Friday, June 20, 2025
Google search engine
Homeಶಿವಮೊಗ್ಗಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್..! ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆ ಕೇರಿಗೆ ಅನಿರೀಕ್ಷಿತ ಭೇಟಿ..!!...

ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್..! ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೆ ಕೇರಿಗೆ ಅನಿರೀಕ್ಷಿತ ಭೇಟಿ..!! ಭೇಟಿಯ ಸಮಯದಲ್ಲಿ ಒಬ್ಬ ವಿದ್ಯಾರ್ಥಿಯ ಮಾತಿಗೆ ಬೆರಗಾದ ಕಿಮ್ಮನೆ..! ಹಾಗಾದರೆ ಆ ಹುಡುಗ ಹೇಳಿದ್ದೇನು..?

ತೀರ್ಥಹಳ್ಳಿ : ರಾಜ್ಯ ಸರ್ಕಾರದ ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆ‌‌ಯ ಮಾಜಿ ಸಚಿವರು, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕರು ಆದ,‌
ಕಿಮ್ಮನೆ ರತ್ನಾಕರ್ ‌.‌ಇಂದು ಸಂಜೆ 4 ಗಂಟೆಯ ಸಮಯದಲ್ಲಿ ಗುಡ್ಡೇಕೇರಿ ಪ್ರೌಢಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದರು,

ನಂತರ ಮಕ್ಕಳು, ಶಿಕ್ಷಕರ‌ ಜೊತೆಗೆ ‌ಮಾತಾನಾಡಿ, ಮಕ್ಕಳಿಗೆ ಕಲಿಕೆಯ ಬಗ್ಗೆ ಕಿವಿ ಮಾತು ಹೇಳಿ ಅವರ ಭವಿಷ್ಯಕ್ಕೆ‌‌ ಶುಭ ಹಾರೈಸಿದರು.‌

ಇತ್ತೀಚಿನ ವರ್ಷಗಳಲ್ಲಿ ‌ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಸಮಗ್ರ ಅಭಿವೃದ್ಧಿಯ ಬದಲಾವಣೆ, ರಾಜ್ಯದ ಅನೇಕ‌ ಶಾಲೆಗಳಿಗೆ ಮಾದರಿಯಾಗಿದ್ದು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು..‌ಈ ವರ್ಷ ಎಸ್ ಎಸ್ ಎಲ್ ಸಿ 100 % ಫಲಿತಾಂಶ ಗಳಿಸಿದ್ದಕ್ಕಾಗಿ ಎಲ್ಲಾ ಮಕ್ಕಳಿಗೂ, ಶಿಕ್ಷಕರಿಗೂ ಅಭಿನಂದನೆಗಳನ್ನು ತಿಳಿಸಿ ಪ್ರಶಂಸೆಯನ್ನು ತಿಳಿಸಿದರು..‌

ಮಾಜಿ ಸಚಿವರಿಗೆ ಶಾಲಾ ಕ್ಯಾಲೆಂಡರ್ ಪುಸ್ತಕ ನೀಡಿ ಗೌರವ :

ಶಾಲೆಯ ಪರವಾಗಿ, ಶಾಲಾ ಕ್ಯಾಲೆಂಡರ್ & ಪುಸ್ತಕ ನೀಡಿ ಗೌರವ ಸಲ್ಲಿಸಲಾಯಿತು.. ‌

ಈ ಸಮಯದಲ್ಲಿ ಕೆಸ್ತೂರು ಮಂಜುನಾಥ್, ಹಸಿರುಮನೆ ಮಹಾಬಲೇಶ್, ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ, ಎಲ್ಲಾ‌ ಶಿಕ್ಷಕರು ಹಾಜರಿದ್ದರು.. ‌‌

ಮಗುವಿನ ನೆನಪಿನ ಶಕ್ತಿ ನೋಡಿ ಮುಖ ವಿಸ್ಮಿತರಾದ ಮಾಜಿ ಸಚಿವರು :

ಕೊನೆಯಲ್ಲಿ ಮಕ್ಕಳ ಪರವಾಗಿ ಮಾತಾನಾಡಿದ ಶಮಂತ್ ಎನ್ನುವ 8 ನೇ ತರಗತಿಯ ಹುಡುಗ, ಕಿಮ್ಮನೆ ರತ್ನಾಕರ್ ಅವರನ್ನು ಕುರಿತು ನೀವು ನಮ್ಮ ಅಜ್ಜ ಸತ್ತಾಗ ನಮ್ಮ ಮನೆಗೆ ಬಂದು, ನಮಗೆ ಹಣದ ಸಹಾಯ ಮಾಡಿದ್ದೀರಿ ನಾನು ಆ ಸಮಯದಲ್ಲಿ 5 ನೇ ತರಗತಿ ಓದುತ್ತಿದ್ದೆ ಎಂದಾಗ.. ಕಿಮ್ಮನೆ ಅವರು ಸೇರಿದಂತೆ, ಇಡೀ ಸಭೆಯ ಮೂಕ ವಿಸ್ಮಯ ವಾಯಿತು, ನಂತರ ಕಿಮ್ಮನೆಯವರು ಆ ಮಗುವಿನ ನೆನಪಿನ ಶಕ್ತಿ & ಸ್ಮರಣೆಯನ್ನು ಪ್ರಶಂಸಿಸದರು..‌

ಕೊನೆಯಲ್ಲಿ ಮಕ್ಕಳು ಸುತ್ತುವರೆದು ಗೌರವ ವಂದನೆಗಳನ್ನು ಸಲ್ಲಿಸಿದರು….

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಶಿವಮೊಗ್ಗದ 353 ಜನ ರೌಡಿಗಳಿಗೆ ರಿಲೀಫ್..! ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ..! ಸಂಕಷ್ಟದಲ್ಲಿ ಕಾಂತಾರ ಚಿತ್ರತಂಡ ಮತ್ತೊಂದು ಆಘಾತ..! Big news:ಅಚ್ಚರಿ ಮೂಡಿಸಿದ ಈಶ್ವರಪ್ಪ ನಡೆ ಪರಸ್ಪರ ಮಾತುಕತೆ ನಡೆಸಿದ ಬಿಎಸ್ ವೈ ‌ ಕುಟುಂಬ ಹಾಗೂ ಈಶ್ವರಪ್ಪ ಕುಟುಂಬ..... Shivamogga breaking: ಮಹಾನಗರ ಪಾಲಿಕೆಯ ಕಮಿಷನರ್ ಡಾ/ ಕವಿತಾ ಯೋಗಪ್ಪನವರ್ ಎತ್ತಂಗಡಿ..! ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?! ಜೆ ಸಿ ಆಸ್ಪತ್ರೆಯ ಹಿ ಪ್ರ ಶಾಲಾ ತಂತ್ರಜ್ಞಾಧಿಕಾರಿ ದೇವಪ್ರಸಾದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮೇಗರವಳ್ಳಿಯ ಹಿ ಪ್ರಾ ಆ ಸುರಕ್ಷಾಧಿಕಾರಿ ನೀಲಮ್ಮನವರಿಗೆ ಆತ್ಮೀಯ ಬೀಳ್ಕೊಡುಗೆ..! ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯರಿಗೆ ಅದ್ದೂರಿ ಸನ್ಮಾನ..! ಮೇಗರವಳ್ಳಿಯಲ್ಲಿ ವಿಶೇಷ ಸಾಧಕ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ --!