
ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿಕೆ..
ಮಾರ್ಚ್ 1 ರಂದು ರಾಜ್ಯ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.
7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿ ಅವಲೋಕನ ಮಾಡುವುದಾಗಿ ಸಿಎಂ ಹೇಳಿದ್ದಾರೆ.ರಾಜ್ಯ ಸರ್ಕಾರ ಈ ವಿಷಯದಲ್ಲಿ ಒಳ್ಳೆಯ ನಿರ್ಧಾರ ಕೈಗೊಂಡಿಲ್ಲ.
ಶೇಕಡ 39 ಸರ್ಕಾರಿ ಹುದ್ದೆ ಖಾಲಿ ಇದೆ . ವರ್ಷಕ್ಕೆ ಸುಮಾರು 11 ಸಾವಿರ ಕೋಟಿ ಹಣ ಉಳಿತಾಯ ಆಗುತ್ತದೆ.
ಸುಮಾರು 6 ಲಕ್ಷ ರಾಜ್ಯ ಸರ್ಕಾರ ನೌಕರರು ಸಿಎಂ ನಿರ್ಧಾರದಿಂದ ಸಿಎಂ ಬೇಸರಗೊಂಡಿದ್ದಾರೆ.
ವೇತನ ಪರಿಷ್ಕರಣೆಗೆ ಸಂಬಂಧಿಸಿದ ಮಧ್ಯಂತರ ವರದಿ ಪಡೆದು
ಏಳನೇ ವೇತನ ಆಯೋಗ ಶೀಘ್ರವಾಗಿ ಜಾರಿ ಮಾಡಬೇಕು.
ಶೇಕಡ 40 ರಷ್ಟು ಹೆಚ್ಚಳ ಸೌಲಭ್ಯವನ್ನು ಸರ್ಕಾರಿ ಆದೇಶವಾಗಿ ಹೊರಡಿಸಿ ಅನುಷ್ಠಾನಗೊಳಿಸಬೇಕು.
ಪಂಜಾಬ್, ರಾಜಸ್ಥಾನ ,ಛತ್ತೀಸ್ಗಡ ,ಜಾರ್ಖಂಡ್ ,ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ NPS ರದ್ದುಗೊಳಿಸಿ OPS ಯೋಜನೆ ಜಾರಿಗೊಳಿಸಬೇಕು.
ನಮ್ಮ ಬೇಡಿಕೆ ಈಡೇರಿಕೆಗೆ ಬಗ್ಗೆ ಸರ್ಕಾರದ ತೀರ್ಮಾನದ ಪ್ರತಿ ಲಭಿಸಿದರೆ ಮುಷ್ಕರ ವಾಪಸ್ ಬಗ್ಗೆ ಚಿಂತನೆ ನಡೆಸಲಾಗುವುದು..
ಸರ್ಕಾರಕ್ಕಾಗಿ ದುಡಿಯುವ ನೌಕರರನ್ನು ಸರ್ಕಾರ ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕು..
ಆರೋಗ್ಯ, ಶಿಕ್ಷಣ, ಕಂದಾಯ, ಪಂಚಾಯತ್ ರಾಜ್ ಸೇರಿದಂತೆ ಎಲ್ಲಾ ಇಲಾಖೆಯ ನೌಕರರು ಕೂಡ ಮುಷ್ಕರಕ್ಕೆ ಇಳಿಯುತ್ತಾರೆ,.
ವಿಧಾನಸೌಧದಲ್ಲೂ ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ.. ಎಂದು ಇಂದು ನಗರದ ಸರ್ಕಾರಿ ನೌಕರರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು…

ರಘುರಾಜ್ ಹೆಚ್.ಕೆ..9449553305…