Wednesday, April 30, 2025
Google search engine
Homeರಾಜ್ಯದಿವಂಗತ ಹರ್ಷನ ಅಕ್ಕ ಅಶ್ವಿನಿ ಆಕ್ರೋಶ ಸರಿಯಾಗಿದೆ..! ಆದರೆ ಗೃಹ ಸಚಿವರ ಉತ್ತರ ಕೇಳುವ ತಾಳ್ಮೆ...

ದಿವಂಗತ ಹರ್ಷನ ಅಕ್ಕ ಅಶ್ವಿನಿ ಆಕ್ರೋಶ ಸರಿಯಾಗಿದೆ..! ಆದರೆ ಗೃಹ ಸಚಿವರ ಉತ್ತರ ಕೇಳುವ ತಾಳ್ಮೆ ಇರಬೇಕಾಗಿತ್ತು ಅಷ್ಟೇ..! ಹಾಗಾದರೆ ಅಸಲಿಗೆ ಗೃಹ ಸಚಿವರು ಹಾಗೂ ಅಶ್ವಿನಿ ನಡುವೆ ನಡೆದದ್ದೇನು ..? ಘಟನೆಯ ನಂತರ ಹರ್ಷನ ಕುಟುಂಬಕ್ಕೆ ಗೃಹ ಸಚಿವರು ಏನು ಹೇಳಿದರು..?

ಶಿವಮೊಗ್ಗ: ನಗರದಲ್ಲಿ ಇತ್ತೀಚೆಗೆ ಬಾರಿ ಸಂಚಲನ ಉಂಟುಮಾಡಿದ್ದ ಹಿಂದೂ ಯುವಕ ಹರ್ಷನ ಹತ್ಯೆ ದೇಶಾದ್ಯಂತ ಸುದ್ದಿ ಮಾಡಿತ್ತು. ಇಡೀ ಸರ್ಕಾರ ಹರ್ಷನ ಕುಟುಂಬದ ಬೆಂಬಲಕ್ಕೆ ನಿಂತಿತ್ತು.

ಸರ್ಕಾರದ ವತಿಯಿಂದ 25 ಲಕ್ಷ ರೂಗಳನ್ನು ನೇರವಾಗಿ ಹರ್ಷನ ಕುಟುಂಬಕ್ಕೆ ನೀಡಲಾಗಿತ್ತು.

ಇದಕ್ಕೆ ಎಡಪಂಥೀಯರಿಂದ ಹಾಗೂ ವಿವಿಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಬಿಜೆಪಿ ,ಬಜರಂಗದಳ, ಸ್ವಾಮೀಜಿಗಳು, ಆರ್ ಎಸ್ ಎಸ್ ನವರು, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಸಹ ಹರ್ಷನ ಕುಟುಂಬಕ್ಕೆ ಸಮಾಧಾನ ಪಡಿಸುವುದರ ಜೊತೆಗೆ ಆರ್ಥಿಕ ಸಹಾಯವನ್ನು ಮಾಡಿದ್ದರು:

ಬಾರಿ ಸಂಚನವನ್ನುಂಟು ಮಾಡಿದ್ದ ಈ ಪ್ರಕರಣದಲ್ಲಿ ಹರ್ಷನ ಹತ್ಯೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿ ಜೈಲಿಗೆ ಕಳುಹಿಸಿದರು.

ಜೈಲಿನಲ್ಲಿ ಮುದ್ದೆ ಮುರಿಯುವ ಬದಲು ಮೊಬೈಲ್ ನಲ್ಲಿ ವಿಡಿಯೋ ಚಾಟ್ ಮಾಡುತ್ತಿದ್ದ ಹಂತಕರು :

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಹರ್ಷನ ಹತ್ಯೆ ಆರೋಪಿಗಳು ಜೈಲಿನಲ್ಲಿ ಬಿಂದಾಸಾಗಿ ಓಡಾಡಿಕೊಂಡು ಮನೆಯವರ ಜೊತೆಯಲಿ ವಿಡಿಯೋ ಚಾಟ್ ಮಾಡಿಕೊಂಡು ಕಾಲ ಕಳೆಯುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಕೈದಿಗಳು ಆರಾಮಾಗಿ ಇರುವ ಬಗ್ಗೆ ವಿಡಿಯೋ ನೋಡಿದ ಹರ್ಷ ಕುಟುಂಬದಲ್ಲಿ ಆಕ್ರೋಶ :

ಜೈಲ್ ನಲ್ಲಿ ಶಿಕ್ಷೆ ಅನುಭವಿಸಬೇಕಾದ ಹಂತಕರು ಆರಾಮಾಗಿ ವಿಡಿಯೋ ಚಾಟ್ ಮಾಡಿಕೊಂಡಿರುವುದನ್ನು ನೋಡಿದ ಪ್ರತಿಯೊಬ್ಬರಲ್ಲೂ ಸರ್ಕಾರದ ಬಗ್ಗೆ ಆಡಳಿತದ ವೈಖರಿ ಬಗ್ಗೆ ಬೇಸರ ಮೂಡಿಸಿತ್ತು. ಹರ್ಷ ಕುಟುಂಬದಲ್ಲೂ ಕೂಡ ಆಕ್ರೋಶ ವ್ಯಕ್ತವಾಗಿತ್ತು.

ಗೃಹ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ ಹರ್ಷನ ಅಕ್ಕ ಅಶ್ವಿನಿ:


ತಮ್ಮನ ಹತ್ಯೆ ಮಾಡಿದ ಹಂತಕರು ಆರಾಮಾಗಿ ಜೈಲಿನಲ್ಲಿ ಇದ್ದುಕೊಂಡು ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಇರುವುದನ್ನು ನೋಡಿ ಕೆರಳಿದ ಹರ್ಷನ ಅಕ್ಕ ಅಶ್ವಿನಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ಬಳಿ ತಮ್ಮನ ಕೊಲೆಗೆ ನ್ಯಾಯ ಬೇಕು ಎಂದು ಕೇಳಲು ಹೋಗಿದ್ದಾರೆ.

ಗೃಹ ಸಚಿವರ ಮಾತನ್ನು ಸಮಾಧಾನದಿಂದ ಕೇಳದೆ ಆಕ್ರೋಶ ಹೊರಹಾಕುತ್ತಾ ಹೊರ ನಡೆದ ಹರ್ಷನ ಅಕ್ಕ ಅಶ್ವಿನಿ :

ಗೃಹ ಸಚಿವ ಆರಗ ಜ್ಞಾನೇಂದ್ರ : ಹರ್ಷನ ಕೊಲೆಯಾಗಿರುವುದು ನಿಮಗಷ್ಟೇ ನೋವು ತಂದಿಲ್ಲ ನಮಗೂ ಕೂಡ ನೋವು ತಂದಿದೆ. ಆದರೆ ಈ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಸರಿ ಮಾಡುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಸ್ವಲ್ಪ ತಾಳ್ಮೆಯಿಂದ ಇರಿ ಜೈಲಿನಲ್ಲಿ ಅವರಿಗೆ ಸಹಕರಿಸಿದ ಎಲ್ಲರಿಗೂ ಶಿಕ್ಷೆ ಕಾದಿದೆ. ಹಾಗೆ ಕೊಲೆ ಮಾಡಿದ ಆರೋಪಿಗಳಿಗೂ ಕೂಡ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ. ನಮ್ಮ ಇಡೀ ಸರ್ಕಾರ ನಿಮ್ಮ ಜೊತೆ ಇದೆ ಮುಂದೆ ಕೂಡ ಇರುತ್ತದೆ ಯಾವುದೇ ಕಾರಣಕ್ಕೂ ಭಯ ಬೇಡ ಇದನ್ನು ನೀವು ಫೋನಿನಲ್ಲೇ ಮಾತನಾಡಬಹುದಿತ್ತು. ಎಂದು ಸಮಾಧಾನದಿಂದ ಉತ್ತರಿಸುತ್ತಿದ್ದ ಗೃಹ ಸಚಿವರು ಪದೇ ಪದೇ ಕೇಳಿದ್ದೆ ಕೇಳುತ್ತಿದ್ದ ಹರ್ಷನ ಅಕ್ಕ ಅಶ್ವಿನಿ ಇದ್ದಕ್ಕಿದ್ದ ಹಾಗೆ ಆಕ್ರೋಶಗೊಂಡು ಅಲ್ಲಿಂದ ಆಚೆಗೆ ಬಂದು ಆಕ್ರೋಶ ಬರಿತರಾಗಿ,

ಥ್ಯಾಂಕ್ಯು ಸೋ ಮಚ್​ ಸರ್, ಎಲ್ಲೂ ನ್ಯಾಯ ಸಿಗೋದಿಲ್ಲ ಎಂಬುದು ಇವತ್ತು ಗೊತ್ತಾಯ್ತು. ನ್ಯಾಯ ಕೇಳಿದ್ದೆ ತಪ್ಪಾ, ನ್ಯಾಯ ಕೇಳಿದ್ರೆ ಜೋರು ಮಾಡಿ ಕಳಿಸಿದ್ದಾರೆ ಎಂದು ವಿಡಿಯೋವೊಂದರ ಮುಂದೆ ಹೇಳಿಕೊಂಡು ಬಂದಿದ್ದಾರೆ.

ಹರ್ಷನ ಅಕ್ಕ ಅಶ್ವಿನಿ ಆಕ್ರೋಶವೇನು ಸರಿಯಾಗಿದೆ ಆದರೆ ಗೃಹ ಸಚಿವರು ಹೇಳುತ್ತಿದ್ದ ಸಮಾಧಾನದ ಮಾತುಗಳನ್ನು ಕೇಳುವ ತಾಳ್ಮೆ ಇರಬೇಕಿತ್ತು ಅಷ್ಟೇ. ಏಕೆಂದರೆ ಇಡೀ ಸರ್ಕಾರ ಹರ್ಷನ ಕುಟುಂಬದ ಜೊತೆ ಇದ್ದಾಗ ಈ ತರಹ ಇದ್ದಕ್ಕಿದ್ದ ಹಾಗೆ ಆಕ್ರೋಶಗೊಳ್ಳಲು ಕಾರಣವೇನು? ಪರಪ್ಪನ ಅಗ್ರಹಾರದ ಕರ್ಮಕಾಂಡ ಇವತ್ತು ನಿನ್ನೆಯದಲ್ಲ ಮುಂಚಿನಿಂದಲೂ ಅಲ್ಲಿ ವ್ಯವಸ್ಥಿತ ಜಾಲವೊಂದು ಈ ತರದ ಕೆಲಸವನ್ನು ಮಾಡುತ್ತಿದೆ. ಇದು ಸೂಕ್ತ ತನಿಖೆ ಆಗಬೇಕು ಸಂಬಂಧಪಟ್ಟ ಅಧಿಕಾರಿಗಳು ವಜಗೊಳ್ಳಬೇಕು. ಇಡಿ ಜೈಲಿಗೆ ಜಾಮರ್ ಅಳವಡಿಸಬೇಕು. ಈ ತರಹ ಮರುಕಳಿಸದಂತೆ ಎಚ್ಚರ ವಹಿಸಬೇಕು. ಆರೋಪಿಗಳನ್ನು ಬೇರೆ ಸೆಲ್ ನಲ್ಲಿ ಇಡಬೇಕು ಸಾಧ್ಯವಾದರೆ ಇತರ ಜಿಲ್ಲೆಗಳಿಗೆ ಅವರನ್ನು ವರ್ಗಾವಣೆ ಮಾಡಬೇಕು. ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು.

ತಮ್ಮ ವಿರುದ್ಧವೇ ಮಾತನಾಡಿದ್ದರು ಕೂಡ ಹರ್ಷನ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ :

ಹರ್ಷನ ಕುಟುಂಬ ಒಂದಷ್ಟು ಸಮಾಧಾನದಿಂದ ಇರಬೇಕು ನ್ಯಾಯ ಖಂಡಿತ ಸಿಗುತ್ತದೆ ಎನ್ನುವುದು ಆಡಳಿತ ಪಕ್ಷ ಬಿಜೆಪಿಯ ಮುಖಂಡರುಗಳು ಹಾಗೂ ಗೃಹ ಸಚಿವರ ಭರವಸೆಯ ಮಾತುಗಳು. ತಮ್ಮ ವಿರುದ್ಧವೇ ಆಕ್ರೋಶವನ್ನು ಹೊರಹಾಕಿದ್ದರು ಕೂಡ ಇಡೀ ಕುಟುಂಬಕ್ಕೆ ಸಮಾಧಾನ ಇರಿ ಖಂಡಿತ ನಿಮಗೆ ಅನ್ಯಾಯವಾಗಲೂ ಬಿಡುವುದಿಲ್ಲ ಇಡಿ ಸರ್ಕಾರ ನಿಮ್ಮ ಜೊತೆಗೆ ಇರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಖಂಡಿತ ಶಿಕ್ಷೆ ಆಗುತ್ತದೆ. ಇದರಲ್ಲಿ ಅನುಮಾನ ಬೇಡ ಎನ್ನುವ ಸಮಾಧಾನದ ಮಾತುಗಳನ್ನು ಪತ್ರಿಕೆಯ ಮೂಲಕ ದಿವಂಗತ ಹರ್ಷನ ಕುಟುಂಬಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ…

ರಘುರಾಜ್ ಹೆಚ್.ಕೆ…9449553305….

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ..! ಬಾಲ್ಯ ವಿವಾಹದ ಆತಂಕ..! ಕರ್ನಾಟಕ ಕಾರ್ಮಿಕ ಚಳುವಳಿಯ ಮುಂಚೂಣಿ ನಾಯಕ ಹಾಗೂ ಬಿಎಂಎಸ್ ಸಂಸ್ಥಾಪನೆಯ ಶ್ರೇಷ್ಠ ಶಿಲ್ಪಿಗಳಲ್ಲೊಬ್ಬರಾದ ಶ್ರೀ ಡಿ.ಕೆ.... ಗ್ರಾಮ ಪಂಚಾಯಿತಿಗಳ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟ..! ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಸಾವು ಇತಿಹಾಸದ ಪುಟದಲ್ಲಿ ದಾಖಲು...!ಕಾಶ್ಮೀರದಲ್ಲಿ ಮಂಜುನಾಥ್ ಸೇರಿದಂತೆ ಸತ್ತ ಜನರ... ಮಾಜಿ ಸಚಿವ ಬೇಗಾನೆ ರಾಮಯ್ಯ ಇನ್ನಿಲ್ಲ...! ತೀರ್ಥಹಳ್ಳಿ : ಹೊನ್ನೆತಾಳು ಹುಡುಗಿ ಕಾಣೆಯಾಗಿದ್ದಾಳೆ..! ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಕೊಲೆ..! ಪತ್ನಿಯಿಂದಲೇ ಹತ್ಯೆಯಾದ ನಿವೃತ್ತ ಡಿಜಿ ಐಜಿಪಿ ಆಗಿದ್ದ ... ನಿಲ್ಲದ ಜನಿವಾರದ ಜಗಳ..ಸಾಗರದಲ್ಲೂ ಜನಿವಾರ ಕಟ್..ಬ್ರಾಹ್ಮಣ ಮಹಾಸಭಾ ವತಿಯಿಂದ ಪ್ರತಿಭಟನೆ...! ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ದಲಿತ ವಿದ್ಯಾರ್ಥಿನಿ ನೇಣಿಗೆ ಶರಣು..! Big news: ಹಾಡೋನಹಳ್ಳಿ ಮರಳು ದಂಧೆ ಮೇಲೆ ಮುಗಿಬಿದ್ದ ಎಸಿ ತಂಡ..!ಎಂಟು ಟ್ರ್ಯಾಕ್ಟರ್, ನಾಲ್ಕು ಜೆಸಿಬಿ ಮೇಲೆ ಕೇಸ್ ದಾ...