
ತೀರ್ಥಹಳ್ಳಿ: ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಇದೇ ತಿಂಗಳು 30 ನೇ ತಾರೀಕು ನಿವೃತ್ತಿ ಹೊಂದುತ್ತಲಿದ್ದು. ಕಳೆದ ಮೂರುವರೆ ವರ್ಷಗಳಿಂದ ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ನಿವೃತ್ತಿ ಖುಷಿಯನ್ನು ಹಂಚಿಕೊಳ್ಳಲು ತೀರ್ಥಹಳ್ಳಿ ಸರ್ಕಾರಿ ನೌಕರರ ಭವನದಲ್ಲಿ ಔತಣಕೂಟಕ್ಕೆ ಬಹಿರಂಗ ಆಹ್ವಾನ ನೀಡಿದ್ದರು.
ಸಾಮಾನ್ಯವಾಗಿ ನಿವೃತ್ತಿ ಹೊಂದುವ ಸರ್ಕಾರಿ ನೌಕರರು ಔತಣಕೂಟವನ್ನು ಏರ್ಪಡಿಸುವುದು ಮಾಮೂಲು ಆದರೆ ಪ್ರಜ್ಞಾವಂತ ತಿಳುವಳಿಕೆ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಆನಂದ್ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಇಂತಹ ಸಂದರ್ಭದಲ್ಲಿ ಔತಣಕೂಟ ಏರ್ಪಡಿಸಬಾರದು ಎನ್ನುವ ಕನಿಷ್ಠ ತಿಳುವಳಿಕೆ ಇಲ್ಲದೆ ಇ ತರ ಔತಣ ಕೂಟ ಏರ್ಪಡಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ನ್ಯೂಸ್ ವಾರಿಯರ್ಸ್ ಸುದ್ದಿ ಪ್ರಕಟಿಸಿತ್ತು.
ಸುದ್ದಿಯ ಬೆನ್ನಲ್ಲೇ ಚುನಾವಣಾ ಆಯೋಗ ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಗೆ ನೋಟಿಸ್ ನೀಡಿದ್ದು .
ತಾವು ಯಾವುದೇ ಅನುಮತಿಯನ್ನು ಪಡೆದುಕೊಳ್ಳದೆ ಔತಣ ಕೂಟವನ್ನು ಏರ್ಪಡಿಸಿರುವುದು ಕಾನೂನು ಬಾಹಿರವಾಗಿದ್ದು ಈ ಕೂಡಲೇ ಇದಕ್ಕೆ ಸಂಬಂಧಪಟ್ಟಂತೆ ಸಮಜಾಯಿಸಿ ನೀಡಲು ತಿಳಿಸಿದೆ ಎಂದು ಚುನಾವಣಾ ಆಯೋಗ ನೋಟಿಸ್ ನೀಡಿದೆ..

ರಘುರಾಜ್ ಹೆಚ್.ಕೆ..9449553305…