
ತೀರ್ಥಹಳ್ಳಿ: ಇಂದು ಆನಂದ್ ಕುಮಾರ್ ಅವರ ವಯೋನಿವೃತ್ತಿಯಿಂದ ತೆರೆವಾದ ಹುದ್ದೆಗೆ, ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಜ್ಞಾನ ಮಯ ಅನುಭವವುಳ್ಳ, ಜೊತೆಗೆ ಮೃದು ಸ್ವಭಾವದ, ಮುಖ್ಯ ಶಿಕ್ಷಕರಾದ ಸಮಯದಲ್ಲಿ ಅನೇಕ ಶೈಕ್ಷಣಿಕ ಬದಲಾವಣೆಗೆ ಕಾರಣರಾಗಿರುವ ಗಿರಿರಾಜ್ ಅವರು ನೂತನ ಕ್ಷೇತ್ರ ಶಿಕ್ಷಣ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವುದು.. ತೀರ್ಥಹಳ್ಳಿ ತಾಲ್ಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ ..
ಗಿರಿರಾಜ್ ಜಿ ಕೆ ಮೂಲತಃ ತೀರ್ಥಹಳ್ಳಿಯ ವಾಸಿಯಾಗಿದ್ದು ..
1999 ರ, ಕೆ ಇ ಎಸ್ ಅಧಿಕಾರಿಯಾಗಿದ್ದಾರೆ…
ಮುಖ್ಯ ಶಿಕ್ಷಕರಾಗಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಣೆ ಮಾಡಿದ್ದಾರೆ..
ನಾಲ್ಕು ವರ್ಷಗಳ ಯಶಸ್ವಿ ಸೇವೆ ಸಲ್ಲಿಸಿದ ಹಿಂದಿನ ಬಿ ಇ ಓ ಆನಂದ್ ಕುಮಾರ್ ಅವರಿಗೆ ಬೀಳ್ಕೊಟ್ಟು ಇಂದು ಗಿರಿರಾಜ್ ಅಧಿಕಾರ ಸ್ವೀಕಾರ ಮಾಡಿದರು..
ಅಪಾರ ಸ್ನೇಹ ಬಳಗ, ಅಭಿಮಾನಿಗಳು, ಹಿತೈಷಿಗಳು,ಮುಖ್ಯ ಶಿಕ್ಷಕರು/ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ..

ರಘುರಾಜ್ ಹೆಚ್.ಕೆ..9449553305…