದಕ್ಕಾಗಿ ಆ ಖುಷಿಯನ್ನು ಹಂಚಿಕೊಳ್ಳಲು ತೀರ್ಥಹಳ್ಳಿಯ ಸರ್ಕಾರಿ ನೌಕರರ ಭವನದಲ್ಲಿ ಔತಣ ಕೂಟವನ್ನು ಏರ್ಪಡಿಸಿದ್ದು ಅದಕ್ಕಾಗಿ ಬಹಿರಂಗವಾಗಿ ತಮ್ಮ ಲೆಟರ್ ನಲ್ಲಿ ಸೀಲ್ ಸಿಗ್ನೇಚರ್ ಮಾಡಿ ಕರೆಯೋಲೆ ನೀಡಿದ್ದಾರೆ..
ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಇಂತಹ ಸಂದರ್ಭದಲ್ಲಿ ಒಬ್ಬ ಸರ್ಕಾರಿ ನೌಕರ ಅದರಲ್ಲೂ ಕ್ಷೇತ್ರದ ಶಿಕ್ಷಣ ಅಧಿಕಾರಿ ಇತರ ಬಹಿರಂಗವಾಗಿ ಔತಣಕೂಟಕ್ಕೆ ಆಹ್ವಾನ ನೀಡಿರುವುದು ಎಷ್ಟರಮಟ್ಟಿಗೆ ಸರಿ..?!
ತಮ್ಮ ಸೇವಾ ಅವಧಿಯಲ್ಲಿ ಸಾಕಷ್ಟು ಆರೋಪಗಳನ್ನು ಎದುರಿಸುತ್ತಿದ್ದ ಆನಂದ್ ಕೊನೆಯ ನಿವೃತ್ತಿ ಅಂಚಿನಲ್ಲೂ ಕೂಡ ಎಡವಟ್ಟು ಮಾಡಿಕೊಂಡಿದ್ದಾರೆ.
ಇವರ ಈ ಎಡವಟ್ಟಿಗೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಗೆ ಚುನಾವಣಾ ಅಧಿಕಾರಿಗಳು ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಾರೆ ಕಾದುನೋಡಬೇಕು..
ಒಂದು ವೇಳೆ ಇದನ್ನು ಕ್ಷಮಿಸಿ ಬಿಟ್ಟರೆ ಉಳಿದವರು ಅದೇ ದಾರಿ ಹಿಡಿಯುವ ಸಾಧ್ಯತೆ ಇರುತ್ತದೆ ಎಚ್ಚರ…

ರಘುರಾಜ್ ಹೆಚ್.ಕೆ…9449553305…