
ಬೆಂಗಳೂರು : 2023ರ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಪಕ್ಷಗಳ ಚುನಾವಣೆ ಪ್ರಣಾಳಿಕೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.
ಇದೀಗ ಭಾರತೀಯ ಜನತಾ ಪಾರ್ಟಿ ನಾಳೆ ಅಂದರೆ ಮೇ 1ರಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ,ಪಿ ನಡ್ದಾ ಅವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು.
ಎಲ್ಲರ ಕುತೂಹಲ ಬಿಜೆಪಿಯ ಚುನಾವಣೆ ಪ್ರಣಾಳಿಕೆಯ ಮೇಲಿದೆ:
ರೈತರ ಸಾಲ ಮನ್ನಾ, ಬೆಲೆ ಏರಿಕೆ, ಉದ್ಯೋಗ ಸೃಷ್ಟಿ, ಅರೆಕಾಲಿಕ ನೌಕರರನ್ನು ಖಾಯಂಗೊಳಿಸುವುದು, ಉತ್ತರ ಕರ್ನಾಟಕಕ್ಕೆ ವಿಶೇಷ ಯೋಜನೆಗಳು, ಕಿತ್ತೂರು ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಹೀಗೆ ಹತ್ತು ಹಲವು ಹೊಸ ಜನಪರ ಯೋಜನೆಗಳು ಬಿಜೆಪಿ ಪ್ರಣಾಳಿಕೆಯಲ್ಲಿ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ…
ಬೆಲೆ ಏರಿಕೆ ,ಉದ್ಯೋಗ ಸೃಷ್ಟಿ ಅಂತಹ ಸಮಸ್ಯೆಗಳಿಂದ ಆಡಳಿತ ಬಿಜೆಪಿ ಸರ್ಕಾರ ಪ್ರಬಲ ವಿರೋಧ ಅನುಭವಿಸುತ್ತಿದೆ. ಅದರಿಂದ ಹೊರಬರಲು ಬೆಲೆ ಏರಿಕೆ ಕಡಿಮೆ ಮಾಡುವುದು ಉದ್ಯೋಗ ಸೃಷ್ಟಿ ಮಾಡುವುದು ರೈತಪರ ಯೋಜನೆಗಳನ್ನು ಜಾರಿಗೊಳಿಸುವ ಅನಿವಾರ್ಯತೆಯಲ್ಲಿ ಆಡಳಿತ ಬಿಜೆಪಿ ಸರ್ಕಾರ ಇದೆ.
ಹಾಗಾಗಿ ನಾಳಿನ ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ರೈತ ಪರ ಯೋಜನೆಗಳು ಬೆಲೆ ಇಳಿಕೆ, ಉದ್ಯೋಗ ಸೃಷ್ಟಿ, ಅರೆಕಾಲಿಕ ನೌಕರರನ್ನು ಖಾಯಂಗೊಳಿಸುವುದು ಇನ್ನಿತರ ಮಹತ್ತರ ಯೋಜನೆಗಳು ಪ್ರಣಾಳಿಕೆಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ..
ರಘುರಾಜ್ ಹೆಚ್.ಕೆ..9449553305…